ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!
January 3, 2026
ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!
January 3, 2026
ರಂಜಿತಾ ಕೊಂದ ರಫೀಕ್ ಇನ್ನಿಲ್ಲ!
January 4, 2026
ಆರು ವರ್ಷಗಳಿಂದ ಪೊಲೀಸರ ಕಣ್ತಪ್ಪಿಸಿಕೊಂಡು ಓಡಾಡುತ್ತಿದ್ದ ಆರೋಪಿಗೆ ಕೋರ್ಟು 40 ಬಾರಿ ವಾರೆಂಟ್ ಹೊರಡಿಸಿದ್ದು,, ಅದಾಗಿಯೂ ನ್ಯಾಯಾಲಯಕ್ಕೆ ಹಾಜರಾಗದೇ ಬಂಡತನ ಮೆರೆದಿದ್ದ ಸೋಮನಿಂಗ ಭಂಡಗಿ ಅವರನ್ನು ಪೊಲೀಸರು ಸೆದೆಬಡಿದಿದ್ದಾರೆ.
ಹಳಿಯಾಳದ ಸೋಮನಿಂಗ ನೀಲಕಂಠ ಭಡಂಗಿ ಅವರು ಹಲ್ಲೆ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಈ ಹಿನ್ನಲೆ ಆರು ವರ್ಷದ ಹಿಂದೆ ಅವರು ನ್ಯಾಯಾಲಯದಿಂದ ಜಾಮೀನುಪಡೆದಿದ್ದರು. ಆದರೆ, ಮತ್ತೆ ನ್ಯಾಯಾಲಯದ ಕಡೆ ಮುಖ ಹಾಕಿರಲಿಲ್ಲ. ಹೀಗಾಗಿ ಕೋರ್ಟು ವಾರೆಂಟ್ ಜಾರಿ ಮಾಡಿದ್ದು, ಅದಕ್ಕೆ ಸಹ ತಲೆಕೆಡಿಸಿಕೊಂಡಿರಲಿಲ್ಲ. 40 ಬಾರಿ ವಾರೆಂಟ್ ಆದರೂ ನೀಲಕಂಠ ಭಂಡಗಿ ಸಿಕ್ಕಿರಲಿಲ್ಲ.
ಈ ಹಿನ್ನಲೆ ಹಳಿಯಾಳ ಪೊಲೀಸ್ ಠಾಣೆಯವರು ವಿಶೇಷ ಕಾರ್ಯಾಚರಣೆ ನಡೆಸಿದರು. ಸಂಕನಕೊಪ್ಪದಲ್ಲಿ ಆತ ಅಡಿಗಿರುವ ಸುಳಿವು ಆಧರಿಸಿ ರಾತ್ರಿ ವೇಳೆ ದಾಳಿ ನಡೆಸಿದರು. ಸಿಪಿಐ ಜಯಪಾಲ್ ಪಾಟೀಲ್, ಪಿಎಸ್ಐ ಬಸವರಾಜ ಮಬನೂರ, ಕೃಷ್ಣಾ ಅರಕೇರಿ ಅವರ ನೇತೃತ್ವದಲ್ಲಿ ಎಎಸ್ಐ ವೆಂಕಟೇಶ ತೆಗ್ಗಿನ, ಸಿಪಿಸಿ ಶ್ರೀಶೈಲ್ ಜಿ ಎಂ, ಲಕ್ಷ್ಮಣ ಪೂಜಾರಿ, ಅರವಿಂದ ಭಜಂತ್ರಿ ಮತ್ತು ರಾಘವೇಂದ್ರ ಕೆರವಾಡ ಆರೋಪಿಯನ್ನು ಬಂಧಿಸಿದರು.

This will close in 6 seconds
You cannot copy content of this page