ಕಂದಕಕ್ಕೆ ಕಾರು ಬಿದ್ದ ಪರಿಣಾಮ ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದ ರೋಹಿತ ಬೆಳವಡಿ ಅವರು ವಾರಗಳ ಕಾಲ ನರಳಾಟ ನಡೆಸಿ ಸಾವನಪ್ಪಿದ್ದಾರೆ.
Advertisement. Scroll to continue reading.
ಯಲ್ಲಾಪುರದ ಜಿಯೋ ಕಚೇರಿ ಬಳಿ ಫೆಬ್ರವರಿ 28ರಂದು ಕಾರು ಅಪಘಾತಕ್ಕೀಡಾಗಿತ್ತು. ಹುಬ್ಬಳ್ಳಿ-ಅಂಕೋಲಾ ಮಾರ್ಗವಾಗಿ ಸಂಚರಿಸುತ್ತಿದ್ದ ಕಾರು ಕಂದಕಕ್ಕೆ ಬಿದ್ದಿದ್ದು, ಬೆಳಗಾವಿಯ ರೋಹಿತ ಬೆಳವಡಿ ಅವರು ಗಾಯಗೊಂಡಿದ್ದರು. ಬೆಳಗಾವಿಯ ಬಸವರಾಜ ಉಳಾಗಡ್ಡಿ ಅವರ ವೇಗದ ಚಾಲನೆ ಅಪಘಾತಕ್ಕೆ ಕಾರಣವಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದರು.
ಅದಾದ ನಂತರ ರೋಹಿತ ಬೆಳವಡಿ ಅವರು ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಂದ ಮುಂದೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆದಿದ್ದು, ನಂತರ ಸೆಕ್ಯೂರ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಗೆ ಒಳಗಾಗಿದ್ದರು. ಎಲ್ಲಾ ಕಡೆಯೂ ವೈದ್ಯರು ಅವರನ್ನು ಸಾಕಷ್ಟು ಪ್ರಮಾಣದಲ್ಲಿ ಆರೈಕೆ ಮಾಡಿದರು. ಆದರೆ, ಅದು ಪ್ರಯೋಜನಕ್ಕೆ ಬರಲಿಲ್ಲ.
ಮಾರ್ಚ 7ರಂದು ರೋಹಿತ ಬೆಳವಡಿ ಅವರು ನೋವು ಸಹಿಸಲಾಗದೇ ಸಾವನಪ್ಪಿದರು. ಈ ಬಗ್ಗೆ ಆಸ್ಪತ್ರೆಯವರು ಇಮೇಲ್ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದರು. ಅಪಘಾತಕ್ಕೆ ಕಾರಣರಾದ ಚಾಲಕನ ವಿರುದ್ಧ ಯಲ್ಲಾಪುರ ಪೊಲೀಸರು ಹೆಚ್ಚುವರಿ ಸೆಕ್ಷನ್ ಅಡಿ ಪ್ರರಕಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ.