ಅಂಕೋಲಾದ ಕೃಷಿ ಹುಟ್ಟುವಳಿ ಮಾರಾಟ ಸಂಘದ ಕಡತಗಳಲ್ಲಿ ಫೋರ್ಜರಿ ಸಹಿ ನಡೆದ ಪ್ರಕರಣ ಬೆಳಕಿಗೆ ಬಂದಿದೆ. ಲಕ್ಷ್ಮೇಶ್ವರದ ಜಯರಾಮ ನಾಯಕ ಅವರು ಅನೇಕರ ಸಹಿ ಫೋರ್ಜರಿ ಮಾಡಿದ ವಿಷಯ ಹೊರ ಬಿದ್ದಿದೆ.
ಈಚೆಗೆ ನಡೆದ ಸೊಸೈಟಿ ಸಭೆಯಲ್ಲಿ ಸಹಿ ಪೋರ್ಜರಿ ವಿಷಯದ ಬಗ್ಗೆ ಚರ್ಚೆ ನಡೆದಿದೆ. ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಹಲವು ಸದಸ್ಯರ ಸಹಿಯನ್ನು ಒಬ್ಬರೇ ಹಾಕಿರುವುದು ಗೊತ್ತಾಗಿದೆ. ಅಂಕೋಲಾದ ಪಾರ್ವತಿ ಗೋಪಾಕೃಷ್ಣ ನಾಯಕ, ಲಕ್ಷ್ಮೇಶ್ವರದ ಲತಾ ರಾಮಚಂದ್ರ ನಾಯಕ, ಭಾವಿಕೇರಿಯ ಲೀಲಾವತಿ ರಾಜೀವ ನಾಯಕ, ಲಕ್ಷ್ಮೇಶ್ವರದ ಉಮಾ ರಾಮಚಂದ್ರ ಮಿರಾಸಿ, ಅಗ್ರಗೋಣದ ಮಂಜುನಾಥ ಸುಬ್ರಾಯ ನಾಯಕ, ಬಾಸಗೋಡದ ಸುಧಾ ವಿನೋದ ನಾಯಕ, ಬೇಲಿಕೇರಿಯ ರಾಜಮ್ಮ ನಿತ್ಯಾನಂದ ನಾಯಕ ಅವರ ಸಹಿ ಪೋರ್ಜರಿಯಾಗಿದೆ.
ಇದರೊಂದಿಗೆ ಲಕ್ಷ್ಮೇಶ್ವರದ ಮಯೂರು ರಾಮಚಂದ್ರ ನಾಯಕ, ಭಾವಿಕೇರಿಯ ಸ್ಮಿತಾ ಕಾಶಿನಾಥ ನಾಯಕ, ಬಾಸಗೋಡದ ತೃಪ್ತಿ ವಿನೋದ ನಾಯಕ, ವಂದಿಗೆಯ ಸಿಂದು ನಾಯಕ, ಅಮೀತ ನಾಯಕ, ಅಖೀಲ ನಾಯಕ, ವಂದಿಗೆಯ ಗುರುರಾಜ ಹಮ್ಮಣ್ಣ ನಾಯಕ, ಮಾಲಾಶ್ರೀ ಗುರುರಾಜ ನಾಯಕ, ಕುಂಟಕಣಿಯ ಮಂಜುನಾಥ ರತ್ನಾಕರ ನಾಯಕ, ಕೃಫಾ ನಾಯಕ, ಬಾಸಗೋಡದ ಶಿವಪ್ರಸಾದ ಗೋಪಾಲ ನಾಯಕ, ಅಗ್ರಗೋಣದ ನೀಲಕಂಠ ಗೋಪಾಲ ನಾಯಕ, ಕೋಟೆವಾಡದ ಜ್ಯೋತಿ ಅರುಣಕುಮಾರ ನಾಯಕ ಅವರ ಸಹಿಯೂ ಸೊಸೈಟಿ ದಾಖಲೆಗಳಲ್ಲಿ ಪೋರ್ಜರಿಯಾಗಿರುವುದು ಗಮನಕ್ಕೆ ಬಂದಿದೆ.
ಅoಕೋಲಾದ ಕೃಷಿ ಹುಟ್ಟುವಳಿ ಮಾರಾಟ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಗೋಪಾಲಕೃಷ್ಣ ನಾಯಕ ಅವರು ಆಯ್ಕೆಯಾಗಿದ್ದು, ಅವರು ಸಹಿ ಪೋರ್ಜರಿಯಿಂದ ಆಗುವ ಅನಾಹುತದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಭೆಯಲ್ಲಿ ನಡೆದ ಚರ್ಚೆಯಲ್ಲಿ ನಿರ್ಣಯಿಸಿದಂತೆ ಸಹಿ ಪೋರ್ಜರಿ ಮಾಡಿದ ಜಯರಾಮ ದೇವಣ್ಣ ನಾಯಕ ಅವರ ವಿರುದ್ಧ ದೂರು ನೀಡಿದ್ದಾರೆ. 2020ರಿಂದ 24ರ ಅವಧಿಯಲ್ಲಿ ಸಭೆಗೆ ಹಾಜರಾಗದಿದ್ದವರ ಹೆಸರಿನಲ್ಲಿಯೂ ಸಭೆಗೆ ಹಾಜರಾದ ಬಗ್ಗೆ ಜಯರಾಮ ದೇವಣ್ಣ ನಾಯಕ ಅವರು ನಕಲಿ ದಾಖಲೆ ಸೃಷ್ಠಿ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಸೊಸೈಟಿ ಚುನಾವಣೆಯ ಅವಧಿಯಲ್ಲಿ ಈ ಫೋರ್ಜರಿ ಸಹಿ ಪ್ರಭಾವ ಬೀರಿದ್ದು, ಭವಿಷ್ಯದ ಚುನಾವಣೆಯ ಮೇಲೆಯೂ ದುಷ್ಪರಿಣಾಮ ಬೀರುವ ಸಾಧ್ಯತೆಯಿರುವ ಬಗ್ಗೆ ಗೋಪಾಲಕೃಷ್ಣ ನಾಯಕ ಅವರು ಪೊಲೀಸರಲ್ಲಿ ಆತಂಕವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಹಿನ್ನಲೆ ನಕಲಿ ಸಹಿ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.