ಭಾರತೀಯ ನೌಕಾನೆಲೆಗೆ ಸಂಬoಧಿಸಿದ ಮದ್ದುಗುಂಡುಗಳನ್ನು ಸಂಗ್ರಹಿಸಿಡುವ `ವಜ್ರಕೋಶ’ದಲ್ಲಿ ಸ್ಪೋಟ ಸಂಭವಿಸಿದ ಕುರಿತು mobiletime.in ಪ್ರಕಟಿಸಿದ ವರದಿಗೆ ನೌಕಾನೆಲೆ ಅಧಿಕಾರಿಗಳು ಸ್ಪಂದಿಸಿದ್ದಾರೆ. `ನೌಕಾ ಶಸ್ತ್ರಾಸ್ತ್ರ ಡಿಪೋದಲ್ಲಿ ಶಸ್ತ್ರಾಸ್ತ್ರಗಳ ನಿಷ್ಕ್ರಿಯಗೊಳಿಸುವ ಪ್ರಕ್ರಿಯೆಯಿಂದ ಸ್ಪೋಟವಾಗಿದೆ. ಯಾವುದೇ ಅನಾಹುತ ನಡೆದಿಲ್ಲ’ ಎಂದು ನೌಕಾನೆಲೆಯವರು ಸ್ಪಷ್ಟನೆ ನೀಡಿದ್ದಾರೆ.
Advertisement. Scroll to continue reading.
ವಜ್ರಕೋಶದ ಬಳಿ ಭಾರೀ ಪ್ರಮಾಣದಲ್ಲಿ ಸ್ಪೋಟದ ಸದ್ದು ಕೇಳಿದ್ದರಿಂದ ಜನ ಆತಂಕಗೊAಡಿದ್ದರು. ದೊಡ್ಡ ಪ್ರಮಾಣದ ಹೊಗೆ ಹೊರ ಹೋಗುವುದನ್ನು ನೋಡಿ ಕಂಗಾಲಾಗಿದ್ದರು. ಅದರ ಜೊತೆ ಅಂಕೋಲಾ ಅಲಗೇರಿಯ ಮೂರು ಮನೆಗಳಿಗೂ ಬಿರುಕು ಮೂಡಿದ್ದು, ಸ್ಪೋಟದ ಬಗ್ಗೆ ಅನೇಕ ಅನುಮಾನಗಳು ವ್ಯಕ್ತವಾಗಿದ್ದವು. ಈ ಬಗ್ಗೆ ಮಾಹಿತಿ ಸಂಗ್ರಹಿಸಿ mobiletime.in ವರದಿ ಪ್ರಕಟಿಸಿದ್ದು, ಭಾರತೀಯ ನೌಕಾನೆಲೆ ಅಧಿಕಾರಿಗಳು ಸ್ಪೋಟದ ರಹಸ್ಯ ಬಹಿರಂಗಪಡಿಸಿದ್ದಾರೆ.
`ಈ ಸದ್ದು ಮತ್ತು ಕಂಪನವು ನೌಕಾ ಶಸ್ತ್ರಾಸ್ತ್ರ ಡಿಪೋದಲ್ಲಿ ನಡೆದ ವಾಡಿಕೆಯ ಶಸ್ತ್ರಾಸ್ತ್ರಗಳ ನಿಷ್ಕ್ರಿಯಗೊಳಿಸುವ ಪ್ರಕ್ರಿಯೆಯಿಂದ ಉಂಟಾಗಿದೆಯೇಹೊರತು ಯಾವುದೇ ಅನಾಹುತ ಸಂಭವಿಸಿಲ್ಲ’ ಎಂದು ನೌಕಾಪಡೆ ಅಧಿಕಾರಿಗಳು ಹೇಳಿದ್ದಾರೆ. `ಈ ಚಟುವಟಿಕೆಯನ್ನು ಅತ್ಯಂತ ನಿಯಂತ್ರಿತ ವಾತಾವರಣದಲ್ಲಿ ಹಾಗೂ ವಿಷಯ ತಜ್ಞರ ಸಮ್ಮುಖದಲ್ಲಿ ಮತ್ತು ನಿಗದಿಪಡಿಸಿದ ಸುರಕ್ಷತಾ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ನಡೆಸಲಾಗಿದೆ. ಈ ಪ್ರಕ್ರಿಯೆಯು ಸಂಪೂರ್ಣ ಸುರಕ್ಷಿತವಾಗಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ’ ಎಂದಿದ್ದಾರೆ.
ಅದಾಗಿಯೂ, ಸ್ಫೋಟದ ಸದ್ದಿನಿಂದ ಸ್ಥಳೀಯ ನಿವಾಸಿಗಳಲ್ಲಿ ಉಂಟಾಗಿರುವ ಆತಂಕವನ್ನು ನೌಕಾಪಡೆ ಗಂಭೀರವಾಗಿ ಪರಿಗಣಿಸಿದೆ. ಜನರ ಕಾಳಜಿಗೆ ಸ್ಪಂದಿಸಲು ಮತ್ತು ಅವರ ಭಯ ನಿವಾರಿಸಲು ನೌಕಾ ಅಧಿಕಾರಿಗಳು ಜಿಲ್ಲಾಡಡಳಿತದೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ವಿವರಿಸಿದ್ದಾರೆ. `ಸ್ಥಳೀಯ ಸಮುದಾಯದ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಭಾರತೀಯ ನೌಕಾಪಡೆ ಸದಾ ಬದ್ಧವಾಗಿದೆ’ ಎಂದು ಪುನರುಚ್ಚರಿಸಿದ್ದಾರೆ.