ಶಿಕ್ಷಕಿಯಾಗಿರುವ ಪ್ರೀತಿ ನಾಯ್ಕ ಅವರಿಗೆ ಕಷ್ಟಗಳ ಮೇಲೆ ಕಷ್ಟ ಬರುತ್ತಿದೆ. ಆರು ತಿಂಗಳ ಗರ್ಭಿಣಿಯಾಗಿರುವ ಅವರನ್ನು ಗಂಡ ದೂರ ಮಾಡಿದ್ದು, ತವರು ಸೇರಿದರೂ ನೆಮ್ಮದಿಯಾಗಿ ಬದುಕಲು ಬಿಡುತ್ತಿಲ್ಲ.
ಶಿರಸಿಯ ಇಳಸೂರಿನ ಹೂಡಸಲಮನೆಯಲ್ಲಿ ಪ್ರೀತಿ ಮಹಾಬಲೇಶ್ವರ ನಾಯ್ಕ ಅವರು ವಾಸವಾಗಿದ್ದಾರೆ. ಶಿಕ್ಷಕಿ ಆಗಬೇಕು ಎಂದು ಕನಸು ಕಂಡ ಅವರು ತಮ್ಮ ವೃತ್ತಿ ಜೀವನದ ಆಸೆಯನ್ನು ಪೂರೈಸಿದ್ದಾರೆ. 2017ರಲ್ಲಿ ಎಂ ಬಿ ಗಣಪತಿ ಅವರನ್ನು ಮದುವೆ ಆದ ಪ್ರೀತಿ ನಾಯ್ಕ ಅವರು ಹೊಂದಾಣಿಕೆಯಾಗದ ಕಾರಣ ಅವರಿಂದ ವಿಚ್ಚೇದನಪಡೆದಿದ್ದಾರೆ. ಅದಾದ ನಂತರ 2025ರ ಸೆಪ್ಟೆಂಬರ್ 5ರಂದು ಅವರು ಸಾಗರದ ಆನಂದ ಆರ್ ಅವರನ್ನು ಮದುವೆ ಆಗಿದ್ದಾರೆ. ನಂತರ ಈ ದಂಪತಿ ಸಾಗರಕ್ಕೆ ಹೋಗಿ ವಾಸವಾಗಿದ್ದಾರೆ.
ಆದರೆ, ಪ್ರೀತಿ ನಾಯ್ಕ ಅವರನ್ನು ವರಿಸಿದ ಆನಂದ ಆರ್ ಅವರಿಗೆ ಪತ್ನಿ ಮೇಲೆ ಸಂಶಯ ಶುರುವಾಗಿದೆ. ಪ್ರೀತಿ ನಾಯ್ಕ ಅವರಿಗೆ ಬರುವ ಪ್ರತಿ ಫೋನು-ಮೆಸೆಜನ್ನು ಆನಂದ ಆರ್ ಅವರು ಪರಿಶೀಲಿಸುತ್ತಿದ್ದು, ಪ್ರತಿಯೊಬ್ಬರಿಗೂ ಫೋನ್ ಮಾಡಿ ವಿಚಾರಿಸುವುದನ್ನು ರೂಢಿಸಿಕೊಂಡಿದ್ದಾರೆ. ಇದರೊಂದಿಗೆ `ತವರು ಮನೆಯಿಂದ ಚಿನ್ನ ತಂದು ಕೊಡು’ ಎಂದು ಆನಂದ ಆರ್ ಅವರು ಪತ್ನಿಯನ್ನು ಪೀಡಿಸಿದ್ದಾರೆ. ಚಿನ್ನ ಕೊಡದ ಕಾರಣ ಪತ್ನಿಯನ್ನು ಬ್ಯಾಂಕ್ ಆಫ್ ಬರೋಡಾಗೆ ಕರೆದೊಯ್ದು, ಅವರ ಹೆಸರಿನಲ್ಲಿ 5 ಲಕ್ಷ ರೂ ಸಾಲ ಮಾಡಿ ಮಾರುತಿ ಕಂಪನಿಯ ಕಾರು ಖರಿದಿಸಿದ್ದಾರೆ.
ಅದಾದ ನಂತರವೂ ಮತ್ತೆ ಹಣ ಕೊಡು ಎಂದು ಆನಂದ ಅವರು ಪೀಡಿಸಿದ್ದು, ಸಂಸಾರ ಉಳಿಸಿಕೊಳ್ಳುವ ಕಾರಣಕ್ಕೆ ಪ್ರೀತಿ ನಾಯ್ಕ ಅವರು ತಮ್ಮಲ್ಲಿದ್ದ ಎಲ್ಲಾ ಹಣವನ್ನು ಪತಿಗೆ ಕೊಟ್ಟಿದ್ದಾರೆ. ಈ ನಡುವೆ ಪ್ರೀತಿ ನಾಯ್ಕ ಅವರು ಗರ್ಭಿಣಿಯಾಗಿದ್ದಾರೆ. ಆಗ, ಆನಂದ ಅವರು `ಆ ಮಗು ತೆಗೆಸು’ ಎಂದು ಪೀಡಿಸಲು ಶುರು ಮಾಡಿದ್ದಾರೆ. `ಮಗು ಜೊತೆ ನಿನ್ನನ್ನು ಕೊಲ್ಲುವೆ’ ಎಂದು ಹೆದರಿಸಿದ್ದಾರೆ. `ನಿನ್ನ ನೌಕರಿ ನೋಡಿ ನಾನು ಮದುವೆ ಆಗಿದ್ದು, ಮಗುವಿಗಾಗಿ ಅಲ್ಲ’ ಎಂದು ಹೇಳಿದ್ದಾರೆ.
ಸಾಗರದಿಂದ ಶಿರಸಿಗೆ ಬಂದ ಪ್ರೀತಿ ನಾಯ್ಕ ಅವರು ಇಲ್ಲಿನ ವಿಜಯ ನಗರದಲ್ಲಿ ಮನೆ ಮಾಡಿದ್ದಾರೆ. ಮೇ 23ರಂದು ಅಲ್ಲಿಗೆ ಬಂದ ಆನಂದ ಆರ್ ಅವರು ಮನೆಯಲ್ಲಿದ್ದ ಎಲ್ಲಾ ಸಾಮಗ್ರಿಗಳನ್ನು ಲಾರಿಯಲ್ಲಿ ತುಂಬಿಕೊAಡು ಹೋಗಿದ್ದಾರೆ. `ನಾನು ಬೇರೆ ಮದುವೆ ಆಗುವೆ’ ಎಂದು ಹೇಳಿ ಅವರು ಅಲ್ಲಿಂದ ಹೊರಟಿದ್ದಾರೆ. `ಈ ವಿಷಯ ಎಲ್ಲಾದರೂ ಹೇಳಿದರೆ, ನಿನ್ನ ಮೇಲೆ ಸುಳ್ಳು ಕೇಸ್ ಹಾಕಿಸುವೆ. ನಿನ್ನ ನೌಕರಿಯನ್ನು ತೆಗೆಸುವೆ’ ಎಂದು ಆನಂದ ಆರ್ ಅವರು ಪ್ರೀತಿ ನಾಯ್ಕ ಅವರಿಗೆ ಬೆದರಿಸಿದ್ದಾರೆ.
ಸದ್ಯ ಆರು ತಿಂಗಳ ಗರ್ಭಿಣಿಯಾಗಿರುವ ಪ್ರೀತಿ ನಾಯ್ಕ ಅವರು ಪತಿ ಕಾಟದಿಂದ ನಲುಗಿದ್ದಾರೆ. ಪತಿ ಸುಧಾರಿಸಿಕೊಳ್ಳಲಿ ಎಂದು ಕಾದ ಅವರು ಅವರ ವರ್ತನೆಯಲ್ಲಿ ಯಾವುದೇ ಸುಧಾರಣೆ ಕಾಣದ ಕಾರಣ ಕಾನೂನು ಹೋರಾಟಕ್ಕಿಳಿದಿದ್ದಾರೆ.
`ಹೆಣ್ಣು ಮಕ್ಕಳನ್ನು ಗೌರವಿಸಿ’