ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸೋಂದಾ ಮೂಲದ ಮಾಧವ ಪರಾಂಜಪೆ ಅವರಿಗೆ ಮಹಾರಾಷ್ಟ್ರ ಸರ್ಕಾರ `ಮಹಾಕವಿ ಕಾಳಿದಾಸ ಸಂಸ್ಕೃತ ಸಾಧನಾ ಪ್ರಶಸ್ತಿ’ ಘೋಷಿಸಿದೆ. ಸಂಸ್ಕೃತ ಭಾಷೆ, ವೇದಾಧ್ಯಯನ ಹಾಗೂ ಭಾರತೀಯ ಸಾಂಪ್ರದಾಯಿಕ ಜ್ಞಾನಪರಂಪರೆಯ ಸಂರಕ್ಷಣೆ-ಪ್ರಸಾರಕ್ಕಾಗಿ ಶ್ರಮಿಸುತ್ತಿರುವ ಕಾರಣ ಅವರಿಗೆ ಈ ಗೌರವ ದೊರೆತಿದೆ.
ಮಾಧವ ಪರಾಂಜಪೆ ಅವರು ಅನೇಕ ವರ್ಷಗಳಿಂದ ವೇದಾಧ್ಯಯನ, ವೇದಾಧ್ಯಾಪನ, ವೇದ ಪಾರಾಯಣ ಹಾಗೂ ವೇದಸೇವೆಗೆ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಪ್ರಾಚೀನ ಜ್ಞಾನಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕಾಯಕದಲ್ಲಿ ಅವರು ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಗೋಕರ್ಣದ ಕೇಶವಶಾಸ್ತ್ರಿ ಜೋಗ್ಳೇಕರ್ ಗುರುಜಿಯವರ ಮಾರ್ಗದರ್ಶನದ ಜೊತೆ ಮಾಧವ ಪರಾಂಜಪೆ ಅವರ ಗರಡಿಯಲ್ಲಿ ಪಳಗಿದ ಆರು ಮಂದಿ ವಿದ್ಯಾರ್ಥಿಗಳು ದಶಗ್ರಂಥಸಹಿತ ಸಂಪೂರ್ಣ ಜೀವನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಮಹಾರಾಷ್ಟ್ರ ಸರ್ಕಾರ ಸಂಸ್ಕೃತ ಭಾಷೆ, ವೇದಾಧ್ಯಯನ ಹಾಗೂ ಭಾರತೀಯ ಸಾಂಪ್ರದಾಯಿಕ ಜ್ಞಾನಪರಂಪರೆಯ ಸಂರಕ್ಷಣೆ-ಪ್ರಸಾರಕ್ಕಾಗಿ ಶ್ರಮಿಸುವ ಶಿಕ್ಷಕರು, ಪಂಡಿತರು ಹಾಗೂ ಸಂಸ್ಕೃತ ಕಾರ್ಯಕರ್ತರಿಗೆ . `ಮಹಾಕವಿ ಕಾಳಿದಾಸ ಸಂಸ್ಕೃತ ಸಾಧನಾ ಪ್ರಶಸ್ತಿ’ ನೀಡಿ ಗೌರವಿಸುತ್ತಿದೆ. ಈ ಪ್ರಶಸ್ತಿ ಶಿರಸಿ ಸೋಂದಾ ಮೂಲದ ಮಾಧವ ಪರಾಂಜಪೆ ಅವರಿಗೆ ದೊರೆತಿರುವುದು ವೇದಪರಂಪರೆಯ ಸೇವೆಗೆ ಸಂದ ಶ್ರೇಷ್ಠ ಗೌರವ ಎಂದೇ ಬಣ್ಣಿಸಲಾಗಿದೆ. ಕಠಿಣ ಹಾಗೂ ಶ್ರಮಸಾಧ್ಯ ವೇದಾಧ್ಯಯನವನ್ನು ಆರು ಜನ ಶಿಷ್ಯರಿಗೆ ಯಶಸ್ವಿಯಾಗಿ ಕಲಿಸಿ ಪೂರ್ಣಗೊಳಿಸಿದ್ದು ಮಾಧವ ಪರಾಂಜಪೆ ಅವರ ಅಧ್ಯಾಪನ ಕೌಶಲ್ಯ ಮತ್ತು ಗುರುಶಿಷ್ಯ ಪರಂಪರೆಯ ಬದ್ಧತೆಗೆ ಸಾಕ್ಷಿಯಾಗಿದೆ.
Advertisement. Scroll to continue reading.