ಭಟ್ಕಳ ನವಾಯಿತ ಕಾಲೋನಿಯ ಕತ್ತಲ ದಾರಿಯಲ್ಲಿ ಶನಿವಾರ ರಾತ್ರಿ ಕಪ್ಪು ಚಿರತೆ ಓಡಾಟ ನಡೆಸಿದೆ. ಈ ಮಾರ್ಗವಾಗಿ ಸಂಚರಿಸುತ್ತಿದ್ದ ಹಸನ್ ಎಂಬಾತರ ಮೇಲೆ ಮರ್ಯಮ್ ಅಲಿ ಮಸೀದಿ ಬಳಿ ಈ ಚಿರತೆ ದಾಳಿ ಮಾಡಿದೆ. ೬೦ ವರ್ಷದ ವೃದ್ಧ ಹಸನ ಅವರು ಕೂಗಿದಾಗ ಅವರ ಮಗ ಶಫಿ ಆಗಮಿಸಿ ಜೀವ ಕಾಪಾಡಿದ್ದಾರೆ.
ಹಸನ್ ಅವರು ಶನಿವಾರ ಇಶಾ ಪ್ರಾರ್ಥನೆ ಸಲ್ಲಿಸಿ ಮರ್ಯಮ್ ಅಲಿ ಮಸೀದಿಯ ಹಿಂದಿನ ರಸ್ತೆಯಿಂದ ಮನೆಗೆ ಮರಳುತ್ತಿದ್ದರು. ಅವರ ಮನೆಯ ಹತ್ತಿರದಲ್ಲಿಯೇ ಅಡಗಿದ್ದ ಕಪ್ಪು ಚಿರತೆ ಏಕಾಏಕಿ ದಾಳಿ ನಡೆಸಿತು. ಬೆದರಿದ ಅವರು ದೊಡ್ಡದಾಗಿ ಬೊಬ್ಬೆಹೊಡೆದು ನೆಲಕ್ಕೆ ಬಿದ್ದಿದ್ದು, ಈ ವೇಳೆ ಶಫಿ ಅವರು ಆಗಮಿಸಿದ್ದರಿಂದ ಚಿರತೆ ಕಾಡಿನ ಕಡೆ ಓಡಿತು. ಆ ವೇಳೆ ಸಮೀಪದ ಪೊದೆಗಳ ಬಳಿ ಚಿರತೆಗಾಗಿ ಸಾಕಷ್ಟು ಹುಡುಕಾಟ ನಡೆಸಿದರೂ ಅದು ಸಿಗಲಿಲ್ಲ.
ಚಿರತೆ ದಾಳಿಯ ಸುದ್ದಿ ಕೇಳಿ ನೂರಾರು ಜನ ಅಲ್ಲಿ ಜಮಾಯಿಸಿದರು. ಮಸೀದಿಯಿಂದ ೨೦೦ ಮೀ ದೂರದಲ್ಲಿ ವಾಸಿಸುವ ಬಶೀರ್ ಅಹ್ಮದ್ ಅವರು ತಮ್ಮ ಮನೆ ಹೊರಗೆ ಕಪ್ಪು ಚಿರತೆ ನೋಡಿರುವುದಾಗಿ ಹೇಳಿದರು. ಈ ಮಾಹಿತಿ ಆಧರಿಸಿ ಅರಣ್ಯ ಇಲಾಖೆ ಸಿಬ್ಬಂದಿ ಶೋಧ ನಡೆಸಿದರು. ಚಿರತೆಯನ್ನು ಓಡಿಸಲು ಪಟಾಕಿಯನ್ನು ಸಿಡಿಸಿದರು. ಅದಾದ ನಂತರ ಮರಿಯಮ್ ಅಲಿ ಮಸೀದಿಯ ಹಿಂದಿನಿAದ ಹತ್ತಿರದ `ಮಾಂಗೋ ಫಾರ್ಮ್’ ಮತ್ತು ಪಕ್ಕದ ಅರಣ್ಯ ಪ್ರದೇಶದಲ್ಲಿ ಚಿರತೆಗಾಗಿ ಹುಡುಕಾಟ ನಡೆಯಿತು. ಸಾಗರ ರಸ್ತೆ ಅರಣ್ಯದಿಂದ ಕಡ್ವಿನಕಟ್ಟೆ ಮಾರ್ಗದ ಮೂಲPರೀ ಚಇರತೆ ವಸತಿ ಪ್ರದೇಶ ಬಂದಿರುವ ಅನುಮಾನವ್ಯಕ್ತವಾಯಿತು.
ಇದಕ್ಕೆ ಪೂರಕವಾಗಿ ಸ್ಥಳೀಯ ಯುವಕ ಅಬ್ದುಲ್ ರೆಹಮಾನ್ `ಎರಡು ದಿನಗಳ ಹಿಂದೆ ಹೆಗ್ಗಲ್ ನದಿಯ ಬಳಿ ಚಿರತೆ ನೋಡಿದ್ದೇನೆ’ ಎಂದರು. ಗುರುವಾರ ಸಂಜೆ ನದಿಯ ದಡದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಚಿರತೆ ಕಾಣಿಸಿದ್ದು, ಬ್ಯಾಟ್ರಿ ಬೆಳಕು ಕಾಣಿಸಿದಾಗ ಕಾಡಿನ ಕಡೆ ಹೋಗಿರುವುದಾಗಿ ಅವರು ಮಾಹಿತಿ ನೀಡಿದರು. ಮರ್ಯಮ್ ಅಲಿ ಮಸೀದಿಯಿಂದ ಮುಝಮ್ಮಿಲ್ ಮಸೀದಿ ಮತ್ತು ಕಾರಗದ್ದೆ ಪ್ರದೇಶಗಳವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬೀದಿ ನಾಯಿಗಳಿರುವ ಕಾರಣ ಚಿರತೆ ಆಹಾರ ಅರೆಸಿ ಅಲ್ಲಿ ಆಗಮಿಸಿದ ಅನುಮಾನವ್ಯಕ್ತವಾಯಿತು.