ADVERTISEMENT
  • Home
Sunday, October 12, 2025
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ‌
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ‌
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಹಣಕಾಸು ವಿಷಯದಲ್ಲಿ ಕಲಹ: ನಡುಬೀದಿಯಲ್ಲಿ ಹೊಡೆದಾಟ!

Achyutkumar by Achyutkumar
A A
Share on FacebookShare on WhatsappShare on Twitter
ADVERTISEMENT

ಹಣಕಾಸು ವಿಷಯವಾಗಿ ಕಾರವಾರದಲ್ಲಿ ಹೊಡೆದಾಟ ನಡೆದಿದೆ. ಕಡವಾಡ ಸುಲ್ತಾನಪುರದ ಮಹಮದ್ ರಯಾನ್ ಹಾಗೂ ಕಡವಾಡದ ಮಹಾದೇವ ದೇವಸ್ಥಾನದ ಬಳಿಯ ಕಾರ್ತಿಕ ಕಡವಾಡಕರ್ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ದೀಪಿಕಾ ಕಡವಾಡಕರ ಹಾಗೂ ಅಮೋಘ ಕಡವಾಡಕರ್ ಸಹ ಮಹಮದ್ ರಯಾನ್ ಅವರಿಗೆ ಬೆದರಿಕೆ ಒಡ್ಡಿದ್ದಾರೆ.

Advertisement. Scroll to continue reading.
ADVERTISEMENT

ಮಹಮದ್ ರಯಾನ್ ಅವರು ವರ್ಷದ ಹಿಂದೆ ಪ್ಲಿಪ್ ಕಾರ್ಟ ಡಿಲೆವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದರು. ಆ ಅವಧಿಯಲ್ಲಿ ಕಾರ್ತಿಕ ಕಡವಾಡಕರ್ ಅವರು ಆನ್‌ಲೈನ್ ಮೂಲಕ 3 ಸಾವಿರ ರೂ ಬೆಲೆಯ ಶೂ ಆರ್ಡರ್ ಮಾಡಿದ್ದರು. ಮಹಮದ್ ರಯಾನ್ ಅವರು ಕಾರ್ತಿಕ ಕಡವಾಡಕರ್ ಅವರ ಮನೆಗೆ ಶೂ ಡಿಲೆವರಿ ಮಾಡಲು ಹೋಗಿದ್ದರು. ಆಗ, ಕಾರ್ತಿಕ ಕಡವಾಡಕರ್ ಅವರು `ತನ್ನ ಬಳಿ ದುಡ್ಡಿಲ್ಲ. ಈಗ ನೀನೇ ದುಡ್ಡು ಕೊಡು. ನಂತರ ನಾನು ಮರಳಿಸುವೆ’ ಎಂದಿದ್ದರು. ಆಗ, ಮಹಮದ್ ರಯಾನ್ ಅವರು 3 ಸಾವಿರ ರೂ ಹಣ ಪಾವತಿಸಿ ಆ ಬೂಟು ಬಿಡಿಸಿಕೊಟ್ಟಿದ್ದರು.

ADVERTISEMENT

ಅದಾಗಿ ಒಂದು ವರ್ಷ ಕಳೆದರೂ 3 ಸಾವಿರ ರೂಪಾಯಿಯನ್ನು ಕಾರ್ತಿಕ ಕಡವಾಡಕರ್ ಅವರು ಮರು ಪಾವತಿ ಮಾಡಿರಲಿಲ್ಲ. ಈ ಬಗ್ಗೆ ಮಹಮದ್ ರಯಾನ್ ಸಾಕಷ್ಟು ಬಾರಿ ಕೇಳಿದ್ದರು. ಆದರೆ, ಕಾರ್ತಿಕ ಕಡವಾಡಕರ್ ಆ ಹಣ ಮಾತ್ರ ಕೊಡುತ್ತಿರಲಿಲ್ಲ. ಮೂರು ವಾರದ ಹಿಂದೆ ಹಣದ ವಿಷಯವಾಗಿ ಕಡವಾಡ-ಸುಂಕೇರಿ ಸೇತುವೆ ಬಳಿ ಕಾರ್ತಿಕ ಕಡವಾಡಕರ ಹಾಗೂ ಮಹಮದ್ ರಯಾನ್ ನಡುವೆ ಜಗಳ ನಡೆಯಿತು. ಆಗ, `ನಿನ್ನ ಹಣ ಕೊಡುವುದೇ ಇಲ್ಲ’ ಎಂದು ಕಾರ್ತಿ ಕಡವಾಡಕರ್ ಜೋರಾಗಿ ಹೇಳಿದ್ದರು.

ADVERTISEMENT

ಹೀಗಿರುವಾಗ ಅಕ್ಟೊಬರ್ 1ರಂದು ದಾಂಡಿಯಾ ನೋಡಲು ಸುಲ್ತಾನಪುರ ರಸ್ತೆಯಲ್ಲಿ ಮಹಮದ್ ರಯಾನ್ ಅವರು ನಡೆದು ಹೋಗುತ್ತಿದ್ದರು. ಆಗ, ಕಾರ್ತಿಕ ಕಡವಾಡಕರ್ ಹಾಗೂ ದೀಪಿಕಾ ಕಡವಾಡಕರ್ ಅಲ್ಲಿ ಸ್ಕೂಟಿಯಲ್ಲಿ ಬಂದು ಮಹಮದ್ ರಯಾನ್ ಅವರನ್ನು ಅಡ್ಡಗಟ್ಟಿದರು. ಆಗಲೂ ಅವರಿಬ್ಬರು ಜಗಳ ಶುರು ಮಾಡಿದ್ದು, ಕಾರ್ತಿಕ ಕಡವಾಡಕರ್ ಅವರು ತಮ್ಮ ಕೈಯಲ್ಲಿರುವ ಕಬ್ಬಿಣದ ಬಳೆಯಿಂದ ಮಹಮದ್ ರಯಾನ್ ಅವರಿಗೆ ಹೊಡೆದರು. ಪರಿಣಾಮ ಮಹಮದ್ ರಯಾನ್ ಅವರು ಆಸ್ಪತ್ರೆ ಸೇರಿದರು. ಆ ವೇಳೆ ಅಮೋಘ ಕಡವಾಡಕರ್ ಫೋನ್ ಮಾಡಿ ಜೀವ ಬೆದರಿಕೆ ಒಡ್ಡಿದ ಬಗ್ಗೆ ಮಹಮದ್ ರಯಾನ್ ಅವರು ಪೊಲೀಸ್ ದೂರು ನೀಡಿದರು.

ADVERTISEMENT
  • Trending
  • Comments
  • Latest

ಆಕ್ಷೆಪಣೆ ಹಿನ್ನಲೆ ಈ ವರದಿ ಪ್ರಸಾರಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ

October 3, 2025
A life-threatening birthday party!

ಬದುಕಿಗೆ ಮಾರಕವಾದ ಬರ್ತಡೆ ಪಾರ್ಟಿ!

October 7, 2025
A terrifying baby that woke up its parents!

ಪಾಲಕರ ನಿದ್ದೆಗೆಡಿಸಿದ ಭಯಾನಕ ಶಿಶು!

October 4, 2025
ಆರೋಗ್ಯವಂತ ಮಗುವಿಗಾಗಿ ಸ್ವರ್ಣಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
The hole in the hole is a lifesaver!

ಹೊಂಡದ ಗುಂಡಿಯೇ ಜೀವ ರಕ್ಷಕ!

October 12, 2025
This syrup is the reason for the deterioration of children's health!

ಸರ್ಕಾರವೇ ಹೇಳಿದ ಸತ್ಯ: ಮಕ್ಕಳ ಆರೋಗ್ಯ ಹದಗೆಡಲು ಈ ಸಿರಪ್ ಕಾರಣ!

October 11, 2025
2025 ಸೆಪ್ಟೆಂಬರ್ 30ರ ದಿನ ಭವಿಷ್ಯ

2025 ಅಕ್ಟೋಬರ್ 12ರ ದಿನ ಭವಿಷ್ಯ

October 11, 2025
ADVERTISEMENT
Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ‌

Copyright © 2025 MobileTime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