ಶಿರಸಿ ಆನೆಹೊಂಡದ ಬಳಿ ಅಲೆದಾಡುತ್ತಿದ್ದ ಮೆಕ್ಯಾನಿಕ್ ಅವರನ್ನು ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ. ವೈದ್ಯಕೀಯ ವರದಿ `ಪಾಸಿಟಿವ್’ ಬಂದಿದ್ದು, ಅಮಲು ಪದಾರ್ಥ ಸೇವನೆ ದೃಢವಾಗಿದೆ.
ಶಿರಸಿ ಚಿಪಗಿಯ ಜವಳಗುಂಡಿಯಲ್ಲಿ ಕಿರಣ ಗಣೇಶ ದೇವಾಡಿಗ ಅವರು ವಾಸವಾಗಿದ್ದಾರೆ. ಮೆಕ್ಯಾನಿಕ್ ಆಗಿ ಅವರು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ, 26ನೇ ವಯಸ್ಸಿನಲ್ಲಿಯೇ ಅವರು ಅಡ್ಡದಾರಿ ಹಿಡಿದಿದ್ದು, ಮೋಜು-ಮಸ್ತಿಗಾಗಿ ತಮ್ಮ ಜೀವನವನ್ನೇ ಬಲಿ ಕೊಟ್ಟಿದ್ದಾರೆ. ನಶೆಯ ಗುಂಗು ಬರುವುದಕ್ಕಾಗಿ ಅವರು ನಿಷೇಧಿತ ವಸ್ತುಗಳ ಮೋಹಕ್ಕೆ ಒಳಗಾಗಿ ಸಿಕ್ಕಿ ಬಿದ್ದಿದ್ದಾರೆ.
ಮಾರ್ಚ 17ರಂದು ಶಿರಸಿಯ ಆನೆಹೊಮಡದ ಬಳಿ ಕಿರಣ ದೇವಾಡಿಗ ಅವರು ಅಮಲಿನಲ್ಲಿದ್ದರು. ಅಲ್ಲಿ-ಇಲ್ಲಿ ಅಲೆದಾಡುತ್ತಿದ್ದ ಅವರನ್ನು ಪೊಲೀಸರು ತಡೆದರು. ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಮಾದಕ ವ್ಯಸನ ಸೇವಿಸಿರುವ ಅನುಮಾನ ಕಾಡಿತು. ಈ ಹಿನ್ನಲೆ ಪಿಸೈ ಟಿ ನರಸಿಂಹಲು ಅವರು ಕಿರಣ ದೇವಾಡಿಗ ಅವರನ್ನು ಆಸ್ಪತ್ರೆಗೆ ಕಳುಹಿಸಿದರು. ಅಲ್ಲಿನ ವೈದ್ಯಕೀಯ ಪರೀಕ್ಷೆಯಲ್ಲಿ `ಪಾಸಿಟಿª’ ವರದಿ ಬಂದಿದ್ದು, ಗಾಂಜಾ ಸೇವನೆ ದೃಢವಾಯಿತು.
ನಿಷೇಧಿತ ಗಾಂಜಾ ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದ ಕಿರಣ ದೇವಾಡಿಗ ಅವರ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದರು. ಅದಕ್ಕೂ ಮುನ್ನ ಗಾಂಜಾ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆಯೂ ಅರಿವು ಮೂಡಿಸಿದರು. ಮಾಡಿದ ತಪ್ಪಿಗಾಗಿ ಪ್ರಕರಣ ದಾಖಲಿಸಿ ಕಿರಣ ದೇವಾಡಿಗ ಅವರನ್ನು ನ್ಯಾಯಾಯಕ್ಕೆ ಹಾಜರುಪಡಿಸಿದರು.
`ಮಾದಕ ವ್ಯಸನ ಜೀವನಕ್ಕೆ ಮಾರಕ’