ಸರ್ಕಾರಿ ಜಾಗ ಅತಿಕ್ರಮಿಸಿ ಖಾಸಗಿಯವರು ನಿರ್ಮಿಸಿದ ರೆಸಾರ್ಟ-ಹೋಂ ಸ್ಟೇ ಹಾಗೂ ಹೊಟೇಲ್’ಗಳಿಗೆ ಅಧಿಕಾರಿಗಳು ನೋಟಿಸ್ ಅಂಟಿಸಿದ್ದಾರೆ. `ಇದು ಸರ್ಕಾರಿ ಆಸ್ತಿ. ಸ್ಥಳೀಯರು ಹಾಗೂ ಪ್ರವಾಸಿಗರಿಗೆ ಪ್ರವೇಶವಿಲ್ಲ’ ಎಂದು ಬರೆದು ಆ ಕಟ್ಟಡಕ್ಕೆ ಬೀಗ ಜಡಿದಿದ್ದಾರೆ.
Advertisement. Scroll to continue reading.
ಉತ್ತರ ಕನ್ನಡ ಜಿಲ್ಲೆಯ ಕುಮಟಾದ ನಾಡುಮಾಸ್ಕೇರಿ-ದುಬ್ಬಿನಶಶಿ ಭಾಗದಲ್ಲಿ 55ಕ್ಕೂ ಅಧಿಕ ರೆಸಾರ್ಟುಗಳಿವೆ. ಅಲ್ಲಿ ಬಹುತೇಕ ರೆಸಾರ್ಟುಗಳು ಸರ್ಕಾರಿ ಜಾಗ ಅತಿಕ್ರಮಿಸಿದ್ದು, ಈಗಾಗಲೇ ಸರ್ವೇ ಕಾರ್ಯ ಮುಗಿದು ಅತಿಕ್ರಮಣದಾರರಿಗೆ ನೋಟಿಸ್ ಸಹ ನೀಡಲಾಗಿದೆ. ಅದಾಗಿಯೂ, ಅತಿಕ್ರಮಣದಾರರು ಜಾಗ ತೆರವು ಮಾಡಿಲ್ಲ. ಈ ಹಿನ್ನಲೆ ಸೋಮವಾರ ಅಧಿಕಾರಿಗಳು ಆ ಕಟ್ಟಡಕ್ಕೆ ನೋಟಿಸ್ ಅಂಟಿಸಿದ್ದು, ಕಟ್ಟಡದ ಬಾಗಿಲು ಮುಚ್ಚಿ ಅದಕ್ಕೆ ಸೀಲ್ ಹೊಡೆದಿದ್ದಾರೆ. ಸೋಮವಾರ ಮುಂಜಾನೆಯಿAದ ಈ ಕಾರ್ಯಾಚರಣೆ ಶುರುವಾಗಿದ್ದು, ಇದಕ್ಕೆ ಅಡ್ಡಿ ಆಗದಂತೆ ಮುನ್ನಚ್ಚರಿಕೆವಹಿಸಲು ಕುಮಟಾ ಉಪವಿಭಾಗಾಧಿಕಾರಿ ಶ್ರವಣಕುಮಾರ ಅವರು ಸ್ಥಳದಲ್ಲಿ ನಿಷೇಧಾಜ್ಷೆ ಹೊರಡಿಸಿದ್ದಾರೆ. ಮಾರ್ಚ 9ರ ಬೆಳಗ್ಗೆ 10 ಗಂಟೆಯಿoದ ಮಾರ್ಚ 10ರ ಬೆಳಗ್ಗೆ 10ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿದೆ. ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಪೊಲೀಸರನ್ನು ನಿಯೋಜಿಸಿ ಸರ್ಕಾರಿ ಜಾಗ ವಶಕ್ಕೆಪಡೆಯುವ ಕೆಲಸ ನಡೆದಿದೆ.
