ADVERTISEMENT
  • Home
Sunday, October 12, 2025
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ‌
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ‌
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಸರ್ಕಾರದ ಬಳಿ ಕಾಸಿಲ್ಲ: ಅಧಿಕಾರಿಗಳ ಕಾರಿಗೆ ಇನ್ಸುರೆನ್ಸ ಇಲ್ಲ!

Achyutkumar by Achyutkumar
A A
The AC car was hot enough to cause an accident!
Share on FacebookShare on WhatsappShare on Twitter
ADVERTISEMENT

ಖಾಸಗಿ ವಾಹನ ಸವಾರರ ದಾಖಲೆ ಪರಿಶೀಲಿಸುವ ಪೊಲೀಸರು ಸರ್ಕಾರಿ ವಾಹನದ ದಾಖಲೆಗಳ ಬಗ್ಗೆ ಪ್ರಶ್ನಿಸುತ್ತಿಲ್ಲ. ಹೀಗಾಗಿ ಸರ್ಕಾರಿ ವಾಹನಗಳ ದಾಖಲೆ ಸರಿ ಇಲ್ಲದಿದ್ದರೂ ಅದನ್ನು ಕೇಳುವವರಿಲ್ಲ!

Advertisement. Scroll to continue reading.
ADVERTISEMENT

ಮೊನ್ನೆ ಕುಮಟಾದಲ್ಲಿ ಸಹಾಯಕ ಆಯುಕ್ತ ಶ್ರವಣಕುಮಾರ ಅವರು ಬಳಸುತ್ತಿದ್ದ ಕಾರು ಅಪಘಾತವಾಗಿದೆ. ಅಪಘಾತದ ವೇಳೆ ಆ ಕಾರಿನಲ್ಲಿ ಹಿರಿಯ ಅಧಿಕಾರಿಗಳಿರಲಿಲ್ಲ. ಕಾರಿನಲ್ಲಿದ್ದ ಸರ್ಕಾರಿ ಸಿಬ್ಬಂದಿ ಹಾಗೂ ಚಾಲಕರಿಗೆ ಅಪಘಾತದಿಂದ ದೊಟ್ಟ ಪೆಟ್ಟಾಗಲಿಲ್ಲ. ಆದರೆ, ಅಪಘಾತದ ಅವಧಿಯಲ್ಲಿ ಆ ಕಾರಿಗೆ ಇನ್ಸುರೆನ್ಸ ಸಹ ಇರಲಿಲ್ಲ!

ADVERTISEMENT

ಅಕ್ಟೊಬರ್ 4ರಂದು ಸಹಾಯಕ ಆಯುಕ್ತ ಶ್ರವಣಕುಮಾರ ಅವರ ಕಾರಿನ ಚಾಲಕ ರಜೆಯಲ್ಲಿದ್ದರು. ಹೀಗಾಗಿ ತಹಶೀಲ್ದಾರ್ ಕಚೇರಿಯ ಚಾಲಕರನ್ನು ಸಹಾಯಕ ಆಯುಕ್ತರು ತಮ್ಮ ಕಾರಿಗೆ ನೇಮಿಸಿದ್ದರು. ಆ ದಿನ ವೇಗವಾಗಿ ಬಂದ ಶ್ರೀಕುಮಾರ ಬಸ್ಸು ಸಹಾಯಕ ಆಯುಕ್ತರು ಬಳಸುವ ಕಾರಿಗೆ ಗುದ್ದಿತು. ಪರಿಣಾಮ ಕಾರಿನ ಜೊತೆ ಬಸ್ಸು ಜಖಂ ಆಯಿತು. ಕಾರಿನಲ್ಲಿದ್ದ ಸರ್ಕಾರಿ ಸಿಬ್ಬಂದಿಯೊಬ್ಬರ ಬೆನ್ನಿಗೆ ಸಣ್ಣ ಪ್ರಮಾಣದಲ್ಲಿ ನೋವಾಗಿದ್ದು ಬಿಟ್ಟರೆ ಬೇರೆ ಸಮಸ್ಯೆ ಆಗಲಿಲ್ಲ. ದುರಂತ ನಡೆದಿದ್ದರೂ ಕಾನೂನಾತ್ಮಕವಾಗಿ ಪರಿಹಾರಪಡೆಯಲು ಸರ್ಕಾರಿ ಕಾರಿಗೆ ವಿಮೆಯೂ ಇರಲಿಲ್ಲ!

