ಕಾರವಾರದ ಗುತ್ತಿಗೆದಾರರ ಸಂಘದ ಕಚೇರಿಯಲ್ಲಿ 80ನೇ ನೇ ಸ್ವಾತಂತ್ರ್ಯೋತ್ಸವ ಅದ್ಧೂರಿಯಾಗಿ ನಡೆದಿದ್ದು, ಈ ವೇಳೆ ಸೇರಿದ ಗುತ್ತಿಗೆದಾರರೆಲ್ಲರೂ ಸಂಘಟನೆ ವಿಷಯವಾಗಿ ಚರ್ಚಿಸಿದರು. ಬೆಳಗ್ಗೆ ಪಿಕಳೆ ರಸ್ತೆಯಲ್ಲಿರುವ ಗುತ್ತಿಗೆದಾರರ ಸಂಘದ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ, ಸಂಘದ ಸಭೆ ಮಾಡಿದರು.
ಸಂಘದ ಕಚೇರಿ ನವೀಕರಣಕ್ಕೆ ಸಂಬoಧಿಸಿ ಈ ಸಭೆಯಲ್ಲಿ ವಿವಿಧ ಚರ್ಚೆ ನಡೆಯಿತು. ಕಚೇರಿ ನವೀಕರಣಕ್ಕಾಗಿ ಸಂಘದಿoದ ಖರ್ಚು ಮಾಡಲಾದ ಮೊತ್ತವನ್ನು ಲೋಕೋಪಯೋಗಿ ಇಲಾಖೆಯಿಂದ ಮರುಪಾವತಿಯಾಗಿ ಪಡೆಯುವ ಕುರಿತು ಪ್ರಸ್ತಾಪವಾಯಿತು. ಕಾರವಾರದ ಶಾಸಕ ಸತೀಶ್ ಸೈಲ್ ಅವರ ಜೊತೆ ವಿಶೇಷ ಸಭೆ ನಡೆಸಲು ಸಂಘದ ಸದಸ್ಯರು ಹೇಳಿದ್ದು, ಅದಕ್ಕೆ ಪದಾಧಿಕಾರಿಗಳು ಆಸಕ್ತಿವಹಿಸಿದರು.
`ನಗರಸಭೆ ಹಾಗೂ ಇನ್ನಿತರ ಇಲಾಖೆಗಳಲ್ಲಿ ಗುತ್ತಿಗೆದಾರರು ಮಾಡಿದ ಕೆಲಸದ ಬಿಲ್ ಬಾಕಿಯಿದೆ. ಈ ಬಗ್ಗೆ ಅಧಿಕಾರಿಗಳನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಬೇಕು. ಶೀಘ್ರದಲ್ಲಿಯೇ ಬಿಲ್ ಪಾವತಿಗೆ ಒತ್ತಾಯಿಸಬೇಕು’ ಎಂದು ಸದಸ್ಯರು ಸೂಚಿಸಿದರು. ಈ ಬಗ್ಗೆ ನಗರಸಭೆ ಕಮಿಷನರ್ ಅವರನ್ನು ಭೇಟಿ ಮಾಡಿ ಚರ್ಚಿಸುವ ಬಗ್ಗೆ ಎಲ್ಲರೂ ಒಗ್ಗಟ್ಟಿನಿಂದ ನಿರ್ಧರಿಸಿದರು. ಸಂಘದ ಅಧ್ಯಕ್ಷ ವಿಜಯ ಬಿಲಿಯೇ, ಉಪಾಧ್ಯಕ್ಷ ಛತ್ರಪತಿ ಮ್ಹಾಲ್ಸೇಕರ, ಸಹ ಕಾರ್ಯದರ್ಶಿ ಸಂತೋಷ ಸೈಲ್, ನಿಕಟಪೂರ್ವ ಅಧ್ಯಕ್ಷ ಮಾಧವ ನಾಯ್ಕ, ಖಚಾಂಚಿ ಸತೀಶ ವಿಠೋಬಾ ನಾಯ್ಕ ಹಾಗೂ ಸದಸ್ಯರಾದ ದೀಪಕ ನಾಯ್ಕ, ಶಶಿಕಾಂತ ನಾಯ್ಕ, ಜಗದೀಶ ಕೆ. ನಾಯ್ಕ, ದತ್ತಾ ಎಂ ಗುನಗಿ, ಭೋಜರಾಜ್ ದ್ವಾರಸ್ವಾಮಿ, ಉದಯ ವಿ ನಾಯ್ಕ, ರಾಮನಾಥ ನಾಯ್ಕ, ಮನೋಜಕುಮಾರ ನಾಯ್ಕ, ಅನಿಲ ಮ್ಹಾಳಸೇಕರ ಹಾಗೂ ಸಂದೀಪ ಕೊಠಾರಕರ ಅವರು ಸಭೆಯಲ್ಲಿದ್ದರು.