ಹಳಿಯಾಳದಲ್ಲಿ ಗೌಂಡಿ ಕೆಲಸ ಮಾಡಿಕೊಂಡಿದ್ದ ಹಸನಸಾಬ್ ಅವರು ಕಳೆ ನಾಶಕ ಸೇವಿಸಿದ್ದಾರೆ. ಮೂರು ಆಸ್ಪತ್ರೆ ಅಲೆದಾಟ ನಡೆಸಿದರೂ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ.
ಹಳಿಯಾಳದ ತತ್ವಣಗಿಯಲ್ಲಿ ಹಸನಸಾಬ್ ಹಜರತಸಾಬ್ ದೇಸಾಯಿ (38) ಅವರು ವಾಸವಾಗಿದ್ದರು. ಕಟ್ಟಡ ಕಾರ್ಮಿಕರಾಗಿದ್ದ ಅವರು ಗೌಂಡಿ ಕೆಲಸ ಮಾಡುವಲ್ಲಿ ಪರಿಣಿತಿಪಡೆದಿದ್ದರು. ಸದ್ಯ ಕೊಲ್ಲಾಪುರದಲ್ಲಿ ಅವರು ವಾಸವಾಗಿದ್ದು, ಅಲ್ಲಿಯೇ ಕೆಲಸ ಮಾಡುತ್ತಿದ್ದರು. ಫೆ 26ರಂದು ಹಳಿಯಾಳಕ್ಕೆ ಬಂದಿದ್ದ ಅವರು ಹೊಲಕ್ಕೆ ಹೊಡೆಯಲು ತಂದಿರಿಸಿದ್ದ ಕಳೆನಾಶಕ ಕುಡಿದರು.
ಇದನ್ನು ಅರಿತ ಹಸನಸಾಬ್ ಅವರ ಪತ್ನಿ ಜುಬೇದಾ ದೇಸಾಯಿ ಅವರು ಪತಿಯನ್ನು ತಕ್ಷಣ ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಆ ದಿನ ಸಂಜೆಯೇ ಅವರನ್ನು ಧಾರವಾಡದ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿಯೂ ಚಿಕಿತ್ಸೆಗೆ ಸ್ಪಂದಿಸದ ಕಾರಣ ಹುಬ್ಬಳ್ಳಿಯ ಕಿಮ್ಸ್’ಗೆ ದಾಖಲು ಮಾಡಲಾಯಿತು. ಆದರೆ, ಅದರಿಂದ ಪ್ರಯೋಜನ ಆಗಲಿಲ್ಲ. ಮಾರ್ಚ 1ರಂದು ಹಸನಸಾಬ್ ದೇಸಾಯಿ ಅವರು ಸಾವನಪ್ಪಿದರು. ಅವರ ಆತ್ಮಹತ್ಯೆ ನಿರ್ಧಾರಕ್ಕೆ ಕಾರಣವೂ ಗೊತ್ತಾಗಲಿಲ್ಲ.