• Trending
  • Comments
  • Latest

ಆಕ್ಷೆಪಣೆ ಹಿನ್ನಲೆ ಈ ವರದಿ ಪ್ರಸಾರಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ

October 3, 2025
A life-threatening birthday party!

ಬದುಕಿಗೆ ಮಾರಕವಾದ ಬರ್ತಡೆ ಪಾರ್ಟಿ!

October 7, 2025
A man who earned three paise a month looted three crores!

ಮೂರು ಕಾಸಿನ ಸಂಬಳಕ್ಕಿದ್ದವ ಮೂರು ಕೋಟಿ ಕೊಳ್ಳೆಹೊಡೆದ!

October 25, 2025
ಆರೋಗ್ಯವಂತ ಮಗುವಿಗಾಗಿ ಸ್ವರ್ಣಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Skill-appropriate employment

ಉದ್ಯೋಗ ಅವಕಾಶ: ನಾಲ್ಕು ಹುದ್ದೆಗಳ ನೇಮಕಾತಿ ಪ್ರಕಟಣೆ

November 7, 2025

ಜನಗಣತಿ: ಪ್ರಾಯೋಗಿಕ ಪರೀಕ್ಷೆಗೆ ಜೊಯಿಡಾ ಆಯ್ಕೆ

November 7, 2025
2025 ಸೆಪ್ಟೆಂಬರ್ 30ರ ದಿನ ಭವಿಷ್ಯ

2025 ನವೆಂಬರ್ 8ರ ದಿನ ಭವಿಷ್ಯ

November 7, 2025
  • Trending
  • Comments
  • Latest

ಆಕ್ಷೆಪಣೆ ಹಿನ್ನಲೆ ಈ ವರದಿ ಪ್ರಸಾರಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ

October 3, 2025
A life-threatening birthday party!

ಬದುಕಿಗೆ ಮಾರಕವಾದ ಬರ್ತಡೆ ಪಾರ್ಟಿ!

October 7, 2025
A man who earned three paise a month looted three crores!

ಮೂರು ಕಾಸಿನ ಸಂಬಳಕ್ಕಿದ್ದವ ಮೂರು ಕೋಟಿ ಕೊಳ್ಳೆಹೊಡೆದ!

October 25, 2025
ಆರೋಗ್ಯವಂತ ಮಗುವಿಗಾಗಿ ಸ್ವರ್ಣಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Skill-appropriate employment

ಉದ್ಯೋಗ ಅವಕಾಶ: ನಾಲ್ಕು ಹುದ್ದೆಗಳ ನೇಮಕಾತಿ ಪ್ರಕಟಣೆ

November 7, 2025

ಜನಗಣತಿ: ಪ್ರಾಯೋಗಿಕ ಪರೀಕ್ಷೆಗೆ ಜೊಯಿಡಾ ಆಯ್ಕೆ

November 7, 2025
2025 ಸೆಪ್ಟೆಂಬರ್ 30ರ ದಿನ ಭವಿಷ್ಯ

2025 ನವೆಂಬರ್ 8ರ ದಿನ ಭವಿಷ್ಯ

November 7, 2025
  • Home
  • Janamata
Friday, November 7, 2025
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ‌
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ‌
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಮೂರು ಕಾಸಿನ ಸಂಬಳಕ್ಕಿದ್ದವ ಮೂರು ಕೋಟಿ ಕೊಳ್ಳೆಹೊಡೆದ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಈಚೆಗೆ ಆರ್ಥಿಕ ಅಪರಾತಪರ ಪ್ರಕರಣಗಳು ಹೆಚ್ಚಾಗಿದೆ. ಸೊಸೈಟಿ, ಅರ್ಬನ್ ಬ್ಯಾಂಕ್ ಹಗರಣಗಳಿಂದ ಜನ ನೊಂದಿದ್ದಾರೆ. ಈ ಬೆನ್ನಲ್ಲೆ ಪ್ರತಿಷ್ಠಿತ ಬ್ಯಾಂಕುಗಳಲ್ಲಿಯೂ ಆರ್ಥಿಕ ಅಪರಾಧಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿನ್ನಲೆ ಎಷ್ಟೇ ಆಪ್ತರಾದರೂ ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆವಹಿಸುವುದು ಸೂಕ್ತ.

