ಶಿರಸಿ ಬಿಳೂರು ಕಾಲೇಜಿನ ವಿದ್ಯಾರ್ಥಿಗಳು ಈ ದಿನ ದಿಢೀರ್ ಆಗಿ ಪ್ರತಿಭಟನೆ ನಡೆಸಿದ್ದಾರೆ. ಕಾಲೇಜು ಪ್ರಿನ್ಸಿಪಾಲ್ ವಿರುದ್ಧವೇ ಅವರೆಲ್ಲರೂ ಆಕ್ರೋಶವ್ಯಕ್ತಪಡಿಸಿದ್ದಾರೆ. `ಡೌನ್ ಡೌನ್ ಪ್ರಿನ್ಸಿಪಾಲ್’ ಎಂಬ ಘೋಷಣೆಗಳನ್ನು ಕೂಗಿದ್ದು, `ಪ್ರಿನ್ಸಿಪಾಲ್ ಪುಷ್ಪಲತಾ ವರ್ಗಾವಣೆ ಆಗುವವರೆಗೂ ಕಾಲೇಜಿನ ಒಳಗೆ ಕಾಲಿಡಲ್ಲ’ ಎಂದು ಹೇಳಿದ್ದಾರೆ.
`ಪುಷ್ಪಲತಾ ಅವರು ಕೆಟ್ಟ ಪದಗಳಿಂದ ಬೈಯುತ್ತಾರೆ. ಅನಗತ್ಯವಾಗಿ ನಿಂದಿಸುತ್ತಾರೆ’ ಎಂಬುದು ವಿದ್ಯಾರ್ಥಿಗಳ ದೊಡ್ಡ ಆರೋಪ. `ಅವರ ವರ್ತನೆಯಿಂದ ಎಲ್ಲರೂ ಬೇಸತ್ತಿದ್ದು, ಕೂಡಲೇ ಅವರನ್ನು ಇಲ್ಲಿಂದ ವರ್ಗಾಯಿಸಬೇಕು’ ಎಂಬುದು ಪ್ರತಿಭಟನಾಕಾರರ ಮುಖ್ಯ ಬೇಡಿಕೆ. `ಪಾಠ ಮಾಡುವ ಉಪನ್ಯಾಸಕರಿಗೆ ಸಹ ಪ್ರಾಚಾರ್ಯೆ ಬೈಯುತ್ತಾರೆ. ವಿದ್ಯಾರ್ಥಿಗಳ ಮುಂದೆಯೇ ಅವರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ಈ ಎಲ್ಲಾ ವರ್ತನೆಯಿಂದ ಎಲ್ಲರೂ ಬೇಸತ್ತಿದ್ದೇವೆ’ ಎಂದು ಪ್ರತಿಭಟನಾಕಾರರು ದೂರಿದರು.
ಕಾಲೇಜು ಆವರಣ ಹೊರಭಾಗ ಕುಳಿತ ನೂರಾರು ವಿದ್ಯಾರ್ಥಿಗಳು ತಾಸುಗಳ ಕಾಲ ಧರಣಿ ನಡೆಸಿದರು. ತಮ್ಮ ಬೇಡಿಕೆ ಈಡೇರುವವರೆಗೂ ಕಾಲೇಜಿಗೆ ಬರುವುದಿಲ್ಲ ಎಂದು ಪಟ್ಟುಹಿಡಿದರು. `ಪ್ರಾಚಾರ್ಯೆ ವರ್ತನೆಯಿಂದ ಕಾಲೇಜಿನಲ್ಲಿ ಅಸಮಧಾನ ಹೆಚ್ಚಾಗಿದೆ. ಹೀಗಾಗಿ ಅವರು ಇಲ್ಲಿ ಬೇಡ’ ಎಂದು ಆಗ್ರಹಿಸಿದರು. ಸಮಸ್ಯೆ ಬಗೆಹರಿಯದೇ ಇದ್ದರೇ ಹೋರಾಟ ಮುಂದುವರೆಸುವುದಾಗಿಯೂ ಎಚ್ಚರಿಸಿದರು.
Advertisement. Scroll to continue reading.