ಯಲ್ಲಾಪುರದ ಹೋಲಿ ರೋಜರಿ ಶಾಲೆಗೆ ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರು ಅವರು ಸ್ಮಾರ್ಟ ಬೋರ್ಡ ನೀಡಿದ್ದಾರೆ. ತಮಗೆ ಲಭ್ಯವಿರುವ ಸರ್ಕಾರಿ ಅನುದಾನವನ್ನು ಅವರು ಶೈಕ್ಷಣಿಕ ಸೇವೆಗೆ ಕೊಟ್ಟಿದ್ದಾರೆ.
ಸ್ಮಾರ್ಟ ಬೋರ್ಡ ಉದ್ಘಾಟನೆ ನಂತರ `ಆಧುನಿಕ ತಂತ್ರಜ್ಞಾನಗಳು ಮನುಷ್ಯನ ಬದುಕಿಗೆ ಪೂರಕವಾಗಿದೆ. ವಿದ್ಯಾರ್ಥಿಯ ಜೀವನ ಮಟ್ಟ ಹೆಚ್ಚಿಸುವಲ್ಲಿ ತಂತ್ರಜ್ಞಾನದ ಕೊಡುಗೆ ಅಪಾರ’ ಎಂದು ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರು ಅವರು ಹೇಳಿದ್ದಾರೆ. `ಮಕ್ಕಳ ಹಾಗೂ ಶಿಕ್ಷಕರ ಕಲಿಕಾ ಪದ್ಧತಿಗೆ ಸ್ಮಾರ್ಟ ಬೋರ್ಡ ನೆರವಾಗಲಿದೆ. ಇದರಿಂದ ಉತ್ತಮ ಫಲಿತಾಂಶಪಡೆಯಲು ಸಾಧ್ಯವಿದೆ’ ಎಂದವರು ಹೇಳಿದ್ದಾರೆ.
`ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಪಾಲಿಸಬೇಕು. ಸಂಸ್ಕಾರಯುತವಾದ ಜೀವನ ಕಟ್ಟಿಕೊಳ್ಳಬೇಕು’ ಎಂದವರು ಕರೆ ನೀಡಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ, ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಅಜಯ್ ನಾಯಕ್, ತಾಲೂಕ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ್, ಎಸ್ ಎಸ್ ಸಿ ವಿಜ್ಞಾನ ಬಳಗದ ಜಿಲ್ಲಾ ಅಧ್ಯಕ್ಷರು ಹಾಗೂ ವಿಜ್ಞಾನ ಪರಿಷತ್ತಿನ ಸಂಚಾಲಕ ಎಂ ರಾಜಶೇಖರ್ ಅನುದಾನಿತ ಮಾಧ್ಯಮಿಕ ನೌಕರರ ಸಂಘದ ಗೌರವಾಧ್ಯಕ್ಷ ಆನಂದ್ ಹೆಗಡೆ ಅವರು ಕಾರ್ಯಕ್ರಮದಲ್ಲಿದ್ದರು.
ಮುಖ್ಯಾಧ್ಯಾಪಕರಾದ ಫಾದರ್ ರೆಮಂಡ್ ಫರ್ನಾಂಡಿಸ್ ಅವರು ಅಧ್ಯಕ್ಷತೆವಹಿಸಿದ್ದರು. ವೆಂಕಟ್ರರಮಣ ಭಟ್ ಅವರು ಸ್ವಾಗತಿಸಿದರು. ನೆಲ್ಸನ್ ಗೋನ್ಸಾಲ್ವಿಸ ವಂದಿಸಿದರು. ಚಂದ್ರಶೇಖರ ಕಾರ್ಯಕ್ರಮ ನಿರ್ವಹಿಸಿದ್ದದರು. ಈ ವೇಳೆ ವಿವಿದ ಸಮಸ್ಯೆಗಳ ಬಗ್ಗೆ ಉಪನ್ಯಾಸಕರು ವಿಧಾನ ಪರಿಷತ್ ಸದಸ್ಯರಿಗೆ ಮನವರಿಕೆ ಮಾಡಿಕೊಟ್ಟಿದ್ದು, ಲಿಖಿತ ಮನವಿ ಸಲ್ಲಿಸಿದರು.