ಶಿರಸಿ ಕಸ್ತೂರಿಬಾ ನಗರದಲ್ಲಿ ಎರಡು ವರ್ಷದ ಬಾಲಕಿಯೊಬ್ಬರು ಬಾವಿಗೆ ಬಿದ್ದಿದ್ದಾರೆ. ಬಾವಿ ಆಳದಿಂದ ಅಳುವ ಸದ್ದು ಕೇಳಿದ ಜನ ಆಕೆಯ ರಕ್ಷಣೆಗೆ ಧಾವಿಸಿದ್ದಾರೆ. ಸಾರೀಕಾ ಸೇವಾ ಸಂಸ್ಥೆಯ ಸಂಸ್ಥಾಪಕ ಪಯ್ಯು ಚವಟಿ ಅವರು ಬಾವಿಗೆ ಹಾರಿ ಬಾಲಕಿಯ ಜೀವ ಕಾಪಾಡಿದ್ದಾರೆ.
ADVERTISEMENT
ಶಿರಸಿ ಕಸ್ತೂರಿಬಾ ನಗರದ ಭುವಿ (2 ವರ್ಷ) ಅವರು ಅಜ್ಜಿ ಮನೆ ಅಂಗಳದಲ್ಲಿ ಆಡವಾಡುತ್ತಿದ್ದರು. ಮನೆ ಹಿಂದೆ ಹೋದ ಭುವಿ ಅವರು ಆಯತಪ್ಪಿ ಅಲ್ಲಿದ್ದ ಬಾವಿಗೆ ಬಿದ್ದರು. ಆಳವಾದ ಬಾವಿಗೆ ಬಿದ್ದರೂ ಭುವಿ ಅವರಿಗೆ ಗಾಯವಾಗಿರಲಿಲ್ಲ. ಬಾವಿಯಲ್ಲಿದ್ದ ಪಂಪ್ ಸೆಟ್ಗೆ ಅಳವಡಿಸಿದ್ದ ಪೈಪ್ ಹಿಡಿದು ಭುವಿ ಅವರು ಅಳಲು ಶುರು ಮಾಡಿದ್ದರು. ಆದರೆ, ಆಳವಾದ ಬಾವಿಯಿಂದ ಬರುವ ಸದ್ದು ಹೆಚ್ಚು ದೂರದವರೆಗೆ ಕೇಳುತ್ತಿರಲಿಲ್ಲ.
ADVERTISEMENT
ಮಧ್ಯಾಹ್ನ ಊಟದ ಸಮಯದಲ್ಲಿ ಭುವಿ ಕಾಣದಿದ್ದಾಗ ಕುಟುಂಬದವರು ಆತಂಕಗೊAಡಿದ್ದರು. ಎಲ್ಲಾ ಕಡೆ ಹುಡುಕಾಟ ನಡೆಸಿದರು. ಆಗ, ಬಾವಿಯಿಂದ ಬರುವ ಸದ್ದು ಕೇಳಿ ಕುಟುಂಬದವರು ಅಲ್ಲಿ ಹೋದರು. ಆಗ, ಬಾವಿಯೊಳಗೆ ಮಗು ಬಿದ್ದಿರುವುದು ಕಾಣಿಸಿತು. ಕೂಡಲೇ ಆ ಭಾಗದ ಅನೇಕರು ಬಾವಿ ಬಳಿ ಜಮಾಯಿಸಿದರು. ಬಾಲಕಿ ರಕ್ಷಿಸಲು ಪ್ರಯತ್ನಿಸಿದರು. ಈ ವೇಳೆ ಸಾರೀಕಾ ಸೇವಾ ಸಂಸ್ಥೆಯ ಸಂಸ್ಥಾಪಕ ಪಯ್ಯು ಚವಟಿ ಅವರು ಬೆಂಗಳೂರಿಗೆ ತೆರಳುವ ಸಿದ್ಧತೆಯಲ್ಲಿದ್ದು, ತಮ್ಮ ಬೆಂಗಳೂರು ಪ್ರವಾಸ ಮುಂದೂಡಿ ಅವರು ಕಸ್ತೂರಿಬಾ ನಗರಕ್ಕೆ ಆಗಮಿಸಿದರು. ತಕ್ಷಣ ಆ ಬಾವಿಗೆ ಹಾರಿ ಅಲ್ಲಿದ್ದ ಭುವಿ ಅವರನ್ನು ಮೇಲೆತ್ತಿ ತಂದರು.
ADVERTISEMENT
ಸ್ಥಳೀಯರ ಸಹಾಯದಿಂದ ಬಾವಿಗೆ ಇಳಿದ ಪಯ್ಯು ಚವಟಿ ಅವರು ಭಯದಿಂದ ಅಳುತ್ತಿದ್ದ ಬಾಲಕಿಯನ್ನು ಮೇಲೆತ್ತಿದರು. ಮಗುವಿನ ಜೀವ ಉಳಿಸಿದ ಪಯ್ಯು ಚವಟಿ ಅವರನ್ನು ಬಾಲಕಿ ಕುಟುಂಬದವರು ದೇವರಂತೆ ಕಂಡರು. ಬಾಲಕಿ ರಕ್ಷಣಾ ಕಾರ್ಯಾಚರಣೆ ವಿಡಿಯೋ ಇಲ್ಲಿ ನೋಡಿ..