ಕಾರವಾರದ ಕೋಡಿಭಾಗದ ಬಳಿ 130 ಕೆಜಿ ತೂಕದ ಆಮೆಯೊಂದು ಕಾಣಿಸಿದೆ. ಅಪರೂಪದಲ್ಲಿಯೇ ಅಪರೂಪಕ್ಕೆ ಸಿಕ್ಕಿರುವ ಆ ಆಮೆಯನ್ನು ಅರಣ್ಯಾಧಿಕಾರಿಗಳು ರಕ್ಷಿಸಿದ್ದಾರೆ.
ಆಳ ಸಮುದ್ರದಲ್ಲಿ ವಾಸಿಸುವ ಈ ಆಮೆ ಹಸಿರು ಬಣ್ಣದಿಂದ ಕೂಡಿದ್ದು, ನದಿ-ಸಮುದ್ರ ಸಂಗಮ ಪ್ರದೇಶದ ಮೂಲಕ ಕೋಡಿಭಾಗದವರೆಗೆ ಬಂದಿದೆ. ನದಿ ನೀರಿನ ಹರಿವು ಕಡಿಮೆ ಆಗಿದ್ದರಿಂದ ಆ ಆಮೆ ಸಂತೋಷಿಮಾತಾ ದೇಗುಲದ ಅಂಚಿನ ಪ್ರದೇಶವನ್ನು ತಲುಪಿದೆ. ಅದಾದ ನಂತರ ಮರಳಿ ಸಮುದ್ರಕ್ಕೆ ಹೋಗಲು ಸಾಧ್ಯವಾಗದೇ ಸಮಸ್ಯೆ ಅನುಭವಿಸಿದೆ.
ಕಾಂಡ್ಲಾ ಗಿಡದ ಬುಡದಲ್ಲಿ ನೀರು ಕಡಿಮೆಯಿದ್ದು, ಅಲ್ಲಿ ಆಮೆ ಸಿಲುಕಿರುವುದನ್ನು ನೋಡಿದ ಜನ ಕಡಲಜೀವ ಶಾಸ್ತç ಸ್ನಾತಕೋದರ ಅಧ್ಯಯನ ಕೇಂದ್ರಕ್ಕೆ ಮಾಹಿತಿ ನೀಡಿದರು. ಕೇಂದ್ರದ ತಜ್ಞರ ಜೊತೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಆಮೆಯನ್ನು ಸ್ವಚ್ಛಗೊಳಿಸಿದರು.
ಸದ್ಯ ಆ ಆಮೆ ಅಸ್ವಸ್ಥಗೊಂಡಿದ್ದು, ಅರಣ್ಯ ಇಲಾಖೆಯ ಆರೈಕೆ ನಡೆದಿದೆ. ಆಮೆ ಚೇತರಿಸಿಕೊಂಡ ನಂತರ ಅದನ್ನು ಮತ್ತೆ ಆಳ ಸಮುದ್ರಕ್ಕೆ ಬಿಡಲಾಗುತ್ತದೆ.