ಇಲ್ಲಿ 52 ಅಕ್ರಮ ಕಟ್ಟಡಗಳಿದ್ದು ಅದರಲ್ಲಿ 24 ಕಟ್ಟಡವರು ಸ್ವಯಂ ಪ್ರೇರಣೆಯಿಂದ ತೆರವು ಮಾಡಲು ಕಾಲಾವಕಾಶ ಕೋರಿದ್ದಾರೆ. ಸೂಕ್ತ ಪ್ರಮಾಣ ಪತ್ರ ಅಫಡವೀಟ್ ನೀಡುವಂತೆ ನ್ಯಾಯಾಲಯ ಸೂಚಿಸಿದ್ದು, ಸದ್ಯ ಸ್ವಯಂ ಪ್ರೇರಿತವಾಗಿ ತೆರವು ಮಾಡುವವರೆಗೂ ಯಾವುದೇ ಚಟುವಟಿಕೆ ನಡೆಯದ ಹಾಗೇ ಬೀಗ ಹಾಕಲಾಗಿದೆ. ಕುಮಟಾ ಉಪವಿಭಾಗಾಧಿಕಾರಿ ಶ್ರವಣಕುಮಾರ, ಕುಮಟಾ ತಹಶೀಲ್ದಾರ ಶ್ರೀಕೃಷ್ಣ ಕಾಮಕರ್ ನೇತೃತ್ವದಲ್ಲಿ ನಾಡುಮಾಸ್ಕೇರಿ ಗ್ರಾಮ ಪಂಚಾಯತದಲ್ಲಿ ವಿಶೇಷ ಸಭೆ ನಡೆದಿದ್ದು, ಇದೇ ವಿಷಯವಾಗಿ ಎರಡು ತಾಸುಗಳ ಕಾಲ ಚರ್ಚೆ ನಡೆದಿದೆ. ನ್ಯಾಯಾಲಯದ ಆದೇಶ ಬರುವವರೆಗೂ ಕಾದು ನಂತರ ಅತಿಕ್ರಮಣ ತೆರವು ಮಾಡುವ ಬಗ್ಗೆ ಕಟ್ಟಡ ಮಾಲಕರು ಅಧಿಕಾರಿಗಳಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ. ತಾಲೂಕಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಆರ್ ಎಲ್ ಭಟ್, ಪಿಐ ಶ್ರೀಧರ ಎಸ್ ಆರ್ ಸೇರಿ ಅನೇಕ ಅಧಿಕಾರಿಗಳು ಸಭೆಯಲ್ಲಿದ್ದು ಅಹವಾಲು ಆಲಿಸಿದ್ದಾರೆ. ನಾಲ್ಕು ಜೆಸಿಬಿ ಯಂತ್ರ, ಟಿಪ್ಪರ್, ಅಗ್ನಿಶಾಮಕ ವಾಹನ ಸ್ಥಳದಲ್ಲಿದ್ದು, ಎರಡು ಆಂಬುಲೆನ್ಸನ್ನು ಸಹ ಮುನ್ನಚ್ಚರಿಕಾ ಕ್ರಮವಾಗಿರಿಸಿರುವುದು ಕಾಣಿಸಿತು.
ಈ ತೆರವು ಕಾರ್ಯಾಚರಣೆ ನಿಲ್ಲಿಸುವಂತೆ ಆಗ್ರಹಿಸಿ ಸ್ಥಳೀಯ ಕೆಲವರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಈ ವೇಳೆ ಇಬ್ಬರು ಮಹಿಳೆಯರು ಕುಸಿದು ಬಿದ್ದರು. ತಕ್ಷಣ ಅಂಬ್ಯಲೆನ್ಸ ಮೂಲಕ ಗೋಕರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಿ ಚಿಕಿತ್ಸೆ ನೀಡಿದ್ದು, ನಂತರ ಅವರು ಚೇತರಿಸಿಕೊಂಡಿದ್ದಾರೆ. `ಬಡವರಿಗೆ ಬದುಕಲು ಬಿಡಿ’ ಎಂದು ಅಲ್ಲಿನ ಜನ ಅಳಲು ತೊಡಿಕೊಂಡಿದ್ದಾರೆ.