ಅರಣ್ಯ ಹಕ್ಕಿಗಾಗಿ ಅತಿಕ್ರಮಣದಾರರು ಸಲ್ಲಿಸಿದ ಅರ್ಜಿ ಪರಿಶೀಲಿಸುವ ಸಮಿತಿ ಪ್ರಮುಖವಾಗಿ ಆರು ಬಗೆಯ ಲೋಪ ಮಾಡಿದೆ. ನ್ಯಾಯವಾದಿ ರವೀಂದ್ರ ನಾಯ್ಕ ಅವರು ಆ ಆರು ಲೋಪಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡುವ ಸಿದ್ಧತೆ ಮಾಡಿಕೊಂಡಿದ್ದಾರೆ. ಏಪ್ರಿಲ್ 9ರಂದು ಶಿರಸಿಯಲ್ಲಿ ಅವರು ಆ ಲೋಪಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ.
ಭಾನುವಾರ ಯಲ್ಲಾಪುರದ ವೆಂಕಟ್ರಮಣ ದೇವಸ್ಥಾನದಲ್ಲಿ ರವೀಂದ್ರ ನಾಯ್ಕ ಅವರು ಅರಣ್ಯ ಅತಿಕ್ರಮಣದಾರರ ಸಭೆ ನಡೆಸಿದ್ದು, ಈ ವೇಳೆ ಸಮಿತಿಯ ಕಾನೂನುಬಾಹಿರ ಚಟುವಟಿಕೆಯ ಬಗ್ಗೆ ವಿವರಿಸಿದ್ದಾರೆ. `ಅರಣ್ಯ ಹಕ್ಕು ಕಾಯಿದೆ ಮತ್ತು ರಾಜ್ಯ ಸರ್ಕಾರದ ನಿರ್ದೇಶನ ಉಲ್ಲಂಘಿಸಿ, ರಾಜ್ಯ ಮಟ್ಟದ ಉಸ್ತವಾರಿ ಸಮಿತಿಯ ನಡವಳಿಕೆಗೆ ವ್ಯತಿರಿಕ್ತವಾಗಿ ಜಂಟಿ ಮಹಜರ್ ಜರುಗುತ್ತಿದೆ’ ಎಂದವರು ಹೇಳಿದ್ದಾರೆ.
`ಉತ್ತರ ಕನ್ನಡ ಜಿಲ್ಲೆಯ 18 ಸಾವಿರಕ್ಕೂ ಅಧಿಕ ಅರಣ್ಯವಾಸಿಗಳು ಡಿಸೆಂಬರ್ 6ರಂದು ಕಾರವಾರದಲ್ಲಿ ಪ್ರತಿಭಟಿಸಿದ್ದು, ಮೂರು ತಲೆಮಾರಿನ ದಾಖಲೆಗೆ ಆಕ್ಷೇಪಿಸಿದ್ದರು. ಈ ಹಿನ್ನಲೆ ರಾಜ್ಯ ಅರಣ್ಯ ಹಕ್ಕು ಉಸ್ತವಾರಿ ಸಮಿತಿಯ ಅಧ್ಯಕ್ಷರಾದ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಜನವರಿ 6ರ ಸಭೆಯಲ್ಲಿ ಮಹಜರ್ ಕುರಿತು ನಡವಳಿಕೆ ದಾಖಲಿಸಿದ್ದರು. ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ಅರಣ್ಯ ಹಕ್ಕು ಕಾಯಿದೆಯ ಉಸ್ತುವಾರಿ ಸಮಿತಿ ತೆಗೆದುಕೊಂಡ ನಿರ್ಣಯದಲ್ಲಿ ಅರ್ಜಿಗಳು ದಾಖಲಾತಿ ಅಲಭ್ಯತೆ ಕಾರಣಕ್ಕೆ ತಿರಸ್ಕರಿಸಿದಲ್ಲಿ ಅರಣ್ಯ, ಕಂದಾಯ, ಗ್ರಾಮೀಣಾಭೀವೃದ್ದಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ಅಧಿಕಾರಿಗಳು ಮತ್ತು ಸ್ಥಳೀಯ ಮುಖಂಡರನ್ನು ಒಳಗೊಂಡ ತಂಡದಿAದ ಮುಂದಿನ 45 ದಿನಗಳೊಳಗಾಗಿ ಮಹಜರ್ ಮಾಡಿ, ಅದರ ವರದಿಯನ್ನು ದಾಖಲೆಯನ್ನಾಗಿ ಪರಿಗಣಿಸಲು ಸೂಚಿಸಲಾಗಿತ್ತು’ ಎಂದವರು ವಿವರಿಸಿದ್ದಾರೆ. ಈ ನಡವಳಿಕೆಗೆ ಮತ್ತು ಕಾನೂನಿಗೆ ವ್ಯತಿರಿಕ್ತವಾಗಿ ಜಿಲ್ಲಾಡಳಿತವು ನ್ಯೂನ್ಯತೆಯಿಂದ ಪ್ರಕ್ರಿಯೆ ಜರುಗಿಸಿದೆ’ ಎಂದವರು ಹೇಳಿದ್ದಾರೆ.
ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಸಂಚಾಲಕ ಇಬ್ರಾಹೀಂ ಸಾಬ ಗೌಡಳ್ಳಿ, ಪ್ರಮುಖರಾದ ದಿವಾಕರ್ ಮರಾಠಿ ಆನಗೋಡ, ಯೋಗೇಶ್ ಪುಟ್ಟ ನಾಯ್ಕ ಚಂದಗುಳಿ, ವಿಷ್ಣು ಗಾವಡೆ, ಈಶ್ವರ ನಾಯ್ಕ, ಸುಬ್ರಾಯ ಹೆಗಡೆ ಆನಗೋಡ, ಚಂದ್ರಕಾAತ ಮರಾಠಿ ಹಾಸಣಗಿ, ಬಸ್ತಾö್ಯಂವ್ ಡಿಸೋಜಾ ಕಣ್ಣಿಗೇರಿ, ಶಿವಾನಂದ ನಾಯ್ಕ ಮದನೂರು, ಗಣಪತಿ ಹೆಗಡೆ ಇಡಗುಂದಿ, ರಾಮಚಂದ್ರ ದೇಸಾಯಿ, ಪ್ರೇಮಾನಂದ ಭಂಡಾರಿ ಮಾವಿನಮನೆ, ಸುಭಾಷ್ ಸಿದ್ದಿ, ರಾಮ ತುಕರಾಮ ಗಾವಡೆ, ಶಿವರಾಮ ಆಚಾರಿ ಇತರರು ಸಭೆಯಲ್ಲಿದ್ದರು.