ಶಾಲೆ-ಕಾಲೇಜುಗಳಲ್ಲಿ ಓದುವ ಮಕ್ಕಳಿಗೆ ಅಂಚೆ ಇಲಾಖೆ ಪತ್ರ ಬರೆಯುವ ಅಭಿಯಾನ ನಡೆಸಿದ್ದು, ಉತ್ತಮ ಪತ್ರ ಬರೆದವರಿಗೆ ಮೂರು ಬಹುಮಾನ ನೀಡುವುದಾಗಿ ಘೋಷಿಸಿದೆ. ಉತ್ತಮ ಪತ್ರ ಬರೆದವರಿಗೆ ರಾಜ್ಯಮಟ್ಟದಲ್ಲಿ 25 ಸಾವಿರ ರೂ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ 50 ಸಾವಿರ ರೂ ಬಹುಮಾನ ನೀಡುವುದಾಗಿ ಅಂಚೆ ಇಲಾಖೆ ಭರವಸೆ ನೀಡಿದೆ.
`ಭೂಮಿ ತಾಯಿಗೆ ಒಂದು ಪತ್ರ: ಪ್ರಕೃತಿಯನ್ನು ರಕ್ಷಿಸುವ ನನ್ನ ಭರವಸೆ’ ಎಂಬ ವಿಷಯವಾಗಿ ಪತ್ರ ಬರೆಯಬೇಕು. ಪ್ರತಿಯೊಬ್ಬರು ಸ್ವಂತ ಕೈ ಬರಹದಲ್ಲಿಯೇ ಈ ಪತ್ರ ಬರೆಯಬೇಕು. ಕನ್ನಡ, ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಮಾತ್ರ ಆ ಪತ್ರವಿರಬೇಕು. ಇನ್ಲ್ಯಾಂಡ್ ಲೆಟರ್ ಕಾರ್ಡಿನಲ್ಲಿ 500 ಪದಗಳಿಂದ 1 ಸಾವಿರ ಪದಗಳ ಮಿತಿಗೆ ಒಳಪಟ್ಟು ಈ ಪತ್ರ ಬರೆದಿರಬೇಕು ಎಂಬ ಸೂಚನೆಯಿದೆ.
ಧಾಯ್ ಅಖರ್ ಪತ್ರ ಬರೆಯುವ ಅಭಿಯಾನವನ್ನು ಅಂಚೆ ಇಲಾಖೆ ಆಯೋಜಿಸಿದ್ದು, ಪ್ರತಿಯೊಬ್ಬರು ತಾವು ಬರೆದ ಪತ್ರವನ್ನು ಅಂಚೆ ಇಲಾಖೆಗೆ ಮುಟ್ಟಿಸಿದರೂ ಸಾಕು. ಮಕ್ಕಳ ಜೊತೆ ಹಿರಿಯರಿಗೂ ಸಹ ಪತ್ರ ಬರೆಯಲು ಅವಕಾಶವಿದೆ. ಹಿರಿಯರಿಗಾಗಿ ಪ್ರತ್ಯೇಕ ವಿಭಾಗವಿದ್ದು, ಅಲ್ಲಿನ ಪತ್ರವೂ ಗರಿಷ್ಟ 1 ಸಾವಿರ ಪದಗಳ ಮಿತಿಯಲ್ಲಿರಬೇಕು. ಈ ಸ್ಪರ್ಧೆಗೂ ಪ್ರತ್ಯೇಕ ಬಹುಮಾನವಿದೆ. ಪತ್ರ ಬರೆಯುವವರು ಕರ್ನಾಟಕ ರಾಜ್ಯದಲ್ಲಿ ವಾಸಿಸುವವರಾಗಿರಬೇಕು ಎಂಬ ನಿಯಮವಿದೆ. ಅಕ್ಟೊಬರ್ 31ಕ್ಕೆ ಬರೆದ ಪತ್ರವನ್ನು ಮುಟ್ಟಿಸಲು ಕೊನೆಯ ದಿನವಾಗಿದೆ.
ರಾಜ್ಯಮಟ್ಟದಲ್ಲಿ ಪ್ರತಿ ವಿಭಾಗದಲ್ಲಿ ವಿಜೇತರಿಗೆ ಪ್ರಥಮ 25,000ರೂ, ದ್ವಿತೀಯ 10,000 ರೂ, ತೃತೀಯ 5,000ರೂ ನೀಡಲಾಗುತ್ತದೆ. ರಾಷ್ಟ್ರೀಯ ಮಟ್ಟದಲ್ಲಿ ಪ್ರತಿ ವಿಭಾಗದಲ್ಲಿ ವಿಜೇತರಿಗೆ ಪ್ರಥಮ 50,000 ರೂ, ದ್ವಿತೀಯ 25,000ರೂ ಹಾಗೂ ತೃತೀಯ ಬಹುಮಾನ 10,000ರೂ ನೀಡಲಾಗುತ್ತದೆ. ಪತ್ರಗಳನ್ನು ಯಾವುದೇ ಅಂಚೆ ವಿಭಾಗದ ಹಿರಿಯ ಸೂಪರಿಂಟೆoಡೆoಟ್ ಅಥವಾ ಅಂಚೆ ಕಚೇರಿಗಳ ಅಧೀಕ್ಷಕರಿಗೆ ತಲುಪಿಸಿದರೆ ಸಾಕು.