`ಭೂ ವೈಕುಂಠ’ ಎಂದೇ ಪ್ರಸಿದ್ಧಿಪಡೆದಿರುವ ಶಿರಸಿಯ ಶ್ರೀಕ್ಷೇತ್ರ ಮಂಜಗುಣಿ ವೆಂಕಟ್ರಮಣ ದೇವಸ್ಥಾನದ ಅಭಿವೃದ್ಧಿ ಕೆಲಸಗಳು ಜೋರಾಗಿದೆ. ಈಗಾಲೇ ಪೂರ್ಣಗೊಂಡಿರುವ ಜೀಣೋದ್ಧಾರ ಹಾಗೂ ನೂತನ ಅಭಿವೃದ್ಧಿ ಕಾರ್ಯಗಳ ಸಮರ್ಪಣಾ ಸಮಾರಂಭವನ್ನು ಮಾರ್ಚ 8ರಂದು ನಡೆಸಲು ಆಡಳಿತ ಮಂಡಳಿ ನಿರ್ಧರಿಸಿದೆ.
Advertisement. Scroll to continue reading.
ಈ ಕುರಿತು ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ಟ ಮಂಜುಗುಣಿ ಅವರು ಮಾಹಿತಿ ನೀಡಿದ್ದು, ಸರ್ವ ಭಕ್ತರನ್ನು ಕಾರ್ಯಕ್ರಮಕ್ಕೆ ಆಮಂತ್ರಿಸಿದ್ದಾರೆ. `ದೇಗುಲ ಕಟ್ಟಡಗಳ ಜೀರ್ಣೋದ್ಧಾರ ಕೆಲಸ 2000ನೇ ಇಸ್ವಿಯಿಂದ ಶುರುವಾಗಿದ್ದು ನಿತ್ಯ ಪ್ರಸಾದ ಭೋಜನ ವ್ಯವಸ್ಥೆ, ಗೋಶಾಲೆ, ತೀರ್ಥಕೆರೆಗಳ ನವೀಕರಣ, ಬೆಳ್ಳಿಯ ಅಶ್ವರಥ, ಮಹಾರಥದ ಜೀರ್ಣೋದ್ಧಾರ ಕೆಲಸಗಳು ನೆರವೇರಿದೆ. ಪ್ರಸ್ತುತ ರಜತಮಯ ಶಿಖರ ಕಲಶ, ವಿಮಾನ ವೇಂಕಟೇಶ ಪ್ರತಿಷ್ಠೆ ಹಾಗೂ ಕರ್ನಾಟಕದಲ್ಲಿಯೇ ಅತಿ ವಿಸ್ತಾರವೆನಿಸಿದ ಸಂರಕ್ಷಣಾ ಪಟದಂತಹ ಅಪೂರ್ವ ಕಾರ್ಯಗಳು ಲೋಕಾರ್ಪಣೆಗೊಳ್ಳಲಿವೆ’ ಎಂದವರು ವಿವರಿಸಿದ್ದಾರೆ.
`ಮಾರ್ಚ 7ರ ಶನಿವಾರದಂದು ಪೂರ್ವಾಂಗ ಧಾರ್ಮಿಕ ವಿಧಿವಿಧಾನಗಳು ಜರುಗಲಿವೆ. ಮಾರ್ಚ 8ರ ಭಾನುವಾರ ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಬೆಳಿಗ್ಗೆ 9.30ಕ್ಕೆ ನೂತನ ರಜತಮಯ (ಬೆಳ್ಳಿ) ಶಿಖರ ಕಲಶ ಸ್ಥಾಪನೆ, 10:15ಕ್ಕೆ ಶಿಖರ ಕಲಶದಲ್ಲಿ ವಿಮಾನ ವೇಂಕಟೇಶ ದೇವರ ಪ್ರತಿಷ್ಠಾಪನೆ, 10.20ಕ್ಕೆ 185 ಅಡಿ ಉದ್ದ ಹಾಗೂ 111 ಅಡಿ ಅಗಲದ ಬೃಹತ್ ಸಂರಕ್ಷಣಾ ಪಟದ ಸಮರ್ಪಣೆ ಆಗಲಿದೆ. ಇದು ಕರ್ನಾಟಕದಲ್ಲಿಯೇ ಅತ್ಯಂತ ವಿಸ್ತಾರವಾದ ಆಚ್ಛಾದನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ’ ಎಂದವರು ಹೆಮ್ಮೆಯಿಂದ ಹೇಳಿದ್ದಾರೆ.
`ಬೆಳಿಗ್ಗೆ 10.35ಕ್ಕೆ ನೂತನವಾಗಿ ನಿರ್ಮಾಣಗೊಂಡ ಬೆಳ್ಳಿಯ ಭೂ ವೈಕುಂಠದ್ವಾರ ಮಂಟಪ ಪ್ರವೇಶ ಹಾಗೂ ಶಿಲಾಮಯ ಗಜಮಿಥುನಗಳ ಸಮರ್ಪಣೆ ಎಂದು ತಿಳಿಸಿದ ಅವರು ಮಧ್ಯಾಹ್ನ 12.45ಕ್ಕೆ ತೀರ್ಥಪ್ರಸಾದ ಹಾಗೂ ಅನ್ನಪ್ರಸಾದ ವಿತರಣೆ ನಡೆಯಲಿದೆ’ ಎಂದವರು ವಿವರಿಸಿದ್ದಾರೆ. ಅಂದು ಮಧ್ಯಾಹ್ನ 1:30ರಿಂದ ಭಜನಾ ಕಾರ್ಯಕ್ರಮ ಹಾಗೂ 3:30ಕ್ಕೆ ಭಕ್ತಾನುಗ್ರಹ ಸಭಾ ಜರುಗಲಿದೆ. ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಶಂಕರ ಜಿ ಪಂಡಿತ್ ಅವರು ಭಾಗವಹಿಸಲಿದ್ದಾರೆ. ಭೂ ವೈಕುಂಠ ದ್ವಾರ ಮಂಟಪಕ್ಕೆ ರೂಪಾಯಿ 5000 ಮೇಲ್ಪಟ್ಟು ನೀಡಿದ ದಾನಿಗಳಿಗೆ ವಿಶೇಷ ಸೇವಾಕರ್ತರಿಗೆ, ಅಭಿಯಂತರರಿಗೆ, ಹಾಗೂ ಶಿಲ್ಪಿಗಳಿಗೆ ಶ್ರೀದೇವರ ಪ್ರಸಾದ ವಿತರಣೆ ಹಾಗೂ ಸಂಜೆ 5.30ಕ್ಕೆ ತುಳಸಿ ಹೆಗಡೆ ಮತ್ತು ತಂಡದಿAದ ವಿಶ್ವಾಭಿಗಮನಮ್ ಯಕ್ಷ ನೃತ್ಯ ರೂಪಕ ಪ್ರಸ್ತುತಿ ಆಗಲಿದೆ’ ಎಂದವರು ಮಾಹಿತಿ ನೀಡಿದ್ದಾರೆ.