ಅರಣ್ಯ ಹಕ್ಕು ವಿಷಯವಾಗಿ ಹೋರಾಡುತ್ತಿರುವ ನ್ಯಾಯವಾದಿ ರವೀಂದ್ರ ನಾಯ್ಕ ಅವರಿಗೆ ಚಿಕ್ಕಮಂಗಳೂರಿನ ಎನ್ ಆರ್ ಪುರದ ಬಾಳೆಹೊನ್ನೂರು ಪೀಠದ ರಂಭಾಪುರಿ ವೀರಸೋಮೆಶ್ವರ ಸ್ವಾಮೀಜಿ ಆಶೀರ್ವಾದ ಮಾಡಿದ್ದಾರೆ. `ಅರಣ್ಯ ಭೂಮಿ ಹಕ್ಕಿಗೆ ಸಂಬoಧಿಸಿ ಸರ್ಕಾರದ ನೀತಿ ಅವಶ್ಯ. ಅರಣ್ಯ ಭೂಮಿ ಹಕ್ಕಿಗಾಗಿ ಕಾನೂನು ಜಾಗೃತಿ ಅರಣ್ಯವಾಸಿಗಳ ಪೂರಕವಾದ ಕಾರ್ಯ’ ಎಂದು ಶ್ರೀಗಳು ಹೇಳಿದ್ದಾರೆ.
ಜಾಥದ ಅಂಗವಾಗಿ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಮುದ್ರಿಸಿದ ಕಾನೂನು ಜಾಗೃತ ಕರಪತ್ರವನ್ನು ಶ್ರೀಗಳು ಬಿಡುಗಡೆ ಮಾಡಿದ್ದು, `ಪಾರಂಪರಿಕ ಅರಣ್ಯವಾಸಿಗಳ ಸಾಗುವಳಿ ಹಕ್ಕಿಗೆ 3 ತಲೆಮಾರಿನ ನಿರ್ಧಿಷ್ಟ ವಯಕ್ತಿಯ ದಾಖಲೆಗೆ ಒತ್ತಾಯಿಸತಕ್ಕದ್ದಲ್ಲ. ಕಾನೂನು, ಸುತ್ತೋಲೆ ಮತ್ತು ನ್ಯಾಯಾಲಯದ ತೀರ್ಪಿನಂತೆ ಸಾಂಧರ್ಭಿಕ ದಾಖಲೆಗಳ ಅಡಿಯಲ್ಲಿ ಸಾಗುವಳಿ ಹಕ್ಕನ್ನ ವಿತರಿಸಬೇಕು ಎಂಬ ವಿಷಯವನ್ನು ಕರಪತ್ರದಲ್ಲಿ ವಿಶ್ಲೇಷಿಸಲಾಗಿದೆ’ ಎಂದರು.
`ಅರಣ್ಯ ಹಕ್ಕು ಕಾಯಿದೆ ಮಂಜೂರಿ ಪ್ರಕ್ರಿಯೆಯಲ್ಲಿ ಕಾನೂನಿಗೆ ವ್ಯತಿರಿಕ್ತವಾಗಿ ರಾಜ್ಯದಲ್ಲಿ ಒಟ್ಟು 2,95,176 ಅರ್ಜಿಗಳು ದಾಖಲಾಗಿದ್ದು, ಅವುಗಳಲ್ಲಿ 16,700 ಅರ್ಜಿಗಳಿಗೆ (ಶೇ. 5.65 ) ಅರ್ಜಿಗಳಿಗೆ ಮಾನ್ಯತೆ ದೊರಕಿದೆ. ಈ ಪೈಕಿ 262415 ಅರ್ಜಿಗಳು (ಶೇ 88.90) ಅರ್ಜಿಗಳು ತಿರಸ್ಕರಿಸ್ಪಟ್ಟಿದೆ’ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ವಿವರಿಸಿದರು. ಪ್ರಮುಖರಾದ ಮಲ್ಲೇಶಿ ಬಸವಂತಪ್ಪ ಬಾಳೆಹಳ್ಳಿ, ರಾಜಶೇಖರ್ ಬಿ ಗೌಡ, ದೇವರಾಜ ಕೊವೇರ ವದ್ದಲ, ಲಕ್ಷಣ ದೊಡ್ನಳ್ಳಿ, ಸತೀಶ್ ಎಚ್ ಚೌಡರ್, ಬಸಪ್ಪ ಬಸಾಪುರ, ಮಲ್ಲಿಕಾರ್ಜುನ್ ಲೆಕ್ಕದ್, ಗುತ್ಯಪ್ಪ ಬಳಗಿ, ಗುರುಪಾದಪ್ಪ ಹಡಪಾದ ಇತರರಿದ್ದರು.