ಭಟ್ಕಳ ಮಾರುಕೇರಿಯ ನಾಗರಾಜ ಹೆಗಡೆ ಅವರು ಮಂಚದಿoದ ಕೆಳಗೆ ಬಿದ್ದು ಪೆಟ್ಟು ಮಾಡಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೇ ಸಾವನಪ್ಪಿದ್ದಾರೆ.
ಭಟ್ಕಳದ ಮಾರುಕೇರಿಯ ಕೋಟಖಂಡ ಕಲ್ಲಬ್ಬೆಯಲ್ಲಿ ನಾಗರಾಜ ವಾಸುದೇವ ಹೆಗಡೆ ಏಣಿಮನೆ (47) ಅವರು ವಾಸವಾಗಿದ್ದರು. ಸಂಗೀತಗಾರರಾಗಿದ್ದ ಅವರು ಅನೇಕ ವೇದಿಕೆಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದರು. ಭಟ್ಕಳದಲ್ಲಿ ಹಂಸಧ್ವನಿ ಅಂಗಡಿ ತೆರೆದು ಹಾರ್ಮೊನಿಯಂ ರಿಪೇರಿ ಮತ್ತು ಸೌಂಡ್ ಸಿಸ್ಟಮ್ ಕಾಯಕವನ್ನು ನಿಭಾಯಿಸಿದ್ದರು. ಉತ್ತಮ ಸಂಗೀತಗಾರರೂ ಆಗಿದ್ದ ಅವರು ಹಲವರಿಗೆ ಸಂಗೀತಾಭ್ಯಾಸ ಮಾಡಿಸಿದ್ದರು.
ಈಚೆಗೆ ಅವರು ತಮ್ಮ ಮನೆಯಲ್ಲಿ ಮಂಚದಿ0ದ ಕೆಳಗೆ ಬಿದ್ದಿದ್ದರು. ಅದರಿಂದ ಅವರ ತಲೆಗೆ ಗಂಭೀರ ಪ್ರಮಾನದಲ್ಲಿ ಪೆಟ್ಟಾಗಿತ್ತು. ತಕ್ಷಣ ಸರಕಾರಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಿ ನಂತರ ಮಂಗಳೂರಿನ ವೆನಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಅವರು ಕೊನೆಯುಸಿರೆಳೆದಿದ್ದಾರೆ.