ಯಲ್ಲಾಪುರದ ಜಿಯೋ ಕಚೇರಿ ಬಳಿ ಕಾರೊಂದು ಹೊಂಡಕ್ಕೆ ಹಾರಿದೆ. ಹೆದ್ದಾರಿಯವರು ಅಳವಡಿಸಿದ್ದ ಸೂಚನಾ ಫಲಕ್ಕೆ ಗುದ್ದಿದ ಕಾರು ಪಕ್ಕದಲ್ಲಿದ್ದ ಕಂದಕಕ್ಕೆ ಬಿದ್ದಿದೆ.
ಬೆಳಗಾವಿಯ ಬಸವರಾಜ ಶಿವಪ್ಪ ಉಳಾಗಡ್ಡಿ ಅವರು ಶನಿವಾರ ಹುಬ್ಬಳ್ಳಿಯಿಂದ ಜೋರಾಗಿ ಕಾರು ಓಡಿಸಿಕೊಂಡು ಹೊರಟಿದ್ದರು. ಯಲ್ಲಾಪುರ ಪಟ್ಟಣ ಪ್ರವೇಶಿಸಿದರೂ ಅವರು ತಮ್ಮ ಕಾರಿನ ವೇಗ ಕಡಿಮೆ ಮಾಡಲಿಲ್ಲ. ಪಟ್ಟಣದ ಬಾಳಗಿ ಕಾಂಪ್ಲೇಕ್ಸ ಬಳಿ ಬಂದ ಅವರು ಅಲ್ಲಿದ್ದ ಸೂಚನಾ ಫಲಕಕ್ಕೆ ತಮ್ಮ ಕಾರು ಗುದ್ದಿದರು. ಅದಾದ ನಂತರ ಯುಕೆ ಸೌಹಾರ್ಧ ಬ್ಯಾಂಕಿನ ಹಿಂದಿದ್ದ ಹೊಂಡಕ್ಕೆ ಕಾರಿನಸಹಿತ ಬಿದ್ದರು.
ಈ ವೇಳೆ ಆ ಕಾರಿನಲ್ಲಿ ಐದು ಜನ ಪ್ರಯಾಣಿಕರಿದ್ದರು. ಅವರೆಲ್ಲರೂ ಅಪಾಯದಿಂದ ಪಾರಾದರು. ಅದಾಗಿಯೂ, ಕಾರಿನಲ್ಲಿದ್ದ ಬೆಳಗಾವಿಯ ರೋಹಿತ ಬೆಳದಡಿ ಅವರಿಗೆ ಪೆಟ್ಟಾಯಿತು. ಕುತ್ತಿಗೆ ಹಿಂಬಾಗದಲ್ಲಿ ನೋವಾದ ಕಾರಣ ರೋಹಿತ ಬೆಳದಡಿ ಅವರು ಆಸ್ಪತ್ರೆ ಸೇರಿದರು. ಕಾರು ಅಪಘಾತಕ್ಕೆ ಕಾರಣನಾದ ಬಸವರಾಜ ಉಳಾಗಡ್ಡಿ ವಿರುದ್ಧ ಅದೇ ಕಾರಿನಲ್ಲಿದ್ದ ಮಹಂತೇಶ ಬಂದಿ ಅವರು ಪೊಲೀಸ್ ದೂರು ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿದರು.
`ಅತಿ ವೇಗ ಅಪಘಾತಕ್ಕೆ ಕಾರಣ’