ADVERTISEMENT

ಕುಮಟಾ ಸಹಾಯಕ ಆಯುಕ್ತರಿಗೆ ನೀಡಲಾದ ಆ ಕಾರು ಮೂಲತಃ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯದ್ದಾಗಿದೆ. ಹೀಗಾಗಿ ಈ ಕಾರಿನ ಎಲ್ಲಾ ಕಡತಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಯಲ್ಲಿಯೇ ಇವೆ. ಹೀಗಾಗಿ ವಿಮಾ ಅವಧಿ ಮುಗಿದ ಬಗ್ಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದಲೇ ಕರ್ನಾಟಕ ಸರ್ಕಾರದ ವಿಮಾ ಇಲಾಖೆಗೆ ಪತ್ರ ರವಾನೆಯಾಗಬೇಕಿತ್ತು. ಮಾತೃ ಇಲಾಖೆಯಿಂದಲೇ ಕಾರಿನ ವಿಮಾ ಕಂತು ಪಾವತಿ ಆಗಬೇಕಿದ್ದು, ಕಾರನ್ನು ಉಪವಿಭಾಗಾಧಿಕಾರಿಗಳಿಗೆ ನೀಡಿದ ಆ ಇಲಾಖೆ ಅಧಿಕಾರಿಗಳು ವಿಮೆ ಬಗ್ಗೆ ಯೋಚಿಸಿಲ್ಲ. ಹೀಗಾಗಿ ಸಕಾಲದಲ್ಲಿ ಸರ್ಕಾರ ವಿಮಾ ಕಂತು ಪಾವತಿಸಿದ ಕಾರಣ ಅಪಘಾತದ ಅವಧಿಯಲ್ಲಿ ವಿಮೆ ಚಾಲನೆಯಲ್ಲಿರಲಿಲ್ಲ.

ವಿಮಾ ಕಂತು ಪಾವತಿ ಸಮಸ್ಯೆ ಬಗ್ಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಶಿವಕ್ಕ ಮಾದರ್ ಅವರಿಗೆ ಫೋನ್ ಮಾಡಿದರೂ ಅವರು ಕರೆ ಸ್ವೀಕರಿಸಿಲ್ಲ. ತಮ್ಮ ಇಲಾಖೆಯ ವಾಹನದ ಕಾರಿನ ವಿಮಾ ಅವಧಿ ಮುಗಿದಿರುವ ವಿಷಯ ಅವರಿಗೂ ಅರಿವಿರುವ ಹಾಗಿಲ್ಲ. ಅಪಘಾತಕ್ಕೆ ಕಾರಣವಾದ ಶ್ರೀಕುಮಾರ ಬಸ್ಸಿನ ದಾಖಲೆಗಳು ಸರಿಯಾಗಿದ್ದ ಕಾರಣ ಬಸ್ಸಿನ ವಿಮೆ ಆಧಾರದಲ್ಲಿ ಸರ್ಕಾರಿ ಕಾರಿನ ದುರಸ್ಥಿ ನಡೆಯಲಿದ್ದು, ಪೊಲೀಸ್ ವಶದಲ್ಲಿರುವ ವಾಹನ ಈ ದಿನ ಬಿಡುಗಡೆಯಾಗುವ ಸಾಧ್ಯತೆಯಿದೆ.

ADVERTISEMENT
  • Trending
  • Comments
  • Latest

ಆಕ್ಷೆಪಣೆ ಹಿನ್ನಲೆ ಈ ವರದಿ ಪ್ರಸಾರಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ

October 3, 2025
A life-threatening birthday party!

ಬದುಕಿಗೆ ಮಾರಕವಾದ ಬರ್ತಡೆ ಪಾರ್ಟಿ!

October 7, 2025
A terrifying baby that woke up its parents!

ಪಾಲಕರ ನಿದ್ದೆಗೆಡಿಸಿದ ಭಯಾನಕ ಶಿಶು!

October 4, 2025
ಆರೋಗ್ಯವಂತ ಮಗುವಿಗಾಗಿ ಸ್ವರ್ಣಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Driver who overturned oil truck due to oil spill!

ಎಣ್ಣೆ ಏಟಿಗೆ ಎಣ್ಣೆ ಲಾರಿ ಪಲ್ಟಿ ಮಾಡಿದ ಚಾಲಕ!

October 12, 2025
The hole in the hole is a lifesaver!

ಹೊಂಡದ ಗುಂಡಿಯೇ ಜೀವ ರಕ್ಷಕ!

October 12, 2025
This syrup is the reason for the deterioration of children's health!

ಸರ್ಕಾರವೇ ಹೇಳಿದ ಸತ್ಯ: ಮಕ್ಕಳ ಆರೋಗ್ಯ ಹದಗೆಡಲು ಈ ಸಿರಪ್ ಕಾರಣ!

October 11, 2025
ADVERTISEMENT
Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ‌

Copyright © 2025 MobileTime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