ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಜೋರಾಗಿ ನಡೆದಿದ್ದು, ಮನೆ ಮನೆಗೂ ಎನ್ಯುಮರೇಷÀನ್ ಫಾರ್ಮ್ ವಿತರಣೆ ಮುಂದುವರೆದಿದೆ. ಎನ್ಯುಮರೇಷನ್ ಫಾರ್ಮ್ ಪಡೆದವರಿಗೆ ಅದನ್ನು ಭರ್ತಿ ಮಾಡುವಲ್ಲಿ ಗೊಂದಲ ಆದರೆ 08382-1950ಗೆ ಫೋನ್ ಮಾಡುವಂತೆ ಜಿಲ್ಲಾಡಳಿತ ಸೂಚಿಸಿದೆ.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಕೆ ಲಕ್ಷಿö್ಮÃಪ್ರಿಯಾ ಅವರು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಸಿದ್ದು, `ಈ ಫಾರಂ ಗಳನ್ನು ಭರ್ತಿ ಮಾಡುವಲ್ಲಿ ಯಾವುದೇ ಗೊಂದಲಗಳಿದ್ದಲ್ಲಿ ಮತದಾರರ ಸಹಾಯವಾಣಿ ಸಂಖ್ಯೆ 08382-1950 ಗೆ ಸಂಪರ್ಕಿಸಿ’ ಎಂದು ಸೂಚಿಸಿದ್ದಾರೆ. `ಈಗಾಗಲೇ ಬಿ.ಎಲ್.ಓ ಗಳು ಮನೆಗಳಿಗೆ ವಿತರಿಸಿರುವ ಎನ್ಯುಮರೇಷÀನ್ ಫಾರ್ಮ್ಗಳನ್ನು ಭರ್ತಿ ಮಾಡಲು ನೆರವಾಗುವ ಉದ್ದೇಶದಿಂದ ಎಲ್ಲಾ ಮತಗಟ್ಟೆಗಳಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಮತದಾರರ ಸಹಾಯ ಕೇಂದ್ರಗಳನ್ನು ತೆರೆಯಲಾಗಿದ್ದು, ಈ ಕೇಂದ್ರಗಳ ನೆರವು ಪಡೆಯುವಂತೆ ಹಾಗೂ ಮತದಾರರ ಉಚಿತ ಸಹಾಯವಾಣಿ ಸಂಖ್ಯೆ 08382-1950 ಗೆ ಕರೆ ಮಾಡಿ ಗೊಂದಲಗಳನ್ನು ಬಗೆಹರಿಸಿಕೊಳ್ಳಬೇಕು’ ಎಂದವರು ಹೇಳಿದ್ದಾರೆ.
`ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದು, ಜಿಲ್ಲೆಯಿಂದ ವಲಸೆ ಹೋಗಿರುವವರ ಮನೆಗಳಿಗೆ ಕೂಡಾ ಎನ್ಯುಮರೇಷÀನ್ ಫಾರ್ಮ್ಗಳನ್ನು ವಿತರಣೆ ಮಾಡಲಾಗಿದ್ದು, ಇಂತಹ ಮತದಾರರು ಆನ್ಲೈನ್ ಮೂಲಕ ಕೂಡಾ ತಮ್ಮ ಫಾರಂ ಭರ್ತಿ ಮಾಡಿ ಸಲ್ಲಿಸಬಹುದಾಗಿದ್ದು, ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರ ಅಗತ್ಯವಿದ್ದಲ್ಲಿ ಹೆಸರುಗಳನ್ನು ವರ್ಗಾವಣೆ ಮಾಡಿಸಿಕೊಳ್ಳಬಹುದಾಗಿದೆ. ಎನ್ಯುಮರೇಷನ್ ಫಾರ್ಮ್ ವಿತರಣೆಯಾಗಿರುವ ಪ್ರತಿಯೊಬ್ಬರೂ ಅವುಗಳನ್ನು ಭರ್ತಿ ಮಾಡಿ ಹಿಂದಿರುಗಿಸುವುದು ಕಡ್ಡಾಯ’ ಎಂದವರು ಹೇಳಿದ್ದಾರೆ. `ಜಿಲ್ಲೆಯಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಕಾರ್ಯದ ಪ್ರಗತಿಯ ಕುರಿತ ಸಂಪೂರ್ಣ ವರದಿಗಳನ್ನು ನಿಗಧಿತವಾಗಿ ಎಲ್ಲಾ ರಾಜಕೀಯ ಪಕ್ಷಗಳಿಗೆ ನೀಡಲಾಗುತ್ತಿದ್ದು, ಈವರೆಗಿನ ಮನೆ ಮನೆ ಭೇಟಿಯ ಸಂದರ್ಭದಲ್ಲಿ ಕಂಡು ಬಂದಿರುವ, ಸ್ಥಳಾಂತರ, ಮರಣ ಹಾಗೂ ದ್ವಿಪ್ರತಿ ಪ್ರಕರಣ ಸೇರಿದಂತೆ ಮತ್ತಿತರ ವಿವರಗಳನ್ನು ತಮ್ಮ ಪಕ್ಷಗಳ ಬಿ.ಎಲ್.ಎ ಗಳಿಂದ ಪರಿಶೀಲಿಸಿಕೊಂಡು ಇದರಲ್ಲಿ ಯಾವುದೇ ಗೊಂದಲಗಳಿದ್ದಲ್ಲಿ ಬಗೆಹರಿಸಿಕೊಳ್ಳುವಂತೆ ಮತ್ತು ಮತದಾರರ ಪಟ್ಟಿ ಸಮಗ್ರ ಪರಿಷ್ಕÀ್ಕರಣೆ ಕಾರ್ಯದ ಸಂಪೂರ್ಣ ಯಶಸ್ಸಿಗೆ ಅಗತ್ಯ ಸಹಕಾರ ನೀಡಬೇಕು’ ಎಂದವರು ಕೋರಿದ್ದಾರೆ.
ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಕಾಂಗ್ರೆಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಕೆ. ಶಂಭುಶೆಟ್ಟಿ, ಸಿ.ಪಿ.ಐ(ಎಂ) ನ ಶಾಂತಾರಾಮ ನಾಯಕ್, ಸಿ.ಪಿ.ಎಂ ನ ಯಮುನಾ ಗಾಂವಕರ್, ಬಿಜೆಪಿಯ ಎನ್.ಎಸ್.ಹೆಗಡೆ, ಜೆ.ಡಿ.ಎಸ್ ನ ಸೂರಜ್ ನಾಯ್ಕ ಸೋನಿ, ಉದಯ ಭೋವಿ, ಚುನಾವಣಾ ಶಾಖೆಯ ಶಿರಸ್ತೇದಾರ್ ಶೇಖ್ ಮತ್ತಿತರರು ಇದ್ದರು.