ವಾರದ ಹಿಂದೆ ವಿಷ ಸೇವಿಸಿದ್ದ ಯಲ್ಲಾಪುರದ ಉಮ್ಮಚ್ಗಿಯ ನಾಗೇಂದ್ರ ಬೋವಿವಡ್ಡರ್ ಹಾಗೂ ನಮಿತಾ ಬೋವಿವಡ್ಡರ್ ದಂಪತಿ ಸಾವನಪ್ಪಿದ್ದಾರೆ. ಮೂರು ದಿನದ ಹಿಂದೆ ನಾಗೇಂದ್ರ ಬೋವಿವಡ್ಡರ್ ಅವರು ಕೊನೆಯುಸಿರೆಳೆದಿದ್ದು, ನಿನ್ನೆ ನಮಿತಾ ಬೋವಿವಡ್ಡರ್ ಅವರು ಸಹ ಉಸಿರಾಟ ನಿಲ್ಲಿಸಿದ್ದಾರೆ.
ಯಲ್ಲಾಪುರದ ಉಮ್ಮಚ್ಗಿ ಬಳಿಯ ಸಂಕದಗುoಡಿಯಲ್ಲಿ ನಾಗೇಂದ್ರ ಬೋವಿವಡ್ಡರ್ (28) ಹಾಗೂ ನಮಿತಾ ಬೋವಿವಡ್ಡರ್ (26) ಅವರು ವಾಸವಾಗಿದ್ದರು. ಫೆಬ್ರವರಿ 7ರಂದು ಈ ದಂಪತಿ ಇಲಿ ಪಾಷಣ ಸೇವಿಸಿದ್ದರು. ವಿಷ ಸೇವಿಸಿ ಅಸ್ವಸ್ಥಗೊಂಡ ಅವರನ್ನು ಮೊದಲು ಟಿಎಸ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರನ್ನು ದೇರಳಕಟ್ಟೆಯ ಏನೋಪೇಯಾ ಆಸ್ಪತ್ರೆಗೆ ಕಳುಹಿಸಿ ಆರೈಕೆ ಮಾಡಲಾಯಿತು. ಆದರೆ, ಮೂರು ದಿನಗಳ ಹಿಂದೆ ನಾಗೇಂದ್ರ ಬೋವಿವಡ್ಡರ್ ಅವರು ಸಾವನಪ್ಪಿದ್ದು, ಅದಾದ ನಂತರ ನಮಿತಾ ಬೋವಿವಡ್ಡರ್ ಅವರನ್ನು ಹುಬ್ಬಳ್ಳಿಯ ಕಿಮ್ಸ್’ಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಯಿತು.
ಆದರೆ, ಅಲ್ಲಿಯೂ ನಮಿತಾ ಬೋವಿವಡ್ಡರ್ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಿರಂತರ ಆರೈಕೆ ಮಾಡಿದರೂ ಶನಿವಾರ ಮಧ್ಯಾಹ್ನದ ವೇಳೆಗೆ ನಮಿತಾ ಬೋವಿವಡ್ಡರ್ ಅವರು ಕೊನೆಯುಸಿರೆಳೆದರು. ಈ ದಂಪತಿ ಯಾವುದೋ ಒಂದು ಸಮಸ್ಯೆಯಿಂದ ಅವರು ಬಳಲುತ್ತಿದ್ದರು. ಆದರೆ, ಸಮಸ್ಯೆ ಯಾವುದು? ಎಂದು ಯಾರಿಗೂ ಗೊತ್ತಾಗಿರಲಿಲ್ಲ. ನಾಗೇಂದ್ರ ಬೋವಿವಡ್ಡರ್ ಅವರ ಸಾವಿನ ಬಗ್ಗೆ ಉಮ್ಮಚ್ಗಿಯ ಸಿವಿಲ್ ಗುತ್ತಿಗೆದಾರ ಗೋವಿಂದ ಬಸಾಪುರ ಅವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ನಮಿತಾ ಬೋವಿವಡ್ಡರ್ ಅವರ ಸಾವಿನ ಬಗ್ಗೆ ಸೊರಬದಲ್ಲಿರುವ ಅವರ ಸಹೋದರ ನವೀನ ರೋಡಿಗ್ರಸ್ ಅವರು ಮಾಹಿತಿ ನೀಡಿದ್ದಾರೆ. ಜೀವನದಲ್ಲಿ ಜಿಗುಪ್ಸೆ ಹೊಂದಿ ದಂಪತಿ ಆತ್ಮಹತ್ಯೆಗೆ ಶರಣಾದ ಬಗ್ಗೆ ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
`ಆತ್ಮಹತ್ಯೆ ಮಹಾ ಅಪರಾಧ’