ಶಿರಸಿ, ಸಿದ್ದಾಪುರ, ಯಲ್ಲಾಪುರ, ಜೋಯಿಡಾ ತಾಲೂಕಿನ ಜನರನ್ನು ಒಗ್ಗೂಡಿಸಿ ಕಸ್ತೂರಿ ರಂಗನ್ ವರದಿಯ 7ನೇ ಅಧಿಸೂಚನೆಗೆ ಆಕ್ಷೆಪಣೆ ಸಲ್ಲಿಸಲು ನ್ಯಾಯವಾದಿ ರವೀಂದ್ರ ನಾಯ್ಕ ಅವರು ನಿರ್ಧರಿಸಿದ್ದಾರೆ. ಸೆಪ್ಟೆಂಬರ್ 5ರಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯಿಂದ ಆಕ್ಷೇಪಣೆ ಸಲ್ಲಿಸುವುದಾಗಿ ಅವರು ಹೇಳಿದ್ದಾರೆ.
`ಉತ್ತರ ಕನ್ನಡ ಜಿಲ್ಲೆಯ ಅನೇಕ ಊರುಗಳನ್ನು ಸೂಕ್ಷ ಪ್ರದೇಶ ಎಂದು ಕಸ್ತೂರಿ ರಂಗನ್ ವರದಿಯಲ್ಲಿ ಹೇಳಲಾಗಿದೆ. ಪಶ್ಚಿಮ ಘಟ್ಟ ಪ್ರದೇಶವನ್ನ ರಕ್ಷಣೆ ಹಾಗೂ ಸಂರಕ್ಷಿಸಲು ಅಸ್ತಿತ್ವದಲ್ಲಿರುವ ಕಾನೂನು-ನೀತಿ-ನಿಯಮ ಈಗಾಗಲೇ ಜಾರಿಯಲ್ಲಿರುವುದರಿಂದ ಹೊಸ ವರದಿ ಅನುಷ್ಠಾನ ಅಗತ್ಯವಿಲ್ಲ. ಹೀಗಾಗಿ ಆ ವರದಿ ವಿರೋಧಿಸಿ ಆಕ್ಷೇಪಣೆ ಸಲ್ಲಿಸಲಾಗುತ್ತಿದೆ’ ಎಂದು ಅವರು ಶಿರಸಿಯಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. `ಕಸ್ತೂರಿ ರಂಗನ್ ವಿರೋಧಿ ವರದಿ ಜಾರಿ ವಿರೋಧದ ಕುರಿತು ಹಾಗೂ ಆಕ್ಷೇಪಣೆಗೆ ಕಾರಣಗಳ ಮಾಹಿತಿಯೊಂದಿಗೆ ಒಂದು ಲಕ್ಷ ಕರಪತ್ರವನ್ನ ಮುದ್ರಿಸಲು ನಿರ್ಧರಿಸಲಾಗಿದೆ’ ಎಂದು ಸಹ ಅವರು ತಿಳಿಸಿದ್ದಾರೆ.
`ಕಸ್ತೂರಿ ರಂಗನ್ ವರದಿ 7 ನೇ ಅಧಿಸೂಚನೆಯಲ್ಲಿ ಕರ್ನಾಟಕದ 10 ಜಿಲ್ಲೆಯಲ್ಲಿನ 32 ತಾಲೂಕಿನಲ್ಲಿ 1502 ಹಳ್ಳಿಗಳನ್ನು ಸೂಕ್ಷö ಪ್ರದೇಶವೆಂದು ಉಲ್ಲೇಖಿಸಲ್ಪಟ್ಟಿದೆ. ಅತೀ ಹೆಚ್ಚು 138 ಹಳ್ಳಿಗಳು ತೀರ್ಥಹಳ್ಳಿಯಲ್ಲಿ ತಾಲೂಕಿನಲ್ಲಿ 2 ನೇ ಸ್ಥಾನ ಹೊಸನಗರ ತಾಲೂಕಿನಲ್ಲಿ 118 ಹಳ್ಳಿಗಳಿವೆ. ಶಿರಸಿ ಮತ್ತು ಸಾಗರ ತಾಲೂಕಿನಲ್ಲಿ ತಲಾ 114 ಅತೀ ಸೂಕ್ಷö ಹಳ್ಳಿಗಳೆಂದು ಗುರುತಿಸಿ ರಾಜ್ಯ ದಲ್ಲಿ ಅತೀ ಹೆಚ್ಚು ತಾಲೂಕಿನಲ್ಲಿ ಸೂಕ್ಷ ಪ್ರದೇಶದ ಪಟ್ಟಿಯಲ್ಲಿ ಶಿರಸಿ ಮತ್ತು ಸಾಗರ 3 ನೇ ಸ್ಥಾನದಲ್ಲಿದೆ’ ಎಂಬ ಮಾಹಿತಿಯನ್ನು ಅವರು ಬಿಡುಗಡೆ ಮಾಡಿದ್ದಾರೆ. ಸಂಘಟನೆಯ ಜಿಲ್ಲಾ ಸಂಚಾಲಕರಾದ ಇಬ್ರಾಹೀಂ ಗೌಡಳ್ಳಿ, ನೆಹರು ನಾಯ್ಕ ಬಿಳೂರು, ನಾಗರಾಜ ದೇವಸ್ಥಳಿ, ರಾಜು ನರೇಬೈಲ್, ಚಂದ್ರ ಶಾನಭಾಗ, ಚಂದ್ರು ನಾಯ್ಕ, ಕಿರಣ ಮರಾಠಿ ದೇವನಳ್ಳಿ, ರಫೀಕ ಗೌಡಳ್ಳಿ , ಪರಮೇಶ್ವರ ವಾನಳ್ಳಿ, ಜಯಶ್ರೀ ಪಟಗಾರ, ಕಲ್ಪನಾ ನರೇಬೈಲ್, ಅಬ್ದುಲ್ ಮುನಾಫ್, ಪಂಪಾವತಿ, ಯಶವಂತ ಬಂಡಲ್, ಸುರೇಶ ಗೌಡ ಗುಡ್ನಾಪುರ, ಲಕ್ಷಣ ಕೆ ಗೌಡ ಗುಡ್ನಾಪುರ, ಗೋಪಾಲ ಜಿ ನಾಯ್ಕ, ಫಕೀರಪ್ಪ , ಹುಲಿಯಾ ಗೌಡ, ಪ್ರಶಾಂತ್ ನಾಯ್ಕ, ಗಣಪತಿ ಮೊಗಳ್ಳಿ ಮುಂತಾದವರು ಉಪಸ್ಥಿತರಿದ್ದರು.
ಯಲ್ಲಾಪುರದಲ್ಲಿ ಅಗಸ್ಟ 24ರಂದು ಕಸ್ತೂರಿ ರಂಗನ್ ವಿರೋಧಿ ಸಭೆ:
ಯಲ್ಲಾಪುರ: ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿಗೆ 7 ನೇ ಅಧಿಸೂಚನೆ ಆಗಿರುವ ಹಿನ್ನಲೆಯಲ್ಲಿ ಯಲ್ಲಾಪುರ ತಾಲೂಕಿನಲ್ಲಿ ಘೋಷಿಸಲ್ಟಟ್ಟ ಸೂಕ್ಷ ಪ್ರದೇಶದ ಪಟ್ಟಿಯ ಬಿಡುಗಡೆ ಮತ್ತು ಮುಂದಿನ ಹೋರಾಟದ ರೂಪು ರೇಷೆ ನಿರ್ಧರಿಸಲು ಅಗಸ್ಟ 24 ಸೋಮವಾರ, ಮುಂಜಾನೆ 10 ಗಂಟೆಗೆ ಸ್ಥಳೀಯ ವೆಂಕಟರಮಣ ದೇವಸ್ಥಾನ ಸಭಾಭವನದಲ್ಲಿ ಕರೆಯಲಾಗಿದೆ ಎಂದು ಸಂಘಟನೆಯ ಜಿಲ್ಲಾ ಸಂಚಾಲಕ ಚಂದ್ರಶೇಖರ ಪೂಜಾರಿ ಮಂಚಿಕೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಈ ಸಭೆಯಲ್ಲಿ ಉಪಸ್ಥಿತರಿರುವವರು. ಜುಲೈ 27 ರಂದು ಕಸ್ತೂರಿ ರಂಗನ್ ಸೂಕ್ಷö ಪ್ರದೇಶದ 7 ನೇ ಅಧಿಸೂಚನೆ ಆಗಿರುವ ಹಿನ್ನಲೆಯಲ್ಲಿ ಮಹತ್ವ ಪೂರ್ಣ ಸಭೆಗೆ ಆಸಕ್ತರು ಆಗಮಿಸಿ ಮುಂದಿನ ಹೋರಾಟದ ರೂರು ರೇಷೆಗೆ ಸಲಹೆ ಸೂಚನೆ ಕೊಡಲು ಅವರು ಕೋರಿದ್ದಾರೆ.