Achyutkumar by Achyutkumar
October 25, 2025
A man who earned three paise a month looted three crores!
Share on FacebookShare on WhatsappShare on Twitter

ಕರ್ನಾಟಕ ಬ್ಯಾಂಕ್ ಉದ್ಯೋಗಿಯಾಗಿದ್ದ ಮಂಜುನಾಥ ಭಟ್ಟ ಅವರು ಅದೇ ಬ್ಯಾಂಕಿಗೆ ಮೋಸ ಮಾಡಿದ್ದಾರೆ. ಜೊತೆಗೆ ಗ್ರಾಹಕರು ಠೇವಣಿಯಿರಿಸಿದ್ದ ಕೋಟ್ಯಾಂತರ ರೂಪಾಯಿಯನ್ನು ಅವರು ಕೊಳ್ಳೆಹೊಡೆದಿದ್ದಾರೆ!

ADVERTISEMENT

ಸಿದ್ದಾಪುರ ತಾಲೂಕಿನ ಹೆಗ್ಗರಣಿಯ ಮಂಜುನಾಥ ಶ್ರೀಧರ ಭಟ್ಟ ಅವರು 2013ರ ಅಗಸ್ಟ 5ರಂದು ಕರ್ನಾಟಕ ಬ್ಯಾಂಕ್ ಸೇರಿದರು. ಪ್ರೊಬಶನರಿ ಕ್ಲರ್ಕ ಆಗಿ ಕೆಲಸಕ್ಕೆ ಸೇರಿದ ಅವರು 2014ರ ಡಿಸೆಂಬರ್ 24ರಂದು ಪದೋನ್ನತಿಪಡೆದು ಚನ್ನಗಿರಿ ಶಾಖೆಗೆ ವರ್ಗವಾದರು. ಅದಾದ ನಂತರ 2023ರ ಜನವರಿ 20ರಂದು ಸಿದ್ದಾಪುರ ಶಾಖೆಗೆ ವರ್ಗವಾಗಿ ಬಂದರು. ಹಲಗೇರಿಯ ಅರಮನೆಯಲ್ಲಿ ವಾಸವಾಗಿರುವ ಅವರು ಕರ್ನಾಟಕ ಬ್ಯಾಂಕ್ ಗ್ರಾಹಕ ಸೇವಾ ಕೇಂದ್ರದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.

ADVERTISEMENT

ಗ್ರಾಹಕ ಸೇವಾ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಮಂಜುನಾಥ ಭಟ್ಟ ಅವರು ಬ್ಯಾಂಕ್ ಖಾತೆ ಹೊಂದಿದ ಗ್ರಾಹಕರಿಗೆ ವಿವಿಧ ಸೇವೆ ಒದಗಿಸುವ ಮಹತ್ವದ ಹೊಣೆಗಾರಿಕೆಯನ್ನುವಹಿಸಿಕೊಂಡಿದ್ದರು. ಹೀಗಾಗಿ ಗ್ರಾಹಕರ ಖಾತೆಗಳನ್ನು ಆಪರೇಟ್ ಮಾಡುವ ಅಧಿಕಾರ ಮಂಜುನಾಥ ಭಟ್ಟ ಅವರಿಗಿತ್ತು. ಅದನ್ನು ದುರುಪಯೋಗಪಡಿಸಿಕೊಂಡು ಅವರು ಸರಿಸುಮಾರು 3.51ಕೋಟಿ ರೂ ಲೂಟಿ ಮಾಡಿದ್ದಾರೆ. ಮುಖ್ಯವಾಗಿ ಹಿರಿಯ ನಾಗರಿಕರು ಹಾಗೂ ಅಪರಿಚಿತ ಗ್ರಾಹಕರ ಖಾತೆಯಲ್ಲಿದ್ದ ಹಣವನ್ನು ತಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ.

