ಯಲ್ಲಾಪುರ, ಇಡಗುಂದಿ, ಶೀರ್ಲೆ, ಅರಬೈಲ್ ಸೇರಿ ಹೆದ್ದಾರಿ ಉದ್ದಕ್ಕೂ ಅಲೆದಾಡುತ್ತಿದ್ದ ಅಪರಿಚಿತ ಅಲೆಮಾರಿಗೆ ಕೆಂಪು ಬಣ್ಣದ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಆ ಡಿಕ್ಕಿ ರಭಸಕ್ಕೆ ಆ ಅಲೆಮಾರಿ ಅಲ್ಲಿಯೇ ಸಾವನಪ್ಪಿದ್ದಾರೆ.
ಮಾರ್ಚ 14ರ ಸಂಜೆ 7ಗಂಟೆಯವರೆಗೂ ಅಪರಿಚಿತ ಅಲೆಮಾರಿಯೊಬ್ಬರು ಹೆದ್ದಾರಿಯಲ್ಲಿ ಅಲೆದಾಡುತ್ತಿದ್ದರು. ಅದಾದ ನಂತರ ಕೆಂಪು ಬಣ್ಣದ ಕ್ಯಾಂಟರ್ ಹೆದ್ದಾರಿ ಮೂಲಕ ಸಂಚರಿಸಿದ್ದು, ಅದೇ ವಾಹನ ಅಲೆಮಾರಿಗೆ ಗುದ್ದಿತು. ಯಲ್ಲಾಪುರದಿಂದ ಅಂಕೋಲಾ ಕಡೆ ಹೊರಟಿದ್ದ ಆ ಕ್ಯಾಂಟರ್ ಮೊದಲು ಪಿಕಪ್ ವಾಹನಕ್ಕೆ ಗುದ್ದಿದ್ದು, ಅದಾದ ನಂತರ ಅಪರಿಚಿತ ಅಲೆಮಾರಿಗೆ ಗುದ್ದಿತು.
ಎಸ್ ಆಕಾರದ ತಿರುವಿನಿಂದ 1ಕಿಮೀ ದೂರದಲ್ಲಿ ಪಿಕಪ್ ಹಾಗೂ ಕ್ಯಾಂಟರ್ ಡಿಕ್ಕಿ ನಡೆದಿದ್ದು, ಅದಾದ ನಂತರ ಅಪರಿಚಿತ ವ್ಯಕ್ತಿಗೆ ಅದೇ ಕ್ಯಾಂಟರ್ ಗುದ್ದಿರುವುದು ದೃಢವಾಯಿತು. ಹೀಗಾಗಿ 7.30ರ ವೇಳೆಗೆ ಆ ಅಲೆಮಾರಿ ಹೆದ್ದಾರಿಯಲ್ಲಿ ಶವವಾಗಿದ್ದರು. ಶಿರ್ಲೆ ಕ್ರಾಸಿನ ಬಳಿ ಅಪರಿಚಿತ ಅಲೆಮಾರಿಗೆ ಕ್ಯಾಂಟರ್ ಗುದ್ದಿದ್ದರಿಂದ ಅಲ್ಲಿಯೇ ಅವರು ಕೊನೆಯುಸಿರೆಳೆದಿದ್ದಾರೆ. ಅಪಘಾತದ ನಂತರ ಕ್ಯಾಂಟರ್ ಚಾಲಕ ವಾಹನ ನಿಲ್ಲಿಸಿಲ್ಲ. ಇನ್ನಷ್ಟು ವೇಗವಾಗಿ ಕ್ಯಾಂಟರ್ ಓಡಿಸಿಕೊಂಡು ಪರಾರಿಯಾಗಿದ್ದು, ಯಲ್ಲಾಪುರ ಸವಣಗೇರಿಯ ಕ್ರೇನ್ ಕೆಲಸ ಸುಫಿಯಾನ್ ಅಬ್ದುಲ್ ಕರೀಂಖಾನ್ ಅವರು ಕ್ಯಾಂಟರ್ ನೋಡಿದ್ದಾರೆ.
ಈ ಎಲ್ಲಾ ಹಿನ್ನಲೆ ಕ್ಯಾಂಟರ್ ವಾಹನದ ನೋಂದಣಿ ಸಂಖ್ಯೆಯ ಜೊತೆ ಸುಫಿಯಾನ್ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಪರಿಚಿತ ಅಲೆಮಾರಿಯ ಗುರುತು ಪತ್ತೆಗಾಗಿ ಪೊಲೀಸರು ಶ್ರಮಿಸುತ್ತಿದ್ದು, ಅದರೊಂದಿಗೆ ಪರಾರಿಯಾದ ಕ್ಯಾಂಟರ್ ಚಾಲಕನ ಶೋಧವನ್ನು ಶುರು ಮಾಡಿದ್ದಾರೆ.