ಅಂಕೋಲಾದ ಯುವತಿಯರಿಬ್ಬರು ದಿಢೀರ್ ಆಗಿ ಮನೆ ಬಿಟ್ಟು ಹೋಗಿದ್ದಾರೆ. ಅದರಿಂದ ಕುಟುಂಬದವರು ಆತಂಕಕ್ಕೆ ಒಳಗಾಗಿದ್ದಾರೆ.
ಅಂಕೋಲಾ ತಾಲೂಕಿನ ಕೇಣಿ ಗಾಬಿತವಾಡಾದ ಸಾಕ್ಷಿ ಸೂರ್ಯಕಾಂತ ಚೋಡಣಕರ (19) ಅವರು ಕಾಣೆಯಾಗಿದ್ದಾರೆ. ಜೂನ್ 23ರ ಮಧ್ಯಾಹ್ನ ಮನೆಯಿಂದ ಹೊರಗೆ ಹೋದ ಅವರು ಮರಳಿ ಮನೆಗೆ ಬಂದಿಲ್ಲ. ಆತಂಕಕ್ಕೆ ಒಳಗಾದ ಕುಟುಂಬದವರು ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಸಾಕ್ಷಿ ಅವರ ಸುಳಿವು ಸಿಕ್ಕಿಲ್ಲ. ಇದರಿಂದ ಅವರು ಪೊಲೀಸರ ಮೊರೆ ಹೋಗಿದ್ದಾರೆ.
ಅಂಕೋಲಾ ಕುಂಟಕಣಿ ಪಂಚಾಯತ ವ್ಯಾಪ್ತಿಯ ಅಸೊಳ್ಳಿ ಗ್ರಾಮದ ಶ್ರೀದೇವಿ ಈಶ್ವರ ಗೌಡ (18) ಅವರು ಸಹ ದಿಢೀರ್ ಆಗಿ ಕಣ್ಮರೆಯಾಗಿದ್ದಾರೆ. ಜೂನ್ 24ರಂದು ಮುಂಜಾನೆ ತಾಯಿಯ ಔಷಧಿ ತರಲು ಶಿರಸಿ TSS ಆಸ್ಪತ್ರೆಗೆ ಹೋಗುವುದಾಗಿ ಹೇಳಿದ್ದ ಶ್ರೀದೇವಿ ಗೌಡ ಅವರು ಎಲ್ಲಿ ಹೋದರು? ಎಂದು ಯಾರಿಗೂ ಗೊತ್ತಾಗಿಲ್ಲ. ಟಿಎಸ್ಎಸ್ ಆಸ್ಪತ್ರೆಯಲ್ಲಿಯೂ ಅವರು ಆ ದಿನ ಕಾಣಿಸಿಕೊಂಡಿಲ್ಲ. ಶ್ರೀದೇವಿ ಗೌಡ ಅವರ ಕುಟುಂಬದವರು ಸಹ ಸಾಕಷ್ಟು ಹುಡುಕಾಟ ನಡೆಸಿದರೂ ಅದರಿಂದ ಪ್ರಯೋಜನವಾಗಿಲ್ಲ. ಅವರು ಸಹ ಸಹಾಯ ಕೋರಿ ಪೊಲೀಸರ ಮೊರೆ ಹೋಗಿದ್ದಾರೆ.
ಕುಟುಂಬದವರ ದೂರು ಆಧರಿಸಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎರಡು ಯುವತಿರ ಶೋಧ ಶುರುವಾಗಿದೆ. ಈ ಯುವತಿಯರಿಬ್ಬರನ್ನು ಯಾರಾದರೂ ನೋಡಿದರೆ ಇಲ್ಲಿ ಫೋನ್ ಮಾಡಿ: 9480805250