ಆಫ್ರಿಕಾದಿಂದ ಶಿರಸಿಗೆ ಬಂದ ಮೊಹಮದ್ ಸಾಬ್ ಅವರಿಗೆ ಮೂವರು ಸೇರಿ ಹೊಡೆದಿದ್ದಾರೆ. ಉದ್ಯೋಗಕ್ಕಾಗಿ ಆಫ್ರಿಕಾದಲ್ಲಿ ನಡೆದ ಕಲಹ ಈ ಹೊಡೆದಾಟಕ್ಕೆ ಕಾರಣವಾಗಿದೆ.
ಹೆಗಡೆಕಟ್ಟಾ ಸಮೀಪದ ಶಿವಳ್ಳಿಯ ಮೊಹಮದ್ ಅನೀಸ್ ಅಬ್ದುಲ್ ಸಮದ್ ಸಾಬ್ ಅವರು ವಾಸವಾಗಿದ್ದಾರೆ. ಅವರು ಸೌತ್ ಆಫ್ರಿಕಾದಲ್ಲಿ ವಾಚ್ ರಿಪೇರಿ ಕೆಲಸ ಮಾಡಿಕೊಂಡಿದ್ದಾರೆ. ಅದೇ ದೇಶದಲ್ಲಿ ಶಿರಸಿ ಹೊಸಪೇಟೆ ರಸ್ತೆಯ ಸುಫಿಯಾನ ಸಲೀಂ ಶೇಖ್ ಹಾಗೂ ಲಿಕಮಾನ್ ಶಫಿ ಶೇಖ್ ಕಿರಾಣಿ ಅಂಗಡಿಯಲ್ಲಿ ಕೆಲಸಕ್ಕಿದ್ದು, ಆ ಕಿರಾಣಿ ಅಂಗಡಿ ಮಾಲಕ ಅವರಿಬ್ಬರನ್ನು ಕೆಲಸದಿಂದ ತೆಗೆದ ಕಾರಣ ಮಹಮದ್ ಸಾಬ್ ಅವರು ಪೆಟ್ಟು ತಿಂದಿದ್ದಾರೆ.
ಸುಫಿಯಾನ ಶೇಖ್ ಹಾಗೂ ಲಿಕಮಾನ್ ಶೇಖ್ ಕೆಲಸ ಮಾಡುತ್ತಿದ್ದ ಕಿರಾಣಿ ಅಂಗಡಿಯಲ್ಲಿ ಮಹಮದ್ ಸಾಬ್ ಅವರ ಮಾವನ ಮಗ ಮೋಶಿನ್ ಅಬ್ದುಲ್ ವಹಾಬ್ ಸಹ ಕೆಲಸ ಮಾಡುತ್ತಿದ್ದರು. ಮೋಶಿನ್ ವಹಾಬ್ ಹಾಗೂ ಸುಫಿಯಾನ ಶೇಖ್ ನಡುವೆ ಆಗಾಗ ಜಗಳ ನಡೆಯುತ್ತಿದ್ದು, ಮಹಮದ್ ಸಾಬ್ ಮಧ್ಯಸ್ಥಿಕೆವಹಿಸಿ ಬುದ್ದಿ ಹೇಳಿದ್ದರು. ಅವರ ಜಗಳ ಸಹಿಸದ ಕಿರಾಣಿ ಅಂಗಡಿ ಮಾಲಕ ಸುಫಿಯಾನ ಶೇಖ್ ಹಾಗೂ ಲಿಕಮಾನ್ ಶೇಖ್ ಅವರನ್ನು ಕೆಲಸದಿಂದ ತೆಗೆದಿದ್ದರು. ಕೆಲಸ ಇಲ್ಲದ ಕಾರಣ ಅವರಿಬ್ಬರು ಶಿರಸಿಗೆ ಮರಳಿದ್ದರು.
ಹೀಗಿರುವಾಗ ವಾರದ ಹಿಂದೆ ಮಹಮದ್ ಸಾಬ್ ಅವರು ಶಿರಸಿಗೆ ಬಂದಿದ್ದರು. ಸ್ನೇಹಿತ ಖಾಲಿದ್ ಮಹಮದ್ ನಜೀರ್ ಸಾಬ್ ಜೊತೆ ಮಹಮದ್ ಸಾಬ್ ಅವರು ರಿಲಾಯನ್ಸ್ ಮಾಲ್ ಹೋಗಿರುವುದನ್ನು ನೋಡಿ ಸುಫಿಯಾನ ಶೇಖ್ ಅವರನ್ನು ಹಿಂಬಾಲಿಸಿದರು. ಬಿಡ್ಕಿಬೈಲ್ ಮೀನು ಮಾರುಕಟ್ಟೆ ಕಡೆ ಬರುತ್ತಿದ್ದ ಮಹಮದ್ ಸಾಬ್ ಅವರನ್ನು ಶೆಟ್ಟರ್ ಅಂಗಡಿ ಕ್ರಾಸಿನ ಬಳಿ ಸುಫಿಯಾನ ಶೇಖ್ ಅಡ್ಡಗಟ್ಟಿದರು.
`ಮಹಮದ್ ಸಾಬ್ ಅವರ ಪಿತೂರಿಯಿಂದಲೇ ನಮ್ಮ ಕೆಲಸ ಹಾಳಾಗಿದೆ’ ಎಂದು ತಿಳಿದ ಸುಫಿಯಾನ ಶೇಖ್ ಬೈಕಿನಲ್ಲಿ ಹೋಗುವಾಗಲೇ ಮಹಮದ್ ಸಾಬ್ ಅವರ ಬಟ್ಟೆ ಹಿಡಿದು ಎಳೆದರು. ಕೈಯಲ್ಲಿದ್ದ ವಾಚನ್ನು ಕಿತ್ತುಕೊಂಡರು. ಇದರಿಂದ ಹೆದರಿದ ಮಹಮದ್ ಸಾಬ್ ಖಾಲೀದ್ ಅವರ ಅಂಗಡಿಗೆ ಹೋಗಿ ಅವಿತುಕೊಂಡರು.
ಅದಾದ ನಂತರ ಅಲ್ಲಿ ಹೊಸಪೇಟೆ ರಸ್ತೆಯ ಲುಕುಮಾನ್ ಹಾಗೂ ಕೆರೆಗುಂಡಿ ರಸ್ತೆಯ ಅವೇಸ್ ಇಮ್ತಿಯಾಜ್ ಶೇಖ್ ಆಗಮಿಸಿದ್ದು, ಅವರಿಬ್ಬರು ಸೇರಿ ಮೊಹಮದ್ ಸಾಬ್ ಅವರನ್ನು ಹಿಗ್ಗಾಮುಗ್ಗ ಥಳಿಸಿದರು. `ನಮ್ಮನ್ನು ಉದ್ಯೋಗದಿಂದ ತೆಗೆಸಿ ನೀನು ಅಲ್ಲಿ ಕೆಲಸಕ್ಕೆ ಸೇರಿದ್ದೀಯಾ?’ ಎಂದು ಪ್ರಶ್ನಿಸಿ ಮತ್ತಷ್ಟು ಹೊಡೆದರು. ಆ ನೋವು ಸಹಿಸಲಾಗದ ಮೊಹಮದ್ ಸಾಬ್ ಶಿರಸಿ ನಗರ ಠಾಣೆ ಪೊಲೀಸರಿಗೆ ದೂರು ನೀಡಿದರು.
`ದ್ವೇಷ ಒಳ್ಳೆಯದಲ್ಲ’