ಕಾನಗೋಡಿನ ದಯಾನಂದ ನಾಯ್ಕ ಹಾಗೂ ಮಶಿಗದ್ದೆಯ ಮಂಜುನಾಥ ದೇವಾಡಿಗ ಸೇರಿ ಕಳ್ಳ ನಾಟಾ ಸಾಗಾಟಕ್ಕೆ ಮುಂದಾಗಿದ್ದು, ಅರಣ್ಯಾಧಿಕಾರಿಗಳು ಅವರಿಬ್ಬರ ಅಕ್ರಮ ಚಟುವಟಿಕೆಗೆ ತಡೆವೊಡ್ಡಿದ್ದಾರೆ. ಅವರು ಕಡಿದಿದ್ದ ಶ್ರೀಗಂಧದ ಮರದ ತುಂಡುಗಳನ್ನು ವಶಕ್ಕೆಪಡೆದಿದ್ದಾರೆ.
ಕಾನಗೋಡ ಜನತಾ ಕಾಲೋನಿಯ ದಯಾನಂದ ನಾರಾಯಣ ನಾಯ್ಕ (48) ಹಾಗೂ ಮಶಿಗದ್ದೆಯ ಗ್ರಾಮದ ಮಂಜುನಾಥ ಅಣ್ಣಪ್ಪ ದೇವಾಡಿಗ (47) ಎಂಬಾತರು ಕಾಡು ನಾಶಕ್ಕೆ ಮುಂದಾಗಿದ್ದರು. ಅರಣ್ಯದಲ್ಲಿನ ಶ್ರೀಗಂಧದ ಮರಗಳನ್ನು ಕಡಿದ ಅವರು ಅದನ್ನು ಕೆತ್ತನೆ ಮಾಡಿ ಕಾಸು ಸಂಪಾದಿಸಲು ಯೋಚಿಸಿದ್ದರು. ಆದರೆ, ಅರಣ್ಯ ಅಧಿಕಾರಿಗಳು ಅವರ ಯೋಜನೆಯನ್ನು ಉಲ್ಟಾ ಮಾಡಿದರು. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಅಧಿಕಾರಿಗಳು 33 ಕೆಜಿ ಶ್ರೀಗಂಧವನ್ನು ಜಪ್ತು ಮಾಡಿದರು.
ಅಧಿಕಾರಿಗಳನ್ನು ನೋಡಿದ ಮಂಜುನಾಥ ಅಣ್ಣಪ್ಪ ದೇವಾಡಿಗ ಅವರು ಕಾಡಿನಲ್ಲಿಯೇ ಓಡಿ ಪರಾರಿಯಾದರು. ವೇಗವಾಗ ಓಡಲಾಗದ ದಯಾನಂದ ನಾಯ್ಕ ಅವರು ಅರಣ್ಯಾಧಿಕಾರಿಳಿಗೆ ಸಿಕ್ಕಿ ಬಿದ್ದರು. ತಲೆಮರೆಸಿಕೊಂಡವನಿಗಾಗಿ ಅರಣ್ಯ ಸಿಬ್ಬಂದಿ ಹುಡುಕಾಟ ಶುರು ಮಾಡಿದರು.