ಅಂಕೋಲಾದ ಹೊಸುರಿನ ನಯನಾ ಪ್ರಭು ಅವರು ಅತ್ತೆ ಮಾವನ ಕಾಟ ಸಹಿಸಲಾಗದೇ ಸಾವನಪ್ಪಿದ್ದಾರೆ. ಕಷ್ಟದ ಜೀವನ ನಡೆಸುತ್ತಿದ್ದ ನಯನಾ ಪ್ರಭು ಅವರಿಗೆ ಪತಿ ರಾಮಚಂದ್ರ ಪ್ರಭು ಅವರು ಸಹ ಬೆಂಬಲ ನೀಡಿಲ್ಲ. ಹೀಗಾಗಿ ಅವರು ವಿಷ ಸೇವಿಸಿ ಕೊನೆಯುಸಿರೆಳೆದಿದ್ದಾರೆ.
ಯಲ್ಲಾಪುರ ತಾಲೂಕಿನ ಗುಳ್ಳಾಪುರದ ನಯನಾ ಲಕ್ಷಣ ಭಂಡಾರಿ ಅವರನ್ನು 13 ವರ್ಷಗಳ ಹಿಂದೆ ಅಂಕೋಲಾ ಹುಸೂರಿನ ರಾಮಚಂದ್ರ (ಕೃಷ್ಣ) ಪ್ರಭು ಅವರಿಗೆ ಮದುವೆ ಮಾಡಿಕೊಡಲಾಗಿತ್ತು. ಗುರುಹಿರಿಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ಅವರಿಬ್ಬರು ಮದುವೆ ಆಗಿದ್ದರು. ಮದುವೆ ಆದ ನಂತರ ನಯನಾ ಭಂಡಾರಿ ಅವರು ನಯನಾ ಪ್ರಭು ಆಗಿ ಬದಲಾಗಿದ್ದು, ಗಂಡನ ಮನೆ ಪ್ರವೇಶಿಸಿದ ಹೊಸತರಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ, ಕ್ರಮೇಣ ನಯನಾ ಪ್ರಭು ಅವರನ್ನು ಅವರ ಅತ್ತೆ ತಾರಾ ಪ್ರಭು ಹಾಗೂ ಮಾವ ಮೋಹನ ಬಾಲಚಂದ್ರ ಪ್ರಭು ಅವರು ಹಿಂಸಿಸಲು ಶುರು ಮಾಡಿದ್ದರು. ರಾಮಚಂದ್ರ ಪ್ರಭು ಅವರು ಸಹ ಪತ್ನಿಯ ನೋವು ನೋಡಿ ಸುಮ್ಮನಿರುತ್ತಿದ್ದರು.
ನಯನಾ ಪ್ರಭು ಅವರು ತಮಗಾದ ಹಿಂಸೆಯ ಬಗ್ಗೆ ತವರು ಮನೆಯಲ್ಲಿ ಹೇಳಿಕೊಂಡಿದ್ದು, ರಾಜಿ-ಪಂಚಾಯ್ತಿ ಮೂಲಕ ಆ ಸಮಸ್ಯೆ ಬಗೆಹರಿಸಲಾಗಿತ್ತು. ಆದರೆ, ಕೆಲ ಸಮಯದ ನಂತರ ಮತ್ತೆ ಅತ್ತೆ-ಮಾವನ ಕಾಟ ಜೋರಾಯಿತು. ನಯನಾ ಪ್ರಭು ಅವರು ಕೆಲಸಕ್ಕೆ ಹೋಗುತ್ತಿದ್ದು, ಅಲ್ಲಿಯೂ ಅತ್ತೆ-ಮಾವ ಆಗಮಿಸಿ ಕಡ್ಡಿ ಆಡಿಸುತ್ತಿದ್ದರು. ಹೀಗಾಗಿ ನಯನಾ ಪ್ರಭು ಅವರು ಕೆಲಸ ಕಳೆದುಕೊಳ್ಳಬೇಕಾಯಿತು. ಆರ್ಥಿಕವಾಗಿ ಕುಸಿತ ಕಂಡ ನಯನಾ ಪ್ರಭು ಅವರು ತಮ್ಮಲ್ಲಿದ್ದ ಚಿನ್ನಾಭರಣವನ್ನು ಬ್ಯಾಂಕಿನಲ್ಲಿರಿಸಿ ಹಣಪಡೆದಿದ್ದರು. ಆ ವೇಳೆ ಬ್ಯಾಂಕಿನಿAದ ಬಂದ ನೋಟಿಸ್ಸು ನಯನಾ ಪ್ರಭು ಅವರ ಅತ್ತೆ-ಮಾವನ ಕೈ ಸೇರಿತು.
ಇದರಿಂದ ಕೆಂಡಾಮAಡಲರಾದ ಮೋಹನ ಪ್ರಭು ಹಾಗೂ ತಾರಾ ಪ್ರಭು ಅವರು `ನೀ ಬದುಕುವುದಕ್ಕಿಂತ ಸಾಯುವುದೇ ಒಳಿತು’ ಎಂದು ನಿಂದಿಸಿದರು. ಮಾನಸಿಕ ಆಘಾತಕ್ಕೆ ಒಳಗಾದ ನಯನಾ ಪ್ರಭು ಅವರು ಫೆಬ್ರವರಿ 20ರಂದು ವಿಷ ಸೇವಿಸಿದರು. ಸೊಸೆ ವಿಷ ಸೇವಿಸಿದನ್ನು ಅರಿತು ಗಲಿಬಿಲಿಗೊಂಡ ಮೋಹನ ಪ್ರಭು ಅವರು ಆಕೆಯನ್ನು ಮಾದನಗೇರಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿಂದ ಮುಂದೆ ಕುಮಟಾದ ಹೈಟೆಕ್ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿಯೂ ನಯನಾ ಪ್ರಭು ಅವರು ಚೇತರಿಸಿಕೊಳ್ಳದ ಕಾರಣ ಮಂಗಳೂರಿನ ಕೆ ಎಸ್ ಹೆಗಡೆ ಆಸ್ಪತ್ರೆಗೆ ದಾಖಲು ಮಾಡಲಾಯಿತು.
ಎಲ್ಲಾ ಬಗೆಯ ಚಿಕಿತ್ಸೆ ನೀಡಿದರೂ ನಯನಾ ಪ್ರಭು ಅವರು ಬದುಕಲಿಲ್ಲ. ಫೆಬ್ರವರಿ 22ರಂದು ಅವರು ಕೊನೆಯುಸಿರೆಳೆದರು. ಧರ್ಮಸ್ಥಳ ಸಂಘದಲ್ಲಿ ಯೋಜನಾಧಿಕಾರಿಯಾಗಿರುವ ನಾಗರಾಜ ಲಕ್ಷಣ ಭಂಡಾರಿ ಅವರಿಗೆ ತಂಗಿ ಸಾವಿಗೆ ಕಾರಣ ಯಾರು? ಎಂಬುದು ಗೊತ್ತಿತ್ತು. ಹೀಗಾಗಿ ಅವರು ಅಂಕೋಲಾ ಪೊಲೀಸ್ ಠಾಣೆಗೆ ಹೋಗಿ ನಯನಾ ಪ್ರಭು ಅವರ ಸಾವಿಗೆ ಅವರ ಅತ್ತೆ, ಮಾವ ಹಾಗೂ ಗಂಡನೇ ಕಾರಣ ಎಂದು ದೂರು ನೀಡಿದರು. ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
`ಆತ್ಮಹತ್ಯೆ ಅಪರಾಧ’