ಯಲ್ಲಾಪುರದಲ್ಲಿ ಪ್ರಧಾನ ಶಾಖೆ ಹೊಂದಿ ಶಿರಸಿಯಲ್ಲಿಯೂ ಕಚೇರಿ ನಡೆಸುತ್ತಿರುವ ವಿಕಾಸ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್’ಗೆ ಕಳೆದ ವರ್ಷ 72.91 ಲಕ್ಷ ರೂ ಲಾಭವಾಗಿದೆ. ಸಾಲ ನೀಡುವಿಕೆ, ವಸೂಲಾತಿ, ಠೇವಣಿ ಸಂಗ್ರಹ ಸೇರಿ ವಿವಿಧ ಚಟುವಟಿಕೆಗಳಲ್ಲಿ ಈ ಬ್ಯಾಂಕು ಸಕ್ರೀಯವಾಗಿದ್ದು, ಅದೆಲ್ಲದರ ಪರಿಣಾಮವಾಗಿ ಈ ಸಾಧನೆ ಸಾಧ್ಯವಾಗಿದೆ.
ವಿಕಾಸ ಬ್ಯಾಂಕಿನ ಸಾಧನೆ ಬಗ್ಗೆ ಬ್ಯಾಂಕ್ ಅಧ್ಯಕ್ಷ ಮುರುಳಿ ಹೆಗಡೆ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. `ಬ್ಯಾಂಕು ವರ್ಷದಿಂದ ವರ್ಷಕ್ಕೆ ಉತ್ತಮವಾಗಿ ಪ್ರಗತಿ ಸಾಧಿಸುತ್ತಿದೆ’ ಎಂದವರು ಅಂಕಿ-ಅAಶಗಳ ಜೊತೆ ವಿವರಿಸಿದ್ದಾರೆ. `ಆಧುನಿಕ ತಂತ್ರಜ್ಞಾನ ಅಳವಡಿಕೆಯಲ್ಲಿಯೂ ಬ್ಯಾಂಕ್ ಮುಂಚೂಣಿಯಲ್ಲಿದೆ. ಗ್ರಾಹಕರಿಗೆ ಅನುಕೂಲವಾಗುವಂತೆ ಬ್ಯಾಂಕು ಎ.ಟಿ.ಎಂ., ಸಿ.ಡಿ.ಎಂ. ಇ-ಕಾಮರ್ಸ್, ಪಿ.ಒ.ಎಸ್, ಮೊಬೈಲ್ ಬ್ಯಾಂಕಿAಗ್ ಮುಂತಾದ ಡಿಜಿಟಲ್ ಸೇವೆಗಳನ್ನು ಒದಗಿಸುತ್ತಿದೆ’ ಎಂದವರು ಹೇಳಿದ್ದಾರೆ. `ಗ್ರಾಹಕ ಸ್ನೇಹಿಯಾಗಿ ಈ ಎಲ್ಲಾ ತಂತ್ರಜ್ಞಾನ ಬಳಸಲು ಅನುಕೂಲ ಮಾಡಿಕೊಡಲಾಗಿದೆ’ ಎಂದವರು ವಿವರಿಸಿದ್ದಾರೆ.
`ವಿಕಾಸ್ ಬ್ಯಾಂಕ್ ವತಿಯಿಂದ ಸದ್ಯದಲ್ಲೇ ಯು.ಪಿ.ಐ. ಸೇವೆ ನೀಡಲು ತಂತ್ರಜ್ಞಾನವನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಅದನ್ನು ಸದ್ಯದಲ್ಲೇ ಆರಂಭಿಸಲಾಗುತ್ತದೆ. ಬ್ಯಾಂಕಿನ ವಾರ್ಷಿಕ ಸರ್ವಸಾಧಾರಣ ಸಭೆ ಪಟ್ಟಣದ ಅಡಿಕೆ ಭವನದಲ್ಲಿ ಅಗಸ್ಟ್ 27 ರಂದು ಸಂಜೆ 4 ಗಂಟೆಗೆ ನಡೆಯಲಿದೆ’ ಎಂದವರು ತಿಳಿಸಿದರು. ಬ್ಯಾಂಕಿನ ಉಪಾಧ್ಯಕ್ಷ ನರಸಿಂಹ ಬೋಳಪಾಲ್, ನಿರ್ದೇಶಕರಾದ ಡಿ ಶಂಕರ ಭಟ್ಟ, ಸದಾನಂದ ಭಟ್ಟ, ಎಸ್ ಕೆ ಭಾಗ್ವತ, ಎಸ್ ಎಂ ಭಟ್ಟ, ರಾಜೇಂದ್ರ ಬದ್ದಿ, ಲೋಕೇಶ್ ಗಿಡ್ಡನ್, ವಿಜಯಶ್ರೀ ವೈದ್ಯ, ಪ್ರಿಯಾ ವಿ ಗಾಂವ್ಕರ, ರವಿ ಹುಳ್ಸೆ, ಪ್ರಭಾರಿ ಮುಖ್ಯ ಕಾರ್ಯನಿರ್ವಾಹಕ ರಾಜೇಶ ಪಿ ಬಿಳಗೀಕರ್ ಅವರು ಜೊತೆಗಿದ್ದರು.