ಅಕ್ರಮ ಸಂಬoಧ ಉಳಿಸಿಕೊಳ್ಳುವುದಕ್ಕಾಗಿ ಕೊಲೆ ಮಾಡುವುದರ ಮಟ್ಟಕ್ಕೆ ಇಳಿದಿದ್ದ ಸಿದ್ದಾಪುರ ಕಮಲಾಕರ ಹೆಗಡೆ ಹೆಚ್ಚಿಗೆ ಓದಿದವರಲ್ಲ. ಅವರಿವರ ಕಾಲು ಹಿಡಿದು ಟಿವಿ ವೇದಿಕೆಗಳಲ್ಲಿ ಅವಕಾಶಪಡೆದಿದ್ದ ಕಮಲಾಕರ ಹೆಗಡೆ ಭಕ್ತರನ್ನು ಯಾಮಾರಿಸಿಯೇ ದುಡ್ಡು ಮಾಡಿಕೊಂಡಿದ್ದು, ನಂತರ ದಾನ-ಧರ್ಮದ ಹೆಸರಿನಲ್ಲಿ ಹಾಳಾದ ಹೆಸರು ಸರಿ ಮಾಡಿಕೊಳ್ಳಲು ಪ್ರಯತ್ನಿಸಿದ ವಿಷಯ ಗುಟ್ಟಾಗಿ ಉಳಿದಿಲ್ಲ.
ಅಲ್ಲಿ-ಇಲ್ಲಿ ಅಲೆದಾಡುಕೊಂಡಿದ್ದ ಕಮಲಾಕರ ಹೆಗಡೆ ಊರು ಬಿಟ್ಟು ನಂತರ ಟಿವಿಯಲ್ಲಿ ಕುಳಿತು ಜ್ಯೋತಿಷ್ಯ ಹೇಳಲು ಶುರು ಮಾಡಿದ್ದು, `ಹೆಗಡೆ’ ಎಂಬ ಹೆಸರು ತೆಗೆದು `ಗುರೂಜಿ’ಯಾಗಿಸಿಕೊಂಡಿದ್ದರು. ಗುರೂಜಿ ಎಂಬ ಪದವೇ ಅವರ ವ್ಯವಹಾರದ ಗುಟ್ಟಾಗಿದ್ದು, ಅನೇಕರು ಕಾಲಿಗೆ ಬಿದ್ದು ನಮಸ್ಕಾರ ಮಾಡುತ್ತಿದ್ದರು. ಕಾಲಿಗೆ ಬಿದ್ದ ದೊಡ್ಡ ದೊಡ್ಡ ವ್ಯಕ್ತಿಗಳ ಜೊತೆ ಫೋಟೋ ತೆಗೆಸಿಕೊಳ್ಳುವ ಕಮಲಾಕರ ಗುರೂಜಿ ಅದನ್ನು ವಿವಿಧ ಕಡೆ ಹಂಚಿಕೊoಡು ತಮ್ಮ ವ್ಯವಹಾರ ವಿಸ್ತರಿಸಿದ್ದರು. ಸದ್ಯ ಕಚೇರಿ ಕೆಲಸದಾಕೆಯ ಮೋಹಕ್ಕೆ ಒಳಗಾಗಿದ್ದ ಕಮಲಾಕರ ಹೆಗಡೆ ಆಕೆಯ ಮೇಲಿನ ಪ್ರೀತಿ ಸಾಭೀತುಪಡಿಸಿಕೊಳ್ಳುವುದಕ್ಕಾಗಿ ತೆರಳಿ ಜೈಲು ಸೇರಿದ್ದಾರೆ. ರಾಜಕೀಯ ವ್ಯಕ್ತಿಗಳ ಜೊತೆ ಕಮಲಾಕರ ಹೆಗಡೆ ಅವರ ಒಡನಾಟದ ಫೋಟೋಗಳು ವೈರಲ್ ಆಗಿದ್ದು, ರಾಜಕಾರಣಿಗಳಿಗೆ ಸಹ ಈ ಚಿತ್ರಗಳು ಮುಜುಗರ ತರುಸಿದೆ.
15 ವರ್ಷಗಳ ಹಿಂದೆ ಕಮಲಾಕರ ಹೆಗಡೆ ಬಳಿ ಏನೂ ಇರಲಿಲ್ಲ. ಗುರುಜಿ ಆಗಿ ಬದಲಾದ ನಂತರ ಕಾರು, ಬಂಗಲೆ, ಕಚೇರಿ ಜೊತೆ ಕೆಲಸದಾಕೆಯೂ ಒಲಿದಿದ್ದಳು. ಸಿದ್ದಾಪುರ ತಾಲೂಕಿನ ಸೋವಿನಕೊಪ್ಪ ಬಡ ಕುಟುಂಬದಲ್ಲಿ ಹುಟ್ಟಿದ್ದ ಕಮಲಾಕರ ಹೆಗಡೆ ಪ್ರಾಥಮಿಕ, ಪ್ರೌಢ ಶಿಕ್ಷಣ ಕಲಿತ ನಂತರ ಕೆಲಕಾಲ ಸಿದ್ದಾಪುರದಲ್ಲೇ ಓಡಾಡಿಕೊಂಡಿದ್ದರು. ನಂತರ ಕೇರಳಕ್ಕೆ ತೆರಳಿ ಜ್ಯೋತಿಷ ಕಲಿತಿದ್ದರು, 2010ರಲ್ಲಿ ಬೆಂಗಳೂರಿಗೆ ತೆರಳಿ ಕಚೇರಿ ತೆರೆದ ಅವರು ವಿವಿಧ ವಾಹಿನಿಗಳಲ್ಲಿ ಜ್ಯೋತಿಷ ಕಾರ್ಯಕ್ರಮ ನೀಡಲು ಶುರು ಮಾಡಿದರು. ಜೊತೆಗೆ ಬೆಂಗಳೂರಿನ ಇನ್ನಿತರ ಕಡೆ ಕಚೇರಿ ಶುರು ಮಾಡಿದ್ದರು. ಶಿವಮೊಗ್ಗದಲ್ಲಿಯೂ ಕಚೇರಿ ತೆರೆದು ಕೆಲಸಗಾರರನ್ನು ನೇಮಿಸಿದ್ದರು.
ಕಮಲಾಕರ ಹೆಗಡೆ ಅವರು ಕಮಲಾಕರ ಗುರೂಜಿ ಆಗಿ ಬದಲಾದ ನಂತರ ಕಾನ್ಸರ್ ಪೀಡಿತರಿಗೆ ಹಾಗೂ ಅನಾಥರಿಗೆ ಸಹಾಯ ಮಾಡುವ ಮುಖವಾಡಹೊಂದಿದ್ದರು. ದೊಡ್ಡ ದೊಡ್ಡ ಮಾಧ್ಯಮಗಳಿಗೆ ದುಡ್ಡು ಕೊಟ್ಟು ಆ ಬಗ್ಗೆ ಲೇಖನ ಪ್ರಕಟಿಸಿಕೊಂಡಿದ್ದರು. ರಾಜಕೀಯ ವ್ಯಕ್ತಿಗಳ ಜೊತೆಯಿದ್ದ ಫೋಟೋವನ್ನು ಅವರು ದುರುಪಯೋಗಪಡಿಸಿಕೊಂಡು ತಮ್ಮ ಪ್ರಭಾವ ಹೆಚ್ಚಿಸಿಕೊಂಡಿದ್ದರು. ಈ ಎಲ್ಲದರ ನಡುವೆ ಕಮಲಾಕರ ಗುರೂಜಿ ಅವರ ಪತ್ನಿ ಸಾವನಪ್ಪಿದ್ದು, ಒಂಟಿತನ ಸಹಿಸಲಾಗದ ಗುರೂಜಿ ಕಚೇರಿ ಕೆಲಸದಾಕೆಯ ಜೊತೆ ಸಂಬAಧ ಹೊಂದಿದ್ದರು. ಆ ಕೆಲಸದಾಕೆಯ ಮಗಳ ವಿಷಯವಾಗಿ ಮೂಗು ತೂರಿಸಲು ಹೋದಾಗ ಸಿದ್ದಾಪುರದ ಅವರೆಕೊಪ್ಪದಲ್ಲಿ ಕೊಲೆ ನಡೆದಿದ್ದು, ಆ ಕೊಲೆ ಪ್ರಕರಣದಲ್ಲಿ ಈ ಗುರೂಜಿ ಜೈಲು ಸೇರಿದರು.