ಗ್ರಾಮ ಸಹಾಯಕರಾಗಿ ಕೆಲಸ ಮಾಡಿಕೊಂಡಿದ್ದ ವಿಶ್ವೇಶ್ವರ ನಾಯ್ಕ ಅವರು ನಿಗೂಢವಾಗಿ ಕಾಣೆಯಾಗಿದ್ದು, ಎಲ್ಲಾ ಕಡೆ ಅವರ ಹುಡುಕಾಟ ನಡೆದಿದೆ. 12 ದಿನ ಕಳೆದರೂ ಅವರ ಸುಳಿವು ಮಾತ್ರ ಸಿಕ್ಕಿಲ್ಲ.
ಯಲ್ಲಾಪುರದ ತೆಲಂಗಾರ ಬಳಿಯ ಸೂರಲಮಕ್ಕಿಯಲ್ಲಿ ವಿಶ್ವೇಶ್ವರ ಅಚ್ಯುತ ನಾಯ್ಕ ಅವರು ವಾಸವಾಗಿದ್ದರು. ಗ್ರಾಮ ಸಹಾಯಕರಾಗಿ ಅವರು ಕೆಲಸ ಮಾಡಿಕೊಂಡಿದ್ದರು. ಫೆಬ್ರವರಿ 26ರಂದು ಮನೆಯಲ್ಲಿಯೇ ಇದ್ದ ಅವರು ನಂತರ ಕಣ್ಮರೆಯಾಗಿದ್ದಾರೆ. ಸಂಬoಧಿಕರ ಮನೆಯಲ್ಲಿ ಹುಡುಕಿದರೂ ಅವರು ಪತ್ತೆಯಾಗಿಲ್ಲ.
ಫೆ 26ರಂದು ಮಧ್ಯಾಹ್ನ 2ಗಂಟೆಗೆ ವಿಶ್ವೇಶ್ವರ ನಾಯ್ಕ ಅವರ ತಂದೆ ಮನೆಯಲ್ಲಿ ಊಟ ಮಾಡುತ್ತಿದ್ದರು. ಆಗ, ವಿಶ್ವೇಶ್ವರ ನಾಯ್ಕ ಅವರಿಗೆ ಫೋನ್ ಬಂದಿದ್ದು, ಮಾತನಾಡುತ್ತಲೇ ಮನೆಯಿಂದ ಹೊರ ಹೋದರು. ಅವರು ಎಲ್ಲಿ ಹೋದರು? ಏಕೆ ಹೋದರು? ಎಂದು ಕುಟುಂಬದವರಿಗೆ ಗೊತ್ತಾಗಲಿಲ್ಲ. ಆ ದಿನ ಮನೆಯಿಂದ ಹೊರ ಹೋದವರು ಮರಳಿ ಬರಲಿಲ್ಲ.
ವಿಶ್ವೇಶ್ವರ ನಾಯ್ಕ ಅವರಿಗಾಗಿ ಮನೆಯವರು ಎಲ್ಲಾ ಕಡೆ ಹುಡುಕಿದರು. ಆದರೂ, ಅವರ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ಈ ಹಿನ್ನಲೆ ಪೊಲೀಸ್ ದೂರು ನೀಡಿದ್ದು, ಪೊಲೀಸರು ಸಹ ಶೋಧ ನಡೆಸಿದ್ದಾರೆ.