ಮೊಬೈಲ್ ನೋಡದಂತೆ ಸೂಚಿಸಿದ ಕಾರಣ ಮನನೊಂದ ವಿದ್ಯಾರ್ಥಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆಸ್ಪತ್ರೆಗೆ ದಾಖಲಿಸಿದರೂ ಸಹ ಶುಭಂ ನಾಯ್ಕ ಅವರು ಬದುಕಲಿಲ್ಲ.
Advertisement. Scroll to continue reading.
ಶಿರಸಿ ಗಣೇಶ ನಗರದಲ್ಲಿ ಶುಭಂ ನಾಗೇಶ ನಾಯ್ಕ (15) ಅವರು ವಾಸವಾಗಿದ್ದರು. ಮಾರಿಕಾಂಬಾ ಶಾಲೆಯಲ್ಲಿ ಅವರು 9ನೇ ತರಗತಿ ಓದುತ್ತಿದ್ದರು. ಅವರು ಮೊಬೈಲ್ ಹಾಗೂ ಟಿವಿ ಹೆಚ್ಚಾಗಿ ನೋಡುತ್ತಿದ್ದು, ಪಾಲಕರು ಅದನ್ನು ವಿರೋಧಿಸಿದ್ದರು. `ಪರೀಕ್ಷೆ ಸಮಯದಲ್ಲಾದರೂ ಮೊಬೈಲ್ ಮುಟ್ಟಬೇಡ’ ಎಂದು ಶುಭಂ ನಾಯ್ಕ ಅವರಿಗೆ ಅವರ ತಾಯಿ ಸೂಚಿಸಿದ್ದರು. ಇದಕ್ಕೆ ಶುಭಂ ನಾಯ್ಕ ಎದುರುತ್ತರ ನೀಡಿದ್ದರು. ಆಗ, ಶಿವಂ ನಾಯ್ಕ ಅವರಿಗೆ ಅವರ ತಾಯಿ ಎರಡು ಪೆಟ್ಟು ನೀಡಿದ್ದರು.
ತಾಯಿ ಬೈದು-ಹೊಡೆದದಕ್ಕಾಗಿ ಶುಭಂ ನಾಯ್ಕ ಅವರು ಬೇಸರದಲ್ಲಿದ್ದರು. ಅದೇ ವಿಷಯದಿಂದ ನೊಂದಿದ್ದ ಅವರು ದುಡುಕು ನಿರ್ಧಾರ ಮಾಡಿದರು. ತಂದೆ ತಾಯಿ ಮನೆಯಲ್ಲಿ ಇಲ್ಲದ ವೇಳೆ ಶುಭಂ ನಾಯ್ಕ ಅವರು ನೇಣಿಗೆ ಶರಣಾದರು. ಅವರನ್ನು ಟಿ ಎಸ್ ಎಸ್ ಆಸ್ಪತ್ರೆಗೆ ದಾಖಲಿಸಿದರೂ ಬದುಕಿಸಿಕೊಳ್ಳಲು ಆಗಲಿಲ್ಲ. ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದು, ಕಾನೂನು ಕ್ರಮ ಜರುಗಿಸಿದರು.
`ಆತ್ಮಹತ್ಯೆ ಅಪರಾಧ’