ಸಿದ್ದಾಪುರದಲ್ಲಿ ಬಾವಿಗೆ ಬಿದ್ದ ವ್ಯಕ್ತಿಯೊಬ್ಬರಿಗೆ ಮರುಜೀವ ಸಿಕ್ಕಿದೆ. ಬಾವಿಗೆ ಬಿದ್ದು ನೆನೆದಿದ್ದ ವ್ಯಕ್ತಿ ಬಗ್ಗೆ ಅರಿತ ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಧಾವಿಸಿ ಜೀವ ಕಾಪಾಡಿದ್ದಾರೆ.
ಸಿದ್ದಾಪುರದ ಕವಲಕೊಪ್ಪ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಬಾವಿಗೆ ಬಿದ್ದ ಬಗ್ಗೆ ಅಗ್ನಿಶಾಮಕ ಠಾಣೆಗೆ ಫೋನ್ ಬಂದಿತು. ಅಗ್ನಿಶಾಮಕ ದಳದ ಶೌರ್ಯ ತಂಡವರು ಸ್ಥಳಕ್ಕೆ ದೌಡಾಯಿಸಿದರು. ಆಗಲೇ ಅಲ್ಲಿ ಸ್ಥಳೀಯರು ಸಹ ಆಗಮಿಸಿದ್ದು, ಎಲ್ಲರೂ ಸೇರಿ ಬಾವಿಯಲ್ಲಿದ್ದ ವ್ಯಕ್ತಿಯನ್ನು ಮೇಲೆತ್ತಿದರು.
ಸಹಾಯಕ ಠಾಣಾಧಿಕಾರಿ ಎ ಸುಬ್ರಹ್ಮಣ್ಯ ಅವರ ನೇತೃತ್ವದ ತಂಡದಲ್ಲಿ ನಾಗರಾಜ್ ಪಟಗಾರ, ವಿನಯ ಕುಮಾರ, ಬಾಳೇಶ ತಳವಾರ, ಪ್ರಸಾದ ನಾಯ್ಕ ಹಾಗೂ 112 ಪೊಲೀಸ್ ಸಹಾಯವಾಣಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು. ಶೌರ್ಯ ತಂಡದ ವೆಂಕಟೇಶ ಗೌಡ ಕೊಡಗಿಬೈಲ್ ಮತ್ತು ರಾಘವೇಂದ್ರ ನಾಯ್ಕ ಹಾಸಣಿಗೆ ತಮ್ಮ ಸಾಹಸದಿಂದ ವ್ಯಕ್ತಿಯ ಜೀವ ಕಾಪಾಡಿದರು.