ಭೂಸಾರ ಸಂರಕ್ಷಣೆ, ಕೃಷಿ ಅರಣ್ಯ ರಕ್ಷಣೆ, ದೇವರ ಕಡು ಅಧ್ಯಯನ ಹಾಗೂ ಔಷಧಿ ಸಸ್ಯಗಳ ಕುರಿತಾದ ಜ್ಞಾನಕ್ಕಾಗಿ ಶಿರಸಿಯ ಸ್ಕೊಡ್ವೆಸ್ ಸಂಸ್ಥೆಗೆ ಪರಿಸರ ಪ್ರಶಸ್ತಿ ಸಿಕ್ಕಿದೆ.
ಪರಿಸರ ಮತ್ತು ಜೀವವೈವಿದ್ಯ ಕ್ಷೇತ್ರದ ಸಾಧಕ ಸಂಸ್ಥೆಗಳಿಗೆ ನೀಡುವ `ಚೇಂಜ್ ಮೇಕರ್’ ಪ್ರಶಸ್ತಿಗೆ ಶಿರಸಿಯ ಸ್ಕೊಡ್ವೆಸ್ ಸಂಸ್ಥೆ ಪಾತ್ರವಾಗಿದೆ. ಹೈದರಾಬಾದಿನನ ಸಿಎಸ್ಆರ್ನೌ ವೇದಿಕೆಯೂ ಈ ಪ್ರಶಸ್ತಿ ಘೋಷಿಸಿದೆ. ಜಲಾನಯನ, ಭೂಸಾರ ಸಂರಕ್ಷಣೆ, ಕೃಷಿ ಅರಣ್ಯ, ದೇವರ ಕಾಡು, ಔಷಧಿ ಸಸ್ಯಗಳ ಸಂರಕ್ಷಣೆ, ಪರಿಸರ ಸಂರಕ್ಷಣೆಯಲ್ಲಿ ಸ್ಕೋಡ್ವೆಸ್ ಸಂಸ್ಥೆ ಮಾಡಿದ ಸಾಧನೆ ಗಮನಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ.
ನವೆಂಬರ್ 10ರಂದು ಹೈದರಾಬಾದಿನ ಶಿಲ್ಪ ಕಲಾ ವೇದಿಕೆಯಲ್ಲಿ ಪ್ರಶಸ್ತಿ ವಿತರಣೆ ನಡೆಯಲಿದೆ. ದಕ್ಷಿಣ ಭಾರತದ ಅತಿ ದೊಡ್ಡ ಸಿಎಸ್ಆರ್ ಶೃಂಗ ಸಭೆಯಲ್ಲಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಅವರು ಭಾಗವಹಿಸಲಿದ್ದು, ಅದೇ ವೇದಿಕೆಯಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಈ ವಿಷಯದ ಬಗ್ಗೆ ಇದೀಗ ಸಂಸ್ಥೆಯ ಕಾರ್ಯಕ್ರಮ ಅಧಿಕಾರಿ ನಾರಾಯಣ ಹೆಗಡೆ ಅವರು ಮಾಹಿತಿ ನೀಡಿದರು.