ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಚಟುವಟಿಕೆಯಲ್ಲಿ ಜಲಕ್ರೀಡೆಯೂ ಪ್ರಮುಖ ಸ್ಥಾನಪಡೆದಿದ್ದು, ಗಣೇಶಗುಡಿಯ ಕಾಳಿ ನದಿಯಲ್ಲಿ ರಾಪ್ಟಿಂಗ್ ಚಟುವಟಿಕೆ ಜೋರಾಗಿದೆ. ಸದ್ಯ ರಾಪ್ಟಿಂಗ್ ದರದಲ್ಲಿ ಏರಿಕೆ ಕಂಡಿರುವುದು ಹೊಡೆದಾಟಕ್ಕೆ ಕಾರಣವಾಗಿದೆ.
ಗಣೇಶಗುಡಿ ಬಳಿಯುರುವ ರಾಫ್ಟಿಂಗ್ ಚಟುವಟಿಕೆಗಾಗಿ ದೇಶ-ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಅನೇಕರು ಪಾಳಿಯಲ್ಲಿ ಕಾದು ಜಲಕ್ರೀಡೆಯನ್ನು ಅನುಭವಿಸುತ್ತಾರೆ. ರೆಸಾರ್ಟ ಮಾಲಕರು, ಎಜೆಂಟರ ಜೊತೆ ರಾಪ್ಟಿಂಗ್ ಚಟುವಟಿಕೆ ನಡೆಸುವ ಅನೇಕರು ಈ ಜಲಕ್ರೀಡೆಯಿಂದ ಜೀವನ ನಡೆಸುತ್ತಿದ್ದಾರೆ. ಈಚೆಗೆ ಅಲ್ಲಿನ ಜಟ್ಟಿಯವರು ರಾಫ್ಟಿಂಗ್ ಚಟುವಟಿಕೆಯ ದರ ಹೆಚ್ಚಿಸಿದ್ದು, ಗಲಾಟೆಗೆ ಕಾರಣವಾಗಿದೆ.
ಗಣೇಶಗುಡಿಯ ಇಳವಾದಲ್ಲಿ ಸೂಪಾ ಅಸೋಶಿಯೇಶನ್ ಅವರು ರಾಪ್ಟಿಂಗ್ ಚಟುವಟಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರವನ್ನು ನಿರ್ಮಿಸಿದ್ದಾರೆ. ಆ ಕೇಂದ್ರದ ಮೂಲಕ ರಾಪ್ಟಿಂಗ್ ಚಟುವಟಿಕೆ ನಡೆಯುತ್ತಿದೆ. ಈ ನಡುವೆ ರಾಫ್ಟಿಂಗ್ ಚಟುವಟಿಕೆಯ ದರ ದುಬಾರಿಯಾಗಿದ್ದು, ಅದಕ್ಕೆ ವಿರೋಧಿಸಿದಾಗ ಹೊಡೆದಾಟ ನಡೆದಿದೆ. ಮಾರ್ಚ 17ರ ಮಧ್ಯಾಹ್ನ 3.45ಕ್ಕೆ 15-20 ಜನ ಸೇರಿ ಒನ್ ಕೌಂಟರ್ ಬಳಿ ಗಲಾಟೆ ಮಾಡಿದ್ದಾರೆ. ಪರಸ್ಪರ ಕೈ ಕೈ ಮಿಲಾಯಿಸಿಕೊಂಡು ಹೊಡೆದಾಡಿಕೊಂಡಿದ್ದಾರೆ.
ರಾಫ್ಟಿAಗ್ ಬುಕ್ಕಿಂಗ್ ಕೌಂಟರ್ ಬಳಿ ಕೆಲವರು ದರ ದುಬಾರಿಯಾದ ಬಗ್ಗೆ ಪ್ರಶ್ನಿಸಲು ತೆರಳಿದಾಗ ವಾಗ್ವಾದ ನಡೆದಿದೆ. ಎರಡು ಗುಂಪುಗಳ ನಡುವೆ ಮಾರಾಮಾರಿ ಶುರುವಾಗಿದೆ. ಸ್ಥಳಕ್ಕೆ ರಾಮನಗರ ಪೊಲೀಸರು ದೌಡಾಯಿಸಿದ್ದು, ಪರಿಸ್ಥಿತಿ ನಿಭಾಯಿಸಿದ್ದಾರೆ. ಅದಾದ ನಂತರ ಹೊಡೆದಾಟದಲ್ಲಿ ಭಾಗಿಯಾದ ದಾಂಡೇಲಿಯ ಶ್ಯಾಮಲಾ, ಕರೀಂ ಕತೀಬ್, ಸಂಜು ನಂದ್ಯಾಳಕರ್, ಪವನ ಕೊನ್ನೂರು, ಉದಯ, ಜೋಸೆಫ್ ಬೈಲಾ, ಸಜೀನ್ ಕಾಳೋಜಿ ಹಾಗೂ ದಾಂಡೇಲಿ ಇಳುವಾದ ಚಾಂದಾ ಕುಟ್ಟಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.