`ಉಪಗೃಹ ಆಧಾರಿತವಾಗಿ ಉತ್ತರ ಕನ್ನಡ ಜಿಲ್ಲೆಯ ಅನೇಕ ಹಳ್ಳಿಗಳನ್ನು ಸೂಕ್ಷ ವಲಯ ಎಂದು ಗುರುತಿಸಲಾಗಿದ್ದು, ದೋಷರಹಿತವಾದ ಇಂಥ ವರದಿಯನ್ನು ತಿರಸ್ಕರಿಸಬೇಕು’ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಗ್ರಹಿಸಿದೆ. ಅಂಕೋಲಾದಲ್ಲಿ ಪ್ರತಿಭಟನೆ ನಡೆಸಿದ ಹೋರಾಟಗಾರರು ಸರ್ಕಾರಕ್ಕೆ ಆಕ್ಷೇಪಣಾ ಪತ್ರ ಸಲ್ಲಿಕೆ ಮಾಡಿದ್ದಾರೆ.
ಅಂಕೋಲೆಯ ಸತ್ಯಾಗ್ರಹ ಸ್ಮಾರಕ ಭವನದಲ್ಲಿ ರವೀಂದ್ರ ನಾಯ್ಕ ಅವರು ಗಾಂಧೀ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ತಹಶೀಲ್ದಾರ ಕಚೇರಿಯವರೆಗೆ ತೆರಳಿ ಆಕ್ಷೇಪಣಾ ಪತ್ರ ಸಲ್ಲಿಸಿದರು. `ಪರಿಸರ ತಜ್ಞರಿಲ್ಲದ ಸಮಿತಿಯಿಂದ ಶಿಫಾರಸ್ಸಾಗಿರುವ ಕಸ್ತೂರಿ ರಂಗನ್ ವರದಿಯಲ್ಲಿ ಭೌತಿಕ ಸರ್ವೆಯಾಗಿಲ್ಲ. ಗ್ರಾಮ ಸಭೆ ನಡೆಸಿಲಲ. 10 ಕಿಮೀ ಬಫೂರ್ ವಲಯವನ್ನು ಸೂಕ್ಷö ಪ್ರದೇಶವೆಂದು ಗುರುತಿಸಿರುವುದು ಅವೈಜ್ಞಾನಿಕ’ ಎಂದವರು ಹೇಳಿದರು.
ಅಭಿಯಾನದ ಸಭೆಯಲ್ಲಿ ಪ್ರಮುಖರಾದ ಅರವಿಂದ ಗೌಡ ಬೇಳ್ಳಿಕೆರಿ, ರಮಾನಂದ ನಾಯ್ಕ, ಮಂಜು ಮರಾಠಿ ನಾಗೂರು , ಪಾಂಡುರoಗ ಗೌಡ, ವಿಜು ಪೀಟರ್ ಪಿಳ್ಳೆ ಆನಂದಗಿರಿ, ಶಂಕರ ನಾಯ್ಕ ಹೊಸಗದ್ದೆ, ಶಂಕರ್ ಕೊಡಿಯಾ ಹಿಲ್ಲೂರು, ಉಮೇಶ್ ನಾಯ್ಕ, ಶಬ್ಬೀರ, ಉದಯ ಗುನಗಾ ಹಿಲ್ಲೂರು, ಬಾಲಚಂದ್ರ ಶೆಟ್ಟಿ, ಬಾಳು ಶೆಟ್ಟಿ ಅಚವೆ, ವಿನೋದ ನಾಯ್ಕ ಅವರ್ಸ, ಚಂದ್ರಕಾoತ್ ನಾಯ್ಕ ಹಟ್ಟಿಕೇರಿ, ರಾಜು ಗೌಡ ಸಕಲಬೇಣ ಇತರರಿದ್ದರು. ವೆಂಕಟರಮಣ ನಾಯ್ಕ ಮಂಜಗುಣಿ, ಸಂದೇಶ ನಾಯ್ಕ ಬ್ರಹ್ಮೂರು, ಶೈಲಾ ವಂದಿಗೆ, ರಾಮದಾಸ ನಾಯ್ಕ ಕುಂಟಗಣಿ, ಸೋಮೇಶ್ವರ ಗೌಡ ಹೊಸಗದ್ದೆ, ನಾಗರಾಜ ನಾಯ್ಕ ಹನ್ಮೂಟ್ಟ, ವಿನೋದ ನಾಯ್ಕ , ಬಾಷಾ ಇಮಾದ್ ಶೇಕ, ಉದಯ ನಾಯ್ಕ ಮುಂತಾದವರು ಪ್ರತಿಭಟನೆ ನೇತೃತ್ವವಹಿಸಿದರು.
Advertisement. Scroll to continue reading.