ADVERTISEMENT

2025ರ ಸೆಪ್ಟೆಂಬರ್ 29ರಂದು ಈ ಪ್ರಕರಣ ಬೆಳಕಿಗೆ ಬಂದಿದೆ. ಆ ದಿನ ಬ್ಯಾಂಕ್ ಗ್ರಾಹಕ ಮಹಾಬಲೇಶ್ವರ ಆರ್ ಹೆಗಡೆ ಅವರು ಸಿದ್ದಾಪುರ ಶಾಖೆಗೆ ಬಂದು ತಮ್ಮ ಠೇವಣಿ ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಒಂದು ವರ್ಷ ಮೊದಲೇ ಅವರ 440500ರೂ ಮೌಲ್ಯದ ಠೇವಣಿ ಮುಕ್ತಾಯವಾದ ಬಗ್ಗೆ ಬ್ಯಾಂಕಿನ ಕಂಪ್ಯುಟರ್ ಮಾಹಿತಿ ಕಾಣಿಸಿತು. ಮಹಾಬಲೇಶ್ವರ ಹೆಗಡೆ ಅವರ ಕೈಯಲ್ಲಿದ್ದ ಠೇವಣಿ ಪತ್ರ ನೋಡಿದಾಗ ಅದು ನಕಲಿ ಎಂದು ಅರಿವಾಯಿತು. ಕರ್ನಾಟಕ ಬ್ಯಾಂಕ್ ಹೆಸರಿನಲ್ಲಿಯೇ ನಕಲಿ ರಸೀದಿ ಹಾಗೂ ಪ್ರಮಾಣ ಪತ್ರ ನೀಡಿದವರ ಹುಡುಕಾಟ ನಡೆಸಿದಾಗ ಮಂಜುನಾಥ ಭಟ್ಟ ಅವರ ಮುಖವಾಡ ಕಳಚಿ ಬಿದ್ದಿತು.

ಅದಾದ ನಂತರ ಬ್ಯಾಂಕಿನವರು ಆಂತರಿಕ ತನಿಖೆ ನಡೆಸಿದರು. ಆಗ, ಮಂಜುನಾಥ ಭಟ್ಟರು ಮಹಾಬಲೇಶ್ವರ ಆರ್ ಹೆಗಡೆ ಅವರ ಠೇವಣಿಯನ್ನು ಮುರಿದು, ಆ ಹಣವನ್ನು ತಮ್ಮ ಐಸಿಐಸಿಐ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿರುವುದು ಗೊತ್ತಾಯಿತು. ಗ್ರಾಹಕರಿಗೆ ಈ ವಿಷಯ ಅರಿವಾಗದ ಹಾಗೇ ಮಾಡಲು ಎಸ್ ಎಂ ಎಸ್ ಸೇವೆ ಸ್ಥಗಿತಗೊಳಿಸಿದ್ದು ಸಹ ಈ ವೇಳೆ ಗಮನಕ್ಕೆಬಂದಿತು. ಆಂತರಿಕ ತನಿಖೆ ಮುಂದುವರೆದಾಗ ಮಹಾಬಲೇಶ್ವರ ಹೆಗಡೆ ಅವರಂತೆ ಅನೇಕರಿಗೆ ಮಂಜುನಾಥ ಭಟ್ಟ ಅವರು ವಂಚಿಸಿರುವುದು ಗೊತ್ತಾಯಿತು. ಬ್ಯಾಂಕ್ ಗ್ರಾಹಕರ ಠೇವಣಿ ಮುಚ್ಚಿ, ಎಸ್‌ಎಂಎಸ್ ಅಲರ್ಟ ಸೇವೆ ರದ್ದುಗೊಳಿಸಿ ಗ್ರಾಹಕರಿಗೆ ಠೇವಣಿ ಮುಂದುವರೆದ ಬಗ್ಗೆ ನಕಲಿ ಪ್ರಮಾಣ ಪತ್ರ ನೀಡಿದ ಅನೇಕ ನಿರ್ದಶನಗಳು ಸಿಕ್ಕವು.

ಕರ್ನಾಟಕ ಬ್ಯಾಂಕಿನವರು ಇನ್ನಷ್ಟು ಆಳಕ್ಕೆ ತನಿಖೆ ನಡೆಸಿದಾಗ ಒಟ್ಟು 3,51,84.349ರೂ ಹಣಕಾಸಿನ ಅವ್ಯವಹಾರ ಕಾಣಿಸಿತು. ಈ ಎಲ್ಲಾ ಹಣವೂ ಕರ್ನಾಟಕ ಬ್ಯಾಂಕಿನ ಉದ್ಯೋಗಿ ಮಂಜುನಾಥ ಭಟ್ಟರೇ ಕಬಳಿಸಿರುವುದು ನೋಡಿ ಬ್ಯಾಂಕಿನ ಶಾಖಾ ಪ್ರಬಂಧಕ ಶಂಬುಲಿoಗ ಭಟ್ಟ ಅವರು ಆಘಾತಕ್ಕೆ ಒಳಗಾದರು. ಈ ಎಲ್ಲಾ ವಿಷಯಗಳ ಬಗ್ಗೆ ಮೇಲಧಿಕಾರಿಗಳಿಗೆ ಅವರು ಮಾಹಿತಿ ನೀಡಿದ್ದು, ಕೊನೆಗೆ ಮೂರುವರೆ ಕೋಟಿ ರೂ ವಂಚಿಸಿ ಬ್ಯಾಂಕಿಗೆ ಮೂರು ನಾಮ ಹಾಕಿದ ಮಂಜುನಾಥ ಭಟ್ಟರ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು. `ಮಂಜುನಾಥ ಭಟ್ಟ ಒಬ್ಬರೇ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಣ ಲೂಟಿ ಹೊಡೆಯುವ ಧೈರ್ಯ ಮಾಡಿರಲಿಕ್ಕಿಲ್ಲ. ಅವರ ಜೊತೆ ಇನ್ನಿತರರು ಶಾಮೀಲಾಗಿದ್ದಾರೆ’ ಎಂಬ ಶಂಕೆಯಿದೆ.

ನಿಮ್ಮ ಮೊಬೈಲಿಗೆ ಬ್ಯಾಂಕ್ ಎಸ್‌ಎಎಸ್ ಬರುತ್ತಿದೆಯಾ? ನಿಮ್ಮ ಬಳಿಯಿರುವ ಠೇವಣಿ ಅಸಲಿಯಾ? ನಕಲಿಯಾ? ಈಗಲೇ ಪರಿಕ್ಷಿಸಿಕೊಳ್ಳಿ!

Share1378SendTweet861
  • Trending
  • Comments
  • Latest

ಆಕ್ಷೆಪಣೆ ಹಿನ್ನಲೆ ಈ ವರದಿ ಪ್ರಸಾರಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ

October 3, 2025
A life-threatening birthday party!

ಬದುಕಿಗೆ ಮಾರಕವಾದ ಬರ್ತಡೆ ಪಾರ್ಟಿ!

October 7, 2025
A man who earned three paise a month looted three crores!

ಮೂರು ಕಾಸಿನ ಸಂಬಳಕ್ಕಿದ್ದವ ಮೂರು ಕೋಟಿ ಕೊಳ್ಳೆಹೊಡೆದ!

October 25, 2025
ಆರೋಗ್ಯವಂತ ಮಗುವಿಗಾಗಿ ಸ್ವರ್ಣಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Skill-appropriate employment

ಉದ್ಯೋಗ ಅವಕಾಶ: ನಾಲ್ಕು ಹುದ್ದೆಗಳ ನೇಮಕಾತಿ ಪ್ರಕಟಣೆ

November 7, 2025

ಜನಗಣತಿ: ಪ್ರಾಯೋಗಿಕ ಪರೀಕ್ಷೆಗೆ ಜೊಯಿಡಾ ಆಯ್ಕೆ

November 7, 2025
2025 ಸೆಪ್ಟೆಂಬರ್ 30ರ ದಿನ ಭವಿಷ್ಯ

2025 ನವೆಂಬರ್ 8ರ ದಿನ ಭವಿಷ್ಯ

November 7, 2025
ADVERTISEMENT
  • Home
  • Janamata

Copyright © 2025 MobileTime.in Owned By: Mobile Media Network LLP Maintained By: Naik and Co.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ‌

Copyright © 2025 MobileTime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