ಶಿರಸಿಯಲ್ಲಿ ಸಾವನಪ್ಪಿದವರ ಶವ ಸ್ಮಶಾನಕ್ಕೆ ಬಂದಾಗ ಅವರ ಅಂತ್ಯಕ್ರಿಯೆಗೆ ಸಹಕರಿಸುತ್ತಿದ್ದ ಗಣಪತಿ ಮಡಿವಾಳ ಅವರ ಬದುಕು ಅಂತ್ಯವಾಗಿದೆ. ಅಲ್ಪಕಾಲದ ಅನಾರೋಗ್ಯದ ಪರಿಣಾಮ 42ನೇ ವಯಸ್ಸಿನಲ್ಲಿಯೇ ಅವರು ಭೂ ಲೋಕದ ಯಾತ್ರೆ ಮುಗಿಸಿದ್ದಾರೆ.
Advertisement. Scroll to continue reading.
ಶಿರಸಿಯ ಮುಖ್ಯ ಪ್ರದೇಶದಲ್ಲಿರುವ ಸ್ಮಶಾನ ಹಾಳು ಬಿದ್ದಿತ್ತು. ಅದನ್ನು ಸಮಾನ ಮನಸ್ಕರ ಸಂಘಟನೆಯವರು ಮತ್ತೆ ಸಿದ್ಧಪಡಿಸಿದ್ದರು. ಅಲ್ಲಿಯೇ `ನೆಮ್ಮದಿ ಕುಟೀರ’ ಎಂಬ ಸಾಹಿತ್ಯ-ಸಂಘಟನೆಯ ದಾಮವನ್ನು ಸ್ಥಾಪಿಸಿದ್ದರು. ಅಲ್ಲಿನ ಸ್ಮಶಾನ ಭೂಮಿಯಲ್ಲಿ ಗಣಪತಿ ಮಡಿವಾಳ ಅವರು ಕಳೆದ 9 ವರ್ಷಗಳಿಂದ ಶ್ರಮಿಸುತ್ತಿದ್ದರು.
ಆಪ್ತರು ಸಾವನಪ್ಪಿದ ದುಖಃದಲ್ಲಿರುವವರಿಗೆ ಗಣಪತಿ ಮಡಿವಾಳ ಅವರು ಸಮಾಧಾನ ಮಾಡುತ್ತಿದ್ದರು. ಅವರ ಮನಸ್ಸಿಗೆ ನೋವಾಗದ ರೀತಿಯಲ್ಲಿ ಅಂತ್ಯಕ್ರಿಯೆಗೆ ಸಕಲ ವ್ಯವಸ್ಥೆ ಮಾಡಿಕೊಡುತ್ತಿದ್ದರು. ಗಣಪತಿ ಮಡಿವಾಳ ಅವರು ತಮಗೆ ಒಪ್ಪಿಸಿದ ಕೆಲಸವನ್ನು ಅತ್ಯಂತ ನಿಷ್ಟೆ ಹಾಗೂ ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಿದ್ದರು. ನೆಮ್ಮದಿ ಕುಟೀರ ರಾಜ್ಯಕ್ಕೆ ಮಾದರಿಯಾಗಿ ಗುರುತಿಸಿಕೊಳ್ಳುವಲ್ಲಿ ಗಣಪತಿ ಮಡಿವಾಳ ಅವರ ಶ್ರಮವೂ ಅಪಾರವಾಗಿತ್ತು.
ಈ ನಡುವೆ ಗಣಪತಿ ಮಡಿವಾಳ ಅವರು ಅನಾರೋಗ್ಯಕ್ಕೆ ಒಳಗಾದರು. ಕಲಗೋಡ ಊರಿನವರಾಗಿದ್ದ ಅವರು ಮಳಲಗಾಂವಿನಲ್ಲಿರುವ ತಮ್ಮ ಸಹೋದರಿ ಮನೆಯಲ್ಲಿ ಆರೈಕೆಯಲ್ಲಿದ್ದರು. ಸೋಮವಾರ ಅವರು ಅಲ್ಲಿಯೇ ತಮ್ಮ ಕೊನೆಯ ಉಸಿರೆಳೆದರು. ನೆಮ್ಮದಿ ರುದಭೂಮಿಯ ಉಸ್ತುವಾರಿ ವಿ ಪಿ ಹೆಗಡೆ ಮತ್ತು ಜೀವಜಲ ಕಾರ್ಯಪಡೆಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಅವರು ಗಣಪತಿ ಮಡಿವಾಳ ಅವರ ಸೇವೆ ಸ್ಮರಿಸಿದರು.