ತಾಡಪತ್ರೆ ಮುಚ್ಚಿದ ಮಿನಿ ಲಾರಿಯಲ್ಲಿ ಕೋಣಗಳನ್ನು ಸಾಗಿಸಲಾಗುತ್ತಿದ್ದು, ಪೊಲೀಸರು ಹಿಡಿಯುವುದರೊಳಗೆ ಎರಡು ಕೋಣಗಳು ಸಾವನಪ್ಪಿದೆ. ವಧೆಗೆ ಹೋಗುತ್ತಿದ್ದ ಇನ್ನಷ್ಟು ಕೋಣಗಳಿಗೆ ಅಂಕೋಲಾ ಪೊಲೀಸರು ಜೀವದಾನ ಮಾಡಿದ್ದಾರೆ.
ಅಗಸ್ಟ 2ರಂದು ಅಂಕೋಲಾದ ಬಾಳೆಗುಳಿ ಕ್ರಾಸಿನ ಬಳಿ ಮಿನಿ ಲಾರಿಯೊಂದು ನಿಂತಿತ್ತು. ತಾಡಪತ್ರೆ ಹೊದಸಿದ ಆ ಲಾರಿ ಒಳಗಿನಿಂದ ದನಗಳ ಕೂಗು ಜೋರಾಗಿತ್ತು. ಅದನ್ನು ಕೇಳಿದ ಜನ ಪೊಲೀಸರಿಗೆ ಫೋನ್ ಮಾಡಿದ್ದರು. ಚಹ ಅಂಗಡಿ ಮುಂದೆ ನಿಂತಿದ್ದ ಮಿನಿ ಲಾರಿ ಅನುಮಾನ ಹೆಚ್ಚಿಸಿದ್ದು, ಪಿಸೈ ಗುರುನಾಥ ಹಾದಿಮನಿ ಅವರು ಆ ಲಾರಿಯನ್ನು ವಶಕ್ಕೆಪಡೆದರು.
ಒಳಗಿದ್ದ ಜಾನುವಾರುಗಳನ್ನು ಗಮನಿಸಿದಾಗ ಅಲ್ಲಿ ಎರಡು ಕೋಣಗಳು ಸಾವನಪ್ಪಿದ್ದವು. ನೀರು-ಆಹಾರವಿಲ್ಲದೇ ಬಳಲಿದ್ದ ಇನ್ನಷ್ಟು ಜಾನುವಾರುಗಳನ್ನು ಪೊಲೀಸರು ಕಟುಕರಿಂದ ತಪ್ಪಿಸಿದರು. 12 ಕೋಣದ ಮರಿಗಳ ಪೈಕಿ ಎರಡು ಸಾವನಪ್ಪಿದ್ದರಿಂದ 10 ಜೀವಗಳು ಅಲ್ಲಿ ಸಿಲುಕಿದ್ದವು. ಅವುಗಳಿಗೆ ಪೊಲೀಸರು ನೀರು-ಮೇವು ನೀಡಿ ಉಪಚಾರ ಮಾಡಿದರು.
ಅಕ್ರಮ ಜಾನುವಾರು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಪೊಲೀಸರು ವಶಕ್ಕೆಪಡೆದರು. ಜೊತೆಗೆ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಜಾಕೀರ ಹಾಗೂ ಮನೋಜ ಪಡಿಯಪ್ಪ ಎಂಬಾತರನ್ನು ಬಂಧಿಸಿದರು.