`ಮಕ್ಕಳ ಮನಸ್ಸು ಗೆದ್ದು ಅವರಲ್ಲಿ ಜ್ಞಾನ ತುಂಬುವ ಶಿಕ್ಷಕರ ಸೇವೆ ಸದಾ ಸ್ಮರಣೀಯ’ ಎಂದು ಶಿಕ್ಷಣ ತಜ್ಞ ಸುರೇಶ್ ಕುಲಕರ್ಣಿ ಅವರು ಹೇಳಿದ್ದಾರೆ. ಯಲ್ಲಾಪುರದ ಹೋಲಿರೋಜರಿ ಪ್ರೌಢಶಾಲೆಯ ಸಭಾಭವನದಲ್ಲಿ ಉಪನ್ಯಾಸ ನೀಡಿದ ಅವರು `ಮಕ್ಕಳ ಮನಸ್ಸು ಅರಿತು ಅವರ ಜೊತೆ ಸಂತೋಷದಿoದ ಸಂವಹನ ನಡೆಸಿದಾಗ ಮನಸ್ಸು ಅರಳುತ್ತದೆ. ಆ ವೇಳೆ ಜ್ಞಾನ ಬೆರೆಸುವ ಶಿಕ್ಷಕ ಕಾರ್ಯ ಅತ್ಯಂತ ಪವೀತ್ರವಾದದ್ದು’ ಎಂದು ಬಣ್ಣಿಸಿದ್ದಾರೆ
ವಿವಿಧ ಶಿಕ್ಷಕ ಸಂಘಟನೆಗಳ ಅಡಿಯಲ್ಲಿ ಈ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದ್ದು, `ವಿದ್ಯಾರ್ಥಿಗಳೊಂದಿಗೆ ಉತ್ತಮ ಸಂವಹನಕ್ಕಾಗಿ ಯಾವ ರೀತಿಯ ವಿಧಾನವನ್ನು ಅಳವಡಿಸಿಕೊಳ್ಳಬೇಕು?’ ಎನ್ನುವುದರ ಬಗ್ಗೆ ಶಿಕ್ಷಣ ತಜ್ಞರು ಅರಿವು ಮೂಡಿಸಿದ್ದಾರೆ. `ಸರಳ ಘಟನೆಗಳನ್ನು ಹಾಗೂ ಜ್ಞಾನದ ಸಂಗ್ರಹ ಮಾಡಿಕೊಂಡು ಮಗುವಿನ ಪ್ರಶ್ನೆಗೆ ಉತ್ತರಗಳನ್ನ ನೀಡಿದರೆ ಆ ಮಗು ಶಿಕ್ಷಕರನ್ನು ಪ್ರೀತಿಸುತ್ತದೆ. ಆಗ ಮಗು ಕಲಿಸಿದ ಗುರುವನ್ನು ಸದಾ ನೆನಪಿಸುತ್ತದೆ’ ಎಂದು ಶಿಕ್ಷಣ ತಜ್ಞ ಸುರೇಶ್ ಕುಲಕರ್ಣಿ ಅವರು ವಿವರಿಸಿದರು.
ಶಿಕ್ಷಣಾಧಿಕಾರಿ ರೇಖಾ ನಾಯ್ಕ ಅವರು `ಮಕ್ಕಳಿಗೆ ಆಸಕ್ತಿದಾಯಕವಾಗಿ ಕಲಿಸಲು ಶಿಕ್ಷಕರಿಗೆ ಉಪನ್ಯಾಸ ಕಾರ್ಯಕ್ರಮಗಳು ನೆರವಾಗುತ್ತದೆ’ ಎಂದರು. ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಜಯ್ ನಾಯಕ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ನಾರಾಯಣ ನಾಯಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಆರ್ ಆರ್ ಭಟ್, ಸಹ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷರಾದ ವೆಂಕಟೇಶ್ ಪಾಲನಕರ, ತಾಲೂಕ ಪ್ರೌಡಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ನಾರಾಯಣ ನಾವುಡಾ, ರಾಜರಾಜೇಶ್ವರಿ ವಿದ್ಯಾಸಂಸ್ಥೆ ಮಂಚಿಕೇರಿಯ ಸದಸ್ಯ ಎಂ ಕೆ ಭಟ್, ಹೋಲಿ ರೋಸರಿ ಪ್ರೌಢಶಾಲೆಯ ಮುಖ್ಯ ಅಧ್ಯಾಪಕ ಎಂ ರಾಜಶೇಖರ ಅವರು ಕಾರ್ಯಕ್ರಮದಲ್ಲಿದ್ದರು. ಶಿಕ್ಷಕಿ ರೇಖಾ ಭಟ್ಟ ಪ್ರಾರ್ಥಿಸಿದರು. ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಸಂತೋಷ ಜಿಗಳೂರು ಸ್ವಾಗತಿಸಿದರು. ಶಿಕ್ಷಕ ಚಂದ್ರಹಾಸ ನಾಯ್ಕ ನಿರ್ವಹಿಸಿದರು.