ಉತ್ತರ ಕನ್ನಡ ಜಿಲ್ಲೆಯ ವಿವಿಧ ಕಡೆ ವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿಭಾಯಿಸುತ್ತಿದ್ದ ಅಧಿಕಾರಿಗಳು ಸರ್ಕಾರ ವರ್ಗಾವಣೆ ಮಾಡಿದೆ. ಕೆಲ ವಲಯ ಅರಣ್ಯಾಧಿಕಾರಿಗಳನ್ನು ಜಿಲ್ಲೆಯಲ್ಲಿಯೇ ಉಳಿಸಿಕೊಂಡಿದ್ದು, ಕೆಲವರನ್ನು ಬೇರೆ ಜಿಲ್ಲೆಗೆ ವರ್ಗಾಯಿಸಿದೆ.
ರಾಜ್ಯದಲ್ಲಿ ಒಟ್ಟು 40 ವಲಯ ಅರಣ್ಯಾಧಿಕಾರಿಗಳ ವರ್ಗಾವಣೆ ನಡೆದಿದೆ. ಅದರಲ್ಲಿ ಉತ್ತರ ಕನ್ನಡ ಜಿಲ್ಲೆಯ 19 ವಲಯ ಅರಣ್ಯಾಧಿಕಾರಿಗಳು ವರ್ಗವಾಗಿದ್ದಾರೆ. ಜುಲೈ 15ರಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಿಂದ ವರ್ಗಾವಣೆ ಆದೇಶ ಹೊರಬಿದ್ದಿದೆ. ಶಿರಸಿ ವಲಯದ ಆರ್ಎಫ್ಒ ಗಿರೀಶ ನಾಯ್ಕ ಅವರನ್ನು ಹುಲೇಕಲ್ ವಲಯಕ್ಕೆ ಹಾಗೂ ಹುಲೇಕಲ್ ವಲಯದ ಶಿವಾನಂದ ನಿಂಗಾಣಿ ಅವರನ್ನು ಕ್ಯಾದಗಿ ವಲಯಕ್ಕೆ ವರ್ಗಾಯಿಸಲಾಗಿದೆ. ಜಾನ್ಮನೆ ವಲಯದ ಉಷಾ ಕಬ್ಬೇರ ಅವರನ್ನು ಸಿದ್ದಾಪುರ ವಲಯಕ್ಕೆ ಹಾಗೂ ಬನವಾಸಿ ವಲಯದ ಭವ್ಯಾ ನಾಯ್ಕ ಅವರನ್ನು ಶಿರಸಿ ವಲಯಕ್ಕೆ ವರ್ಗಾಯಿಸಲಾಗಿದೆ. ಗೇರುಸೊಪ್ಪ ವಲಯದ ಕಾರ್ತಿಕ ಕಾಂಬಳೆ ಅವರನ್ನು ಬನವಾಸಿ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ.
ಸಿದ್ದಾಪುರದ ಅಜಯಕುಮಾರ ಅವರನ್ನು ಸಾಗರ ವಲಯಕ್ಕೆ ವರ್ಗಾಯಿಸಲಾಗಿದೆ. ಶಿರಸಿ ಸಾಮಾಜಿಕ ಅರಣ್ಯದ ಆರ್ಎಫ್ಒ ಮಾರುತಿ ನಾಯ್ಕ ಅವರನ್ನು ಮಂಚಿಕೇರಿ ವಲಯಕ್ಕೆ ವರ್ಗಾಯಿಸಲಾಗಿದೆ. ಮಂಚಿಕೇರಿ ವಲಯದ ಬಸವರಾಜ ಬೋಜಳ್ಳಿ ಅವರನ್ನು ಇಡಗುಂದಿ ವಲಯಕ್ಕೆ ಹಾಗೂ ಇಡಗುಂದಿಯ ಎಂ ಎಚ್ ನಾಯ್ಕ ಅವರನ್ನು ಯಲ್ಲಾಪುರ ವಲಯಕ್ಕೆ ವರ್ಗ ಮಾಡಲಾಗಿದೆ. ಯಲ್ಲಾಪುರದಲ್ಲಿ ಆರ್ ಎಫ್ ಓ ಆಗಿದ್ದ ಜಿ ವಿ ನರೇಶ್ ಅವರನ್ನು ಬಂಡಿಪುರಕ್ಕೆ ವರ್ಗ ಮಾಡಲಾಗಿದ್ದು, ಕತಗಾಲದ ಪ್ರೀತಿ ನಾಯ್ಕ ಅವರನ್ನು ಹೊನ್ನಾವರ ಸಾಮಾಜಿಕ ಅರಣ್ಯ ವಿಭಾಗಕ್ಕೆ ವರ್ಗ ಮಾಡಲಾಗಿದೆ. ಹೊನ್ನಾವರದ ಸಾಮಾಜಿಕ ಅರಣ್ಯ ವಿಭಾಗದಲ್ಲಿದ್ದ ಎಸ್ ವಿ ಬಂಟ ಅವರನ್ನು ಚಿಕ್ಕಬಳ್ಳಾಪುರಕ್ಕೆ ವರ್ಗಾವಣೆ ಮಾಡಲಾಗಿದೆ.
ಉಳಿದತೆ, ರಾಮನಗುಳಿ ವಲಯದ ಸುರೇಶ್ ನಾಯಕ ಅವರನ್ನು ಹೀರೇಗುತ್ತಿ ವಲಯಕ್ಕೆ ಹಾಗೂ ಅಂಕೋಲಾದ ಪ್ರಮೋದ ನಾಯಕ ಅವರನ್ನು ಹೊನ್ನಾವರ ವಲಯಕ್ಕೆ ವರ್ಗಾಯಿಸಲಾಗಿದೆ. ಹೊನ್ನಾವರದ ಸವಿತಾ ದೇವಾಡಿಗ ಅವರನ್ನು ಕುಮಟಾ ವಲಯಕ್ಕೆ ಹಾಗೂ ಕುಮಟಾದ ಪ್ರವೀಣ ನಾಯಕ ಅವರನ್ನು ದಾಂಡೇಲಿ ಡಿಪೋಗೆ ವರ್ಗಾವಣೆ ಮಾಡಲಾಗಿದೆ. ದಾಂಡೇಲಿಯ ಎನ್ ಎಲ್ ನದಾಫ ಅವರನ್ನು ಹಳಿಯಾಳ ವಲಯಕ್ಕೆ ಹಾಗೂ ಹಳಿಯಾಳದ ಬಸವರಾಜ ಪಣಸೋಲಿ ಅವರನ್ನು ವನ್ಯಜೀವಿ ವಿಭಾಗಕ್ಕೆ ಜೊತೆಗೆ ಪಣಸೋಲಿಯ ರವಿಕಿರಣ ಸಂಪಗಾವಿ ಅವರನ್ನು ಜೊಯಿಡಾ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ.