ಹೊಸಕೊಪ್ಪದ ಸುಭಾಷ್ ಗೌಡ ಕಡ್ಲರ್ ಅವರ ಭೂಮಿಗೆ ಹೊಂದಿಕೊOಡಿದ್ದ ರಸ್ತೆಯಲ್ಲಿ ಕೊರ್ಲಕಟ್ಟಾದ ಗುತ್ತಿಗೆದರ ದಿನೇಶ ಹಳ್ಳಿಕೊಪ್ಪ ಅವರು JCB ಓಡಿಸಿದ್ದಾರೆ. ಆ ರಸ್ತೆಯನ್ನು ಅಗೆದು ಮೂರುವರೆ ಅಡಿ ಆಳದಲ್ಲಿ ಹೂತಿದ್ದ ಪೈಪುಗಳನ್ನು ಒಡೆದಿದ್ದಾರೆ.
ಶಿರಸಿಯ ಬನವಾಸಿ ಬಳಿಯ ಹೊಸಕೊಪ್ಪದದಲ್ಲಿ ಸುಭಾಷ್ ಬಂಗಾರಪ್ಪ ಗೌಡ ಕಡ್ಲರ್ ಅವರು ವಾಸವಾಗಿದ್ದಾರೆ. ಅವರು ಹೊಸಕೊಪ್ಪದಲ್ಲಿ ಕೃಷಿ ಭೂಮಿ ಹೊಂದಿದ್ದು, ಆ ಭೂಮಿಗೆ ಹೋಗಲು ಅನಾಧಿಕಾಲದಿಂದಲೂ ಇದ್ದ ದಾರಿ ಬಳಸುತ್ತಿದ್ದಾರೆ. ಸುಭಾಷ್ ಅವರ ಜೊತೆ ಅವರ ಮನೆಗೆ ಬರುವ ಆಳುಗಳು ಹಾಗೂ ಸರಕು ಸಾಮಗ್ರಿ ಸಾಗಿಸುವ ಗಾಡಿಗಳು ಅದೇ ರಸ್ತೆ ಬಳಕೆ ಮಾಡುತ್ತಿವೆ. ಹೀಗಿರುವಾಗ ಶಿರಸಿ ಕಪ್ಪೆಗುಡ್ಡೆ ಹೊಸಕೊಪ್ಪದ ಮಲ್ಲಿಕಾರ್ಜುನ ವೀರಯ್ಯ ಹಿರೇಮಠ್ ಅವರ ಕುಮ್ಮಕ್ಕಿನಿಂದ ಜೆಸಿಬಿ ಮಾಲಕ ದಿನೇಶ ಹಳ್ಳಿಕೊಪ್ಪ ಅವರು ಆ ರಸ್ತೆ ಅಗೆದು ಹಾಳು ಮಾಡಿದ್ದಾರೆ. ಹೊಸಕೊಪ್ಪದ ಚಂದ್ರ ಬಂಗಾರ್ಯ ಚೆನ್ನಯ್ಯ, ಮಂಜುನಾಥ ಈರಪ್ಪ ಗೌಡ, ಸಿದ್ದು ಮಲ್ಲಿಕಾರ್ಜುನ ನಲ್ಲಿಕೊಪ್ಪ ಅವರು ಸಹ ರಸ್ತೆ ಹಾಳು ಮಾಡಲು ಸಹಕಾರ ನೀಡಿದ್ದಾರೆ.
ಜನವರಿ 16ರಂದು ಆ ಊರಿಗೆ ಜೆಸಿಬಿ ಬಂದಿದ್ದು, ರಸ್ತೆ ಹಾಳು ಮಾಡುವ ಕೆಲಸ ಶುರು ಮಾಡಿದೆ. ಆಗ, ಅಲ್ಲಿದ್ದ ಜಯರಾಜ ಗೌಡ ಹಾಗೂ ಅವರ ಮಗ ಪ್ರದೀಪ ಗೌಡ ಅವರು ರಸ್ತೆ ಹಾಳು ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಸುಭಾಷ್ ಗೌಡ ಕಡ್ಲರ್ ಅವರು ಸಹ ಇದನ್ನು ಪ್ರಶ್ನಿಸಿದ್ದಾರೆ. ಆಗ, ಎದುರುದಾರ ಗುಂಪಿನವರು ಅವರೆಲ್ಲರಿಗೂ ಕೆಟ್ಟದಾಗಿ ಬೈದು ನಿಂದಿಸಿದ್ದಾರೆ. ಜೊತೆಗೆ ಕೃಷಿ ಭೂಮಿ ಅನುಕೂಲಕ್ಕಾಗಿ ಮೂರುವರೆ ಅಡಿ ಆಳದಲ್ಲಿ ಹುದುಗಿಸಿದ್ದ ಪೈಪುಗಳನ್ನು ಜೆಸಿಬಿಯಿಂದ ಕಿತ್ತೆಸೆದಿದ್ದಾರೆ. ಈ ಕೆಲಸಕ್ಕೆ ಅಡ್ಡ ಬಂದರೆ ಜೆಸಿಬಿ ಅಡಿಗೆ ಹಾಕಿ ಮಣ್ಣು ಹೊಯ್ಯುವುದಾಗಿಯೂ ಅವರೆಲ್ಲರೂ ಬೆದರಿಸಿದ್ದಾರೆ.
ಸಂತ್ರಸ್ತರು ಈ ಬಗ್ಗೆ ಪೊಲೀಸ್ ದೂರು ಕೊಡುವುದಾಗಿ ಹೇಳಿದ್ದು, `ದೂರು ಕೊಡಲು ಹೊರಟರೆ ಹೋಗುವ ದಾರಿಯಲ್ಲಿಯೇ ಹೆಣವಾಗುತ್ತೀರಿ’ ಎಂದು ಬೆದರಿಸಿದ್ದಾರೆ. ಅದಾದ ನಂತರ ಸಾಕ್ಷಿ ನಾಶಕ್ಕಾಗಿ ಆ ಕ್ಷೇತ್ರದಲ್ಲಿದ್ದ ಮಣ್ಣನ್ನು ಬೇರೆಡೆ ಸಾಗಿಸಿದ್ದಾರೆ. ಈ ಎಲ್ಲಾ ಕೃತ್ಯದಿಂದ ಆತಂಕಕ್ಕೆ ಒಳಗಾದ ಸುಭಾಷ್ ಗೌಡ ಕಡ್ಲರ್ ಅವರು ಕೋರ್ಟಿನ ಮೊರೆ ಹೊಗಿದ್ದಾರೆ. ಖಾಸಗಿ ದೂರು ಸಲ್ಲಿಸಿ, ತಮಗಾದ ಅನ್ಯಾಯಕ್ಕೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ.