ಮಕ್ಕಳಿಬ್ಬರನ್ನು ಬೈಕಿನ ಮೇಲೆ ಕೂರಿಸಿಕೊಂಡು ಶಿರಸಿ ಜಾತ್ರೆಗೆ ಹೊರಟಿದ್ದ ಮುಂಡಗೋಡದ ಬಸವರಾಜ ಕಚವಿ ಅವರು ಅಪಘಾತದಲ್ಲಿ ಸಾವನಪ್ಪಿದ್ದಾರೆ. ಈ ಅವಘಡದಲ್ಲಿ ಅವರ ಮಕ್ಕಳಿಬ್ಬರಿಗೂ ನೋವಾಗಿದೆ.
ಫೆಬ್ರವರಿ 2ರ ಸಂಜೆ ಮುಂಡಗೋಡು ಮಳಗಿ ಅಂಬೇಡ್ಕರ್ ಓಣಿಯ ಬಸವರಾಜ ಕಚವಿ ಅವರು ಶಿರಸಿ ಜಾತ್ರೆಗೆ ಹೋಗಲು ನಿರ್ಧರಿಸಿದ್ದರು. ಪ್ಯಾರಾ ಮೆಡಿಕಲ್ ಓದುತ್ತಿರುವ ತಮ್ಮ ಮಗಳಾದ ಯಶೋಧಾ ಕಚವಿ ಹಾಗೂ ಮೇಘನಾ ಕಚವಿ ಅವರ ಜೊತೆ ಬಸವರಾಜ ಕಚವಿ ಅವರು ಬೈಕಿನಲ್ಲಿ ಜಾತ್ರೆಗೆ ಹೊರಟರು. ಸಂಜೆ ಆರು ಗಂಟೆ ವೇಳೆಗೆ ಅವರು ಶಿರಸಿ ಬಳಿಯ ಹುಡಲಕೊಪ್ಪ ಬಸ್ ನಿಲ್ದಾಣ ಸಮೀಪಿಸಿದ್ದು, ಅಲ್ಲಿಯೇ ಎದುರಿಗಿದ್ದ ಬಸ್ಸಿಗೆ ಬೈಕ್ ಗುದ್ದಿದರು. ಆ ಅಪಘಾತದ ರಭಸಕ್ಕೆ ಬಸವರಾಜ ಕಚವಿ ಅವರು ಅಲ್ಲಿಯೇ ಸಾವನಪ್ಪಿದರು.
ಈ ದಿನ ಬಳ್ಳಾರಿಯಿಂದ ಹೊರಟ ಬಸ್ಸು ಕುಮಟಾಗೆ ಹೋಗಬೇಕಿತ್ತು. ಪ್ರಯಾಣಿಕರು ತುಂಬಿದ್ದ ಆ ಬಸ್ಸನ್ನು ಕೆ ಎಸ್ ಆರ್ ಟಿಸಿ ಚಾಲಕ ಮಲ್ಲಪ್ಪ ಗುರಪ್ಪ ನಾಗೋಡು ಅವರು ಓಡಿಸುತ್ತಿದ್ದರು. ಬಸ್ಸಿನ ನಿರ್ವಾಹಕರಾಗಿ ಸೋಮಶೇಖರ ವೀರಯ್ಯ ಹೀರೇಮಠ್ ಅವರು ಕರ್ತವ್ಯದಲ್ಲಿದ್ದು, ಟಿಕೆಟ್ ತೆಗೆಯುತ್ತಿದ್ದರು. ಮುಂಡಗೋಡದಿAದ ಹೊರಟು ಕಾತೂರು, ಪಾಳಾ, ಮಳಗಿ ಮಾರ್ಗವಾಗಿ ಶಿರಸಿ ಕಡೆ ಹೊರಟಿತ್ತು. ಶಿರಸಿ-ಹುಬ್ಬಳ್ಳಿ ರಸ್ತೆ ರಿಪೇರಿ ಕೆಲಸ ನಡೆಯುತ್ತಿದ್ದರಿಂದ ಬಸ್ಸು ನಿಧಾನವಾಗಿಯೇ ಸಾಗುತ್ತಿತ್ತು. ತಗ್ಗು ಗುಂಡಿಗಳಿAದ ಕೂಡಿದ ರಸ್ತೆಯಲ್ಲಿ ಒಮ್ಮೆಲೆ ಹಾವು ಕಾಣಿಸಿದ್ದು, ಆ ಹಾವಿನ ಮೇಲೆ ಬಸ್ಸು ಹಾಯುವುದನ್ನು ತಪ್ಪಿಸುವುದಕ್ಕಾಗಿ ಮಲ್ಲಪ್ಪ ನಾಗೋಡು ಅವರು ಒಮ್ಮೆಲೆ ಬ್ರೆಕ್ ಹಾಕಿದ್ದರು.
ಈ ವೇಳೆ ಹಿಂದಿನಿAದ ಬೈಕ್ ಓಡಿಸಿಕೊಂಡು ಬರುತ್ತಿದ್ದ ಬಸವರಾಜ ಕಚವಿ ಅವರು ಸಹ ಬೈಕ್ ನಿಲ್ಲಿಸುವ ಪ್ರಯತ್ನ ಮಾಡಿದರು. ಆದರೆ, ಅದು ಸಾಧ್ಯವಾಗದೇ ಬೈಕು ಬಸ್ಸಿಗೆ ಹಿಂದಿನಿAದ ಡಿಕ್ಕಿ ಹೊಡೆಯಿತು. ಆ ಡಿಕ್ಕಿ ರಭಸಕ್ಕೆ ಬಸವರಾಜ ಅವರ ಜೊತೆ ಅವರ ಮಕ್ಕಳಾದ ಯಶೋಧಾ ಹಾಗೂ ಮೇಘನಾ ಅವರು ನೆಲಕ್ಕೆ ಅಪ್ಪಳಿಸಿದರು. ಬಸವರಾಜ ಕಚವಿ ಅವರ ತಲೆಗೆ ಪೆಟ್ಟಾಗಿ, ಮೂಗಿನಿಂದ ರಕ್ತ ಸುರಿದ ಪರಿಣಾಮ ಅವರು ಅಲ್ಲಿಯೇ ಕೊನೆಯುಸಿರೆಳೆದರು. ಯಶೋಧಾ ಅವರ ಕೈಗೆ ಗಾಯವಾಯಿತು. ಮೇಘನಾ ಅವರ ಕಣ್ಣು, ಕಿವಿಗೆ ನೋವಾಯಿತು. ಈ ಬಗ್ಗೆ ಯಶೋಧಾ ಕಚವಿ ಹಾಗೂ ಬಸ್ ಚಾಲಕ ಮಲ್ಲಪ್ಪ ನಾಗೋಡು ಇಬ್ಬರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಬನವಾಸಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದರು.
`ಬೈಕ್ ಸವಾರರು ಸುರಕ್ಷತೆಗಾಗಿ ಹೆಲ್ಮೆಟ್ ಧರಿಸಿ. ಸಂಚಾರಿ ನಿಯಮವನ್ನು ಕಡ್ಡಾಯವಾಗಿ ಪಾಲಿಸಿ’