ದಾಂಡೇಲಿಯ ವೆಸ್ಟಕೋಸ್ಟ್ ಪೆಪರ್ ಮಿಲ್ಲಿನ ಒಳಗೆ ನುಗ್ಗಿದ ಮೂವರು ಕಾರ್ಖಾನೆ ವಿರುದ್ಧ ಕರಪತ್ರ ಹಂಚಿದ್ದಾರೆ. `ಈ ಕಂಪನಿ ಜನರಿಗೆ ಮೋಸ ಮಾಡುತ್ತಿದೆ’ ಎಂದು ಬರೆಯಲಾದ ಪತ್ರವನ್ನು ಅಲ್ಲಿನ ಕಾರ್ಮಿಕರಿಗೆ ವಿತರಿಸಿದ್ದಾರೆ.
ದಾಂಡೇಲಿ ಪೆಪರ್ ಮಿಲ್ಲಿನ ಒಳಗೆ ಜಿ ಎನ್ ರಸ್ತೆಯ ಶಿವಾನಂದ ಗಗ್ಗೇರಿ ಅವರು ಪ್ರವೇಶಿಸಿದ್ದಾರೆ. ಅವರ ಜೊತೆ ಮತ್ತೆ ಮೂರು ಜನರಿದ್ದು, ಅವರೆಲ್ಲರೂ ಸೇರಿ ಕಂಪನಿ ವಿರುದ್ಧ ಕಾರ್ಮಿಕರಿಗೆ ಕರಪತ್ರ ವಿತರಿಸುವ ಕಾರ್ಯ ಮಾಡಿದ್ದಾರೆ. ಅಲ್ಲಿನ ಸಂರಕ್ಷಿತ ಪ್ರದೇಶಕ್ಕೂ ತೆರಳಿ ಕಾಗದ ಕಾರ್ಖಾನೆ ವಿರುದ್ಧ ಮಾತನಾಡಿದ್ದಾರೆ. ಕಾರ್ಖಾನೆಯ ಆಡಳಿತ ಮಂಡಳಿಯವರನ್ನು ಸಹ ನಿಂದಿಸಿದ್ದಾರೆ.
ಮಾರ್ಚ 14ರ ಮಧ್ಯಾಹ್ನ ಶಿವಾನಂದ ಗಗ್ಗೇರಿ ತಂಡದವರು ಕರಪತ್ರ ಹಂಚಿದ್ದಾರೆ. ಇದರಿಂದ ಸಿಟ್ಟಾದ ಕಾರ್ಖಾನೆಯ ಹಿರಿಯ ಕಾನೂನು ಅಧಿಕಾರಿ ಗಂಗಾಧರ ಲಕ್ಷಿö್ಮÃನಾರಾಯಣ ಭಾಗವತ ಅವರು ಶಿವಾನಂದ ಗಗ್ಗೇರಿ ಹಾಗೂ ಮತ್ತೆ ಮೂವರ ವಿರುದ್ಧ ದೂರು ನೀಡಿದ್ದಾರೆ. ಪಾಕ್ಟರಿ ವಿರುದ್ಧ ಅಹವೇಳನ, ಅಪಪ್ರಚಾರ ಮಾಡಿದ ಕಾರಣ ಕ್ರಮ ಜರುಗಿಸಬೇಕು’ ಎಂದು ಗಂಗಾಧರ ಭಾಗವತ್ ಅವರು ದೂರಿದ್ದಾರೆ.
ಕಾರ್ಮಿಕರಿಗೆ ಕರಪತ್ರ ಹಂಚುವುದನ್ನು ತಡೆದ ಸೆಕ್ಯುರಿಟಿ ಸಿಬ್ಬಂದಿ ಪ್ರಕಾಶ ಜಾಂಡೆ ಅವರ ಕೆಲಸಕ್ಕೂ ಆರೋಪಿತರು ತಡೆ ಮಾಡಿದ್ದಾರೆ. ಕರಪತ್ರ ಹಂಚಲು ಅನುಮತಿ ಕೇಳಿದಾಗ `ನಾನು ಇಲ್ಲಿ ಮೂರು ಸಲ ಗೆದ್ದಿದ್ದೇನೆ’ ಎಂದು ಶಿವಾನಂದ ಗಗ್ಗೇರಿ ಅವರು ಗದರಿಸಿದ ಬಗ್ಗೆ ಗಂಗಾಧರ ಭಾಗವತ್ ಅವರು ವಿವರಿಸಿದ್ದಾರೆ. ಕಂಪನಿ ಆಡಳಿತ ಮಂಡಳಿ ವಿರುದ್ಧ ನಿಂದಿಸಿ, ಸಿಬ್ಬಂದಿಗೆ ಬೆದರಿಕೆ ಒಡ್ಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದವರು ಆಗ್ರಹಿಸಿದ್ದಾರೆ.