ಸಮುದ್ರ ಗಡಿ ಕಾವಲಿಗಾಗಿ 20 ವರ್ಷ ಸೇವೆ ಸಲ್ಲಿಸಿದ ಕಾರವಾರದ ಭಾರತೀಯ ತಟ ರಕ್ಷಕ ಪಡೆಯಲ್ಲಿದ್ದ ಸಾವಿತ್ರಿಬಾಯಿ ಫುಲೆಗೆ ನೌಕೆ ನಿವೃತ್ತಿಯಾಗಿದೆ. ಶನಿವಾರದ ಸೂರ್ಯಾಸ್ತದ ಬಳಿಕ ಈ ನೌಕೆಯಲ್ಲಿದ್ದ ಬಾವುಟವನ್ನು ಅಧಿಕಾರಿಗಳು ಕೆಳಗಿಳಿಸಿದ್ದಾರೆ.
ಅಧಿಕಾರಿಗಳು ಈ ನೌಕೆಗೆ ವಿದಾಯ ಹೇಳಿ, ಅಧಿಕೃತವಾಗಿ ಡಿ-ಕಮಿಷನ್ ಮಾಡಿದ್ದಾರೆ. ಧ್ವಜ ಇಳಿಸಿದ ಬಳಿಕ ನೌಕೆಯ ಉದ್ದಕ್ಕೆ ಸಮನಾದ ವಿಶೇಷ `ಪೇಯಿಂಗ್ ಆಫ್ ಪೆನ್ನಂಟ್’ ಅನ್ನು ಕೆಳಗಿಳಿಸುವ ಮೂಲಕ ನೌಕೆಯ ಸೇವಾ ನಿವೃತ್ತಿಯನ್ನು ಘೋಷಿಸಲಾಗಿದೆ. ಸಮಾರಂಭದ ಅಂಗವಾಗಿ ಕೋಸ್ಟ್ ಗಾರ್ಡ್ ಸಿಬ್ಬಂದಿಯಿoದ ಗೌರವ ವಂದನೆ ಸಲ್ಲಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕೋಸ್ಟ್ ಗಾರ್ಡ್ ಡಿಐಜಿ ಪ್ರವೀಣ್ ಕುಮಾರ್ ಮಿಶ್ರಾ ಅವರು `ಸಾವಿತ್ರಿಬಾಯಿ ಫು¯ ಹಡಗು ಕೇವಲ ಉಕ್ಕು ಮತ್ತು ಯಂತ್ರಗಳಿoದ ಮಾಡಲ್ಪಟ್ಟಿದ್ದಲ್ಲ ಅದರಲ್ಲಿದ್ದ ಕಮಾಂಡರ್ಗಳು, ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಶ್ರಮದಿಂದ ಅದು ಜೀವಂತವಾಗಿತ್ತು. ಎರಡು ದಶಕಗಳ ಕಾಲ ಈ ಹಡಗು ಭಾರತದ ಸಮುದ್ರ ಗಡಿಗಳನ್ನು ಕಾಯುವಲ್ಲಿ ಮತ್ತು ದೇಶದ ಕರಾವಳಿ ಭದ್ರತೆಯಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿದೆ. ಕಠಿಣ ಹವಾಮಾನ, ಮಳೆ ಮತ್ತು ಬಿರುಗಾಳಿಯ ನಡುವೆಯೂ ಗಸ್ತು ತಿರುಗುವುದು ಹಾಗೂ ಸಮುದ್ರ ಸುರಕ್ಷತಾ ಕಾರ್ಯಗಳನ್ನು ನಡೆಸಿದೆ. ಸಮುದ್ರದಲ್ಲಿ ಆಪತ್ತಿನಲ್ಲಿರುವ ಮೀನುಗಾರರು ಮತ್ತು ನಾವಿಕರಿಗೆ ಈ ಹಡಗು ನೆರವು ನೀಡುವ ಆಶಾಕಿರಣದ ಸಂಕೇತವಾಗಿತ್ತು’ ಎಂದು ಸ್ಮರಿಸಿದ್ದಾರೆ.
`ದೇಶದ ಭದ್ರತೆಗೆ ಸವಾಲು ಒಡ್ಡಲು ಯತ್ನಿಸುವ ದುಷ್ಟÀ್ಟಶಕ್ತಿಗಳಿಗೆ ಇದು ಎಚ್ಚರಿಕೆಯ ಮತ್ತು ಕಟ್ಟುನಿಟ್ಟಿನ ಪ್ರತ್ಯುತ್ತರದ ಸಂಕೇತವಾಗಿತ್ತು. ಈ ಹಡಗು ತನ್ನ ಸಕ್ರಿಯ ಸೇವೆಯಿಂದ ನಿರ್ಗಮಿಸುತ್ತಿದ್ದರೂ, ಕರಾವಳಿ ಕಾವಲು ಪಡೆಯ ಇತಿಹಾಸದಲ್ಲಿ ಅದರ ಕೊಡುಗೆ ಮತ್ತು ಪರಂಪರೆ ಎಂದಿಗೂ ಅಮರವಾಗಿರುತ್ತದೆ’ ಎಂದವರು ಹೇಳಿದರು. ಸಾವಿತ್ರಿಬಾಯಿ ಫುಲೆ ಹಡಗಿನ ಕಮಾಂಡಿAಗ್ ಆಫೀಸರ್ ಕಮಾಂಡೆAಟ್ ಗೌರವ್ ಶ್ರೀವಾಸ್ತವ್ ಅವರು ಮಾತನಾಡಿ ಹಡಗಿನ ಸುದೀರ್ಘ ಸೇವೆ, ಸಿಬ್ಬಂದಿಯ ಶ್ರಮ ಹಾಗೂ ಸಮುದ್ರ ಸುರಕ್ಷತೆಯಲ್ಲಿ ಅದರ ಕೊಡುಗೆಯನ್ನು ಸ್ಮರಿಸಿದರು. `ಅಕ್ಟೋಬರ್ 28, 2006 ರಂದು ಸೇವೆಗೆ ಸೇರಿದ್ದ ಈ ಹಡಗು ಕಳೆದ 20 ವರ್ಷಗಳಲ್ಲಿ ದೇಶದ ಸಮುದ್ರ ಗಡಿ ಕಾವಲಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸಮುದ್ರದಲ್ಲಿ ಸುಮಾರು 78,468 ನಾಟಿಕಲ್ ಮೈಲಿಗಳಷ್ಟು ಗಸ್ತು ನಡೆಸಿದೆ. 14 ಶೋಧ ಮತ್ತು ರಕ್ಷಣಾ ಕಾರ್ಯಚರಣೆಗಳು ಹಾಗೂ 4 ವೈದ್ಯಕೀಯ ತೆರವು ಕಾರ್ಯಾಚರಣೆಗಳನ್ನು ಕೈಗೊಂಡು 71 ಪ್ರಾಣಗಳನ್ನು ರಕ್ಷಿಸಿದೆ. 2 ಕಳ್ಳಸಾಗಣೆ ವಿರೋಧಿ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ’ ಎಂದರು.
`2006-07, 2010-11 ಹಾಗೂ 2014 ರಲ್ಲಿ ಅತ್ಯುತ್ತಮ ‘ಸರ್ಚ್ ಅಂಡ್ ರೆಸ್ಕ್ಯೂ ಯೂನಿಟ್’ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಗೋವಾ ಶಿಪ್ಯಾರ್ಡ್ ಲಿಮಿಟೆಡ್ನಿಂದ ಸ್ವದೇಶಿಯಾಗಿ ನಿರ್ಮಿಸಲ್ಪಟ್ಟಿದ್ದ ಈ ಹಡಗು, ಆತ್ಮನಿರ್ಭರತೆಗೆ ಸಾಕ್ಷಿಯಾಗಿತ್ತು’ ಎಂದರು. ಕಾರ್ಯಕ್ರಮದಲ್ಲಿ ಕೋಸ್ಟ್ ಗಾರ್ಡ್ ಕಾರವಾರದ ಕಮಾಂಡರ್ ಅಖಿಲ್ ಯಾದವ್, ಡಿಎಫ್ಓ ಆಂತೋಣಿ ಮರಿಯಪ್ಪ, ಸಿ.ಐ.ಎಸ್.ಎಫ್. ಕೈಗಾದ ಕಮಾಂಡಿಗ್ ಆಫೀಸರ್ ಅಜಯ್ ಕುಮಾರ್ ಝಾ, ನಿವೃತ್ತ ಡಿ.ಐ.ಜಿ. ಮನೋಜ್ ಬಾಡ್ಕರ್ ಮತ್ತಿತರರು ಇದ್ದರು.