ಹಳಿಯಾಳದ ಬಾಲಾಜಿ ವೈನ್ ಶಾಪ್ ಎದುರು ನಿಲ್ಲಿಸಿದ್ದ ಬೆಳಗಾವಿಯ ಲಕ್ಷಣ ಶವನಗೊಪ್ಪಗೋಳ್ ಅವರ ಸ್ಕೂಟಿ ಕಳ್ಳತನವಾಗಿದ್ದು, ಆ ಸ್ಕೂಟಿ ಹುಡುಕಿ ಹೊರಟ ಪೊಲೀಸರಿಗೆ ಒಟ್ಟು ಮೂರು ಸ್ಕೂಟಿ ಸಿಕ್ಕಿದೆ. ಹಳಿಯಾಳದ ಪೌರ ಕಾರ್ಮಿಕ ಎರಸ್ವಾಮಿ ಹರಿಜನ, ಧಾರವಾಡ ರಸ್ತೆಯ ಅಕ್ಕಸಾಲಿಗ ಮಹೇಶ ಮಿಂಡೋರಕರ್ ಅವರ ಸ್ಕೂಟಿಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಜೂನ್ 25ರಂದು ಬೆಳಗಾವಿಯ ಲಕ್ಷö್ಮಣ ಶವನಗೊಪ್ಪಗೋಳ್ ಅವರು ಹಳಿಯಾಳದ ಬಾಲಾಜಿ ವೈನ್ ಶಾಪ್ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳ್ಳತನವಾಗಿತ್ತು. ಜೂನ್ 18ರಂದು ಹಳಿಯಾಳದ ಪೌರ ಕಾರ್ಮಿಕ ಎರಸ್ವಾಮಿ ಹರಿಜನ ಅವರು ಕೆನರಾ ಬ್ಯಾಂಕ್ ಬಳಿ ನಿಲ್ಲಿಸಿದ ಸ್ಕೂಟಿ ಅಪಹರಣವಾಗಿತ್ತು. ಜೂನ್ 17ರಂದು ಐಸಿಐಸಿಐ ಬ್ಯಾಂಕ್ ಎದುರು ಮಹೇಶ ಮಿಂಡೋಳಕರ್ ಅವರು ನಿಲ್ಲಿಸಿದ ಸ್ಕೂಟಿ ಸಹ ಕಳ್ಳರ ಪಾಲಾಗಿತ್ತು. ಈ ಎಲ್ಲಾ ಕಳ್ಳತನದ ಬಗ್ಗೆ ತಲೆಕೆಡಿಸಿಕೊಂಡ ಪೊಲೀಸರು ಸಿಸಿ ಕ್ಯಾಮರಾ ದಾಖಲೆ ಗಮನಿಸಿದ್ದರು.
ಲಕ್ಷö್ಮಣ ಶವನಗೊಪ್ಪಗೋಳ್ ಅವರ ಸ್ಕೂಟಿ ಕದ್ದ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಿದ್ದು ಅದನ್ನು ಬೆನ್ನತ್ತಿದರು. ಆಗ, ಬೆಳಗಾವಿ ಸರ್ವೋದಯ ನಗರದವ ಅವರು ಸರ್ವೇಶ ಶಿವಲಿಂಗಯ್ಯ ಮಠಪತಿ ಅವರು ಸಿಕ್ಕಿಬಿದ್ದರು. ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಆ ಮೂರು ಸ್ಕೂಟಿ ಕದ್ದಿರುವುದನ್ನು ಸರ್ವೇಶ ಮಠಪತಿ ಅವರು ಒಪ್ಪಿಕೊಂಡರು. ಕದ್ದ ಸ್ಕೂಟಿಗಳನ್ನು ಅವರು ಪ್ರಾಮಾಣಿಕವಾಗಿ ಪೊಲೀಸರಿಗೆ ಒಪ್ಪಿಸಿದರು.
ಸ್ಕೂಟಿ ಕದ್ದ ಕಳ್ಳನನ್ನು ಪೊಲೀಸರು ಬಂಧಿಸಿದರು. ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರ ಸೂಚನೆಯಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ, ಡಿವೈಎಸ್ಪಿ ಶಿವಾನಂದ ಮದರಕಂಡಿ, ಸಿಪಿಐ ಜಯಪಾಲ ಪಾಟೀಲ್, ಪಿಸೈ ಕೃಷ್ಣಗೌಡ ಅರಕೇರಿ, ಮಹೇಶ ಮಾಳಿ, ಅಂಬಿಕಾ ಗಾಣಿಗೆರೆ, ಸಿಬ್ಬಂದಿ ಬಸವರಾಜ ಹಗೇರಿ, ಭೀಮಣ್ಣ, ಶೈಲೇಶ್ ಜಿ ಎಂ, ವಿನೋದ, ಲಕ್ಷಣ ಪೂಜಾರಿ, ಬಸವರಾಜ ಜವಡಿ, ಅರವಿಂದ ಭಜಂತ್ರಿ, ಗಣೇಶ, ಮಲ್ಲಿಕಾರ್ಜುನ ಇತರರು ಈ ಕಾರ್ಯಾಚರಣೆಯಲ್ಲಿದ್ದರು.