ದಾಂಡೇಲಿಯ ಜಿ ಪ್ಲಸ್ ಟೂ ವಸತಿ ಸಂಕೀರ್ಣದ ಬಳಿ ಇಬ್ಬರು ಬಿಯರ್ ಕುಡಿಯುತ್ತ ಕುಳಿತಿದ್ದು, ಅವರ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಕಾನೂನುಬಾಹಿರವಾಗಿ ಬಿಯರ್ ಕುಡಿದ ಕಾರಣ ಅವರ ವಿರುದ್ಧ ಕಠಿಣ ಕ್ರಮವಾಗಿದೆ!
ದಾಂಡೇಲಿ ಪೆಪರ್ ಮಿಲ್ಲಿನಲ್ಲಿ ಕೆಲಸ ಮಾಡುವ ಮೌಳಂಗಿಯ ಗಜಾನನ ಭೀರಮಣ್ಣ ಕಾಲಕುಂದ್ರಿ (೨೩) ಹಾಗೂ ಬ್ಲಾಕ್ ಪಾಕ್ಟರಿಯಲ್ಲಿ ಕೆಲಸ ಮಾಡುವ ಕೊಂಡಪಾದ ಬಸವರಾಜ ಸಂಗಣ್ಣನವರ್ (೨೮) ಅವರು ಮಾರ್ಚ ೧೫ರ ರಾತ್ರಿ ಪಾರ್ಟಿ ಮಾಡಲು ನಿರ್ಧರಿಸಿದ್ದರು. ಆ ದಿನ ರಾತ್ರಿ ೮ ಗಂಟೆಗೆ ಅವರಿಬ್ಬರು ಬಿಯರ್ ಬಾಟಲಿ ಹಿಡಿದು ಜಿ ಪ್ಲಸ್ ಟೂ ವಸತಿ ಸಂಕೀರ್ಣದ ಬಳಿ ಕುಳಿತಿದ್ದರು. ಅಲ್ಲಿಗೆ ಆಗಮಿಸಿದ ಪಿಸೈ ಅಮೀನಸಾಬ್ ಅತ್ತಾರ್ ಅವರು ಇಬ್ಬರನ್ನು ವಿಚಾರಣೆಗೆ ಒಳಪಡಿಸಿದರು.
ಅಷ್ಟರಲ್ಲಿ ಅವರಿಬ್ಬರು ಬಿಯರ್ ಕುಡಿದು ಖಾಲಿ ಮಾಡಿದ್ದರೂ ಸಹ ಅವರ ಬಳಿಯಿದ್ದ ಖಾಲಿ ಬಾಟಲಿಯನ್ನು ಪೊಲೀಸರು ವಶಕ್ಕೆಪಡೆದರು. ಸಾರ್ವಜನಿಕ ಸ್ಥಳದಲ್ಲಿ ಕಾನೂನುಬಾಹಿರವಾಗಿ ಬಿಯರ್ ಕುಡಿಯುವುದು ತಪ್ಪು ಎಂದು ಪೊಲೀಸರು ಅವರಿಗೆ ಅರಿವು ಮೂಡಿಸಿದರು. ಅದಾದ ನಂತರ ಮಾಡಿದ ತಪ್ಪಿಗೆ ಅನುಸಾರವಾಗಿ ಅವರಿಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿದರು. ಸಾರ್ವಜನಿಕ ಸ್ಥಳದಲ್ಲಿ ಬಿಯರ್ ಸೇವಿಸಿದ ಕಾರಣ ಗಜಾನನ ಕಾಲಕುಂದಿ ಹಾಗೂ ಬಸವರಾಜ ಸಂಗಣ್ಣನವರ್ ಅವರು ನ್ಯಾಯಾಲಯಕ್ಕೆ ಅಲೆದಾಡಬೇಕಿದೆ.
`ಮದ್ಯಪಾನ ಆರೋಗ್ಯಕ್ಕೆ ಒಳಿತಲ್ಲ